Wednesday 17 July 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 13: 58 - 61

ಕೃಷ್ಣಂ ಕದಾಚಿದತಿದೂರಗತಂ ವಯಸ್ಯಾ ಊಚುಃ ಕ್ಷುಧಾsರ್ದ್ದಿತತರಾ ವಯಮಿತ್ಯುದಾರಮ್ ।
ಸೋsಪ್ಯಾಹ ಸತ್ರಮಿಹ ವಿಪ್ರಗಣಾಶ್ಚರನ್ತಿ ತಾನ್ ಯಾಚತೇತಿ ಪರಿಪೂರ್ಣ್ಣಸಮಸ್ತಕಾಮಃ ೧೩.೫೮॥
ಒಮ್ಮೆ ಗೋಕುಲದಿಂದ ಬಹಳದೂರ ಬಂದಿದ್ದರು ಗೋಪಾಲಕರು,
ಬಹಳ ಹಸಿವಿನಿಂದ ಬಳಲುತ್ತಿದ್ದೇವೆಂದು ಕೃಷ್ಣನಲ್ಲಿ ಮೊರೆಯಿಟ್ಟರು.
ಇದೇ ಪರಿಸರದಲ್ಲಿ ಬ್ರಾಹ್ಮಣಗುಂಪು ಮಾಡುತ್ತಿದೆ ಯಾಗ,
ಅವರಲ್ಲಿ ಹೋಗಿ ಬೇಡಿರಿ ಎಂದು ಶ್ರೀಕೃಷ್ಣ ಹೇಳಿದ ಆಗ.

ತಾನ್ ಪ್ರಾಪ್ಯ ಕಾಮಮನವಾಪ್ಯ ಪುನಶ್ಚ ಗೋಪಾಃ ಕೃಷ್ಣಂ ಸಮಾಪುರಥ ತಾನವದತ್ ಸ ದೇವಃ ।
ಪತ್ನೀಃ ಸಮರ್ತ್ಥಯತ ಮದ್ವಚನಾದಿತಿ ಸ್ಮ ಚಕ್ರುಶ್ಚ ತೇ ತದಪಿ ತಾ ಭಗವನ್ತಮಾಪುಃ ॥೧೩.೫೯॥
ಕೃಷ್ಣ ಹೇಳಿದಂತೆ ಬ್ರಾಹ್ಮಣರತ್ತ ಹೊರಟಿತು ಗೋಪಾಲಕರ ಹಿಂಡು,
ತಮ್ಮ ಬಯಕೆ ಈಡೇರಿಸಿಕೊಳ್ಳದೇ ಹಿಂತಿರುಗಿತ್ತು ಗೋವಳರ ದಂಡು.
ಕೃಷ್ಣ ಹೇಳಿದನಾಗ -ಅವರ ಹೆಂಡತಿಯರನ್ನು ಕೇಳಿ,
ಜೊತೆಗೆ ಕೃಷ್ಣನೇ ಹೇಳಿಕಳುಹಿಸಿದ್ದಾನೆಂದು ಹೇಳಿ. 
ಈಬಾರಿ ವಿಪ್ರಪತ್ನಿಯರೆಲ್ಲ ಬಂದರು ಕೃಷ್ಣನ ಬಳಿ.

ತಾಃ ಷಡ್ವಿಧಾನ್ನಪರಿಪೂರ್ಣ್ಣಕರಾಃ ಸಮೇತಾಃ ಪ್ರಾಪ್ತಾ ವಿಸೃಜ್ಯ ಪತಿಪುತ್ರಸಮಸ್ತಬನ್ಧೂನ್ ।
ಆತ್ಮಾರ್ಚ್ಚನೈಕಪರಮಾ ವಿಸಸರ್ಜ್ಜ ಕೃಷ್ಣ ಏಕಾ ಪತಿಪ್ರವಿಧುತಾ ಪದಮಾಪ ವಿಷ್ಣೋಃ ॥೧೩.೬೦॥
ಆ ಸ್ತ್ರೀಯರೆಲ್ಲಾ ಹೊತ್ತು ತಂದಿದ್ದರು ಉತೃಷ್ಟ  ಷಡ್ರಸೋಪೇತವಾದ ಅನ್ನ,
ತಮ್ಮವರ ಬಿಟ್ಟುಬಂದವರ ಕೃಷ್ಣಭಕ್ತಿಯದಾಗಿತ್ತು ಅವಿಚ್ಛಿನ್ನ.
ಅವರೆಲ್ಲರ ಭಾವನೆಯಾಗಿತ್ತು ಕೃಷ್ಣಪೂಜೆಯೊಂದೇ ಅತಿ ಶ್ರೇಷ್ಠ .
ಹಾಗೆ ಬಂದ ಸ್ತ್ರೀಯರನ್ನೆಲ್ಲಾ ಕೃಷ್ಣಪರಮಾತ್ಮ ಸಂತೈಸಿ ಬೀಳ್ಕೊಟ್ಟ,
ಗಂಡನಿಂದ ತಿರಸ್ಕೃತವಾದ ಒಬ್ಬಳಿಗೆ ಮುಕುತಿಯನೆ ಕೊಟ್ಟ.

ಭುಕ್ತ್ವಾsಥ ಗೋಪಸಹಿತೋ ಭಗವಾಂಸ್ತದನ್ನಂ ರೇಮೇ ಚ ಗೋಕುಲಮವಾಪ್ಯ ಸಮಸ್ತನಾಥಃ ।
ಆಜ್ಞಾತಿಲಙ್ಘನಕೃತೇಃ ಸ್ವಕೃತಾಪರಾಧಾತ್ ಪಶ್ಚಾತ್ ಸುತಪ್ತಮನಸೋsಪ್ಯಭವನ್ ಸ್ಮ ವಿಪ್ರಾಃ ॥೧೩.೬೧॥
ಆನಂತರ ಕೃಷ್ಣ ಗೋಪರೊಂದಿಗೆ ಕೂಡಿ ಮಾಡಿದ ಎಲ್ಲಾ ಅನ್ನ ಸ್ವೀಕಾರ,
ಸಮಸ್ತ ಲೋಕದೊಡೆಯ ಗೋಕುಲಕ್ಕೆ ತಿರುಗಿ ಬಂದು ಮಾಡಿದ ವಿಹಾರ.
ಇತ್ತ ಗೋಪಾಲಕರಿಗೆ ಆಹಾರ ನಿರಾಕರಿಸಿದ್ದ ಬ್ರಾಹ್ಮಣವೃಂದ,
ತೀವ್ರವಾಗಿ ನೊಂದರು ಭಗವದಾಜ್ಞೆ ಮೀರಿದ ಪಶ್ಚಾತ್ತಾಪದಿಂದ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula