Thursday 5 April 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 5: 32 -34


ಸ ಪ್ರಾಪ್ಯ ಹೈಮಮೃಗತಾಂ ಬಹುರತ್ನಚಿತ್ರಃ  ಸೀತಾಸಮೀಪ ಉರುಧಾ ವಿಚಚಾರ ಶೀಘ್ರಮ್ ।
ನಿರ್ದೋಷನಿತ್ಯವರಸಂವಿದಪಿ ಸ್ಮ ದೇವೀ ರಕ್ಷೋವಧಾಯ ಜನಮೋಹಕೃತೇ ತಥಾsಹ 
॥೫.೩೨॥
ಮಾರೀಚ ಬಹುರತ್ನಖಚಿತ ಬಂಗಾರದ ಜಿಂಕೆಯಾದ,
ಸೀತೆಯ ಗಮನ ಸೆಳೆಯಲು ಬಳಿಯೇ ಓಡಾಡಿದ.
ನಿತ್ಯ ನಿರ್ದೋಷ ಜ್ಞಾನಸ್ವರೂಪಳಾದ ಲೋಕಮಾತೆ,
ದುಷ್ಟ ಮೋಹನ-ಸಂಹಾರಕ್ಕೆ ಹೀಗೆ ನುಡಿದಳು ಸೀತೆ.
ದೇವೇಮಮಾಶು ಪರಿಗೃಹ್ಯ ಚ ದೇಹಿ ಮೇ ತ್ವಂ ಕ್ರೀಡಾಮೃಗಂ ತ್ವಿತಿ ತಯೋದಿತ ಏವ ರಾಮಃ।
ಅನ್ವಕ್ ಸಸಾರ ಹ ಶರಾಸನಬಾಣಪಾಣಿರ್ಮ್ಮಾಯಾಮೃಗಂ ನಿಶಿಚರಂ ನಿಜಘಾನ ಜಾನನ್ 
॥೫.೩೩॥
ದೇವಾ, ಆಟವಾಡುವುದಕೆ ನಂಗೆ ಆ ಜಿಂಕೆ ಬೇಕು,
ನೀನು ಬೆನ್ನಟ್ಟಿ ಹೋಗಿ ಅದನ ಹಿಡಿದು ತಾ ಸಾಕು".
ಸರ್ವಜ್ಞನಾದ ರಾಮ ಅದರ ಬೆನ್ನಟ್ಟಿ ಹೋಗುವಿಕೆ,
ಕೊಂದದನ  ಮಾಡಿದ ಮುಂದಿನ ಕಾರ್ಯಕೆ ವೇದಿಕೆ.
ತೇನಾsಹತಃ ಶರವರೇಣ ಭೃಷಂ ಮಮಾರ ವಿಕ್ರುಶ್ಯ ಲಕ್ಷ್ಮಣಮುರುವ್ಯಥಯಾ ಸ ಪಾಪಃ ।
ಶ್ರುತ್ವೈವ ಲಕ್ಷ್ಮಣಮಚೂಚುದದುಗ್ರವಾಕ್ಯೈಃ ಸೋsಪ್ಯಾಪ ರಾಮಪಥಮೇವ ಸಚಾಪಬಾಣಃ 
॥೫.೩೪
ರಾಮಬಾಣದಿಂದ ಬಂತು ಮಾರೀಚಗೆ ಮರಣ,
ಕುಯುಕ್ತಿಯಿಂದ ಸಾಯುವಾಗ ಕೂಗಿದ ಹಾ ಲಕ್ಷ್ಮಣ.
ರಾಮನಿರುವಲ್ಲಿಗೆ ಹೋಗಲು ಲಕ್ಷ್ಮಣಗೆ ಸೀತೆಯ ಆದೇಶ,
ಧನುರ್ಧಾರಿಯಾಗಿ ಲಕ್ಷ್ಮಣ ಅನುಸರಿಸಿದ ತನ್ನ ಪಾತ್ರದ ವೇಷ.

No comments:

Post a Comment

ಗೋ-ಕುಲ Go-Kula