ಸ ಪ್ರಾಪ್ಯ ಹೈಮಮೃಗತಾಂ ಬಹುರತ್ನಚಿತ್ರಃ ಸೀತಾಸಮೀಪ ಉರುಧಾ ವಿಚಚಾರ ಶೀಘ್ರಮ್ ।
ನಿರ್ದೋಷನಿತ್ಯವರಸಂವಿದಪಿ ಸ್ಮ ದೇವೀ ರಕ್ಷೋವಧಾಯ ಜನಮೋಹಕೃತೇ ತಥಾsಹ
॥೫.೩೨॥
ಮಾರೀಚ
ಬಹುರತ್ನಖಚಿತ ಬಂಗಾರದ ಜಿಂಕೆಯಾದ,
ಸೀತೆಯ ಗಮನ
ಸೆಳೆಯಲು ಬಳಿಯೇ ಓಡಾಡಿದ.
ನಿತ್ಯ ನಿರ್ದೋಷ
ಜ್ಞಾನಸ್ವರೂಪಳಾದ ಲೋಕಮಾತೆ,
ದುಷ್ಟ
ಮೋಹನ-ಸಂಹಾರಕ್ಕೆ ಹೀಗೆ ನುಡಿದಳು ಸೀತೆ.
ದೇವೇಮಮಾಶು ಪರಿಗೃಹ್ಯ ಚ ದೇಹಿ ಮೇ ತ್ವಂ ಕ್ರೀಡಾಮೃಗಂ ತ್ವಿತಿ
ತಯೋದಿತ ಏವ ರಾಮಃ।
ಅನ್ವಕ್ ಸಸಾರ ಹ ಶರಾಸನಬಾಣಪಾಣಿರ್ಮ್ಮಾಯಾಮೃಗಂ ನಿಶಿಚರಂ ನಿಜಘಾನ
ಜಾನನ್
॥೫.೩೩॥
“ದೇವಾ, ಆಟವಾಡುವುದಕೆ ನಂಗೆ
ಆ ಜಿಂಕೆ ಬೇಕು,
ನೀನು ಬೆನ್ನಟ್ಟಿ
ಹೋಗಿ ಅದನ ಹಿಡಿದು ತಾ ಸಾಕು".
ಸರ್ವಜ್ಞನಾದ ರಾಮ
ಅದರ ಬೆನ್ನಟ್ಟಿ ಹೋಗುವಿಕೆ,
ಕೊಂದದನ ಮಾಡಿದ ಮುಂದಿನ ಕಾರ್ಯಕೆ ವೇದಿಕೆ.
ತೇನಾsಹತಃ ಶರವರೇಣ ಭೃಷಂ ಮಮಾರ ವಿಕ್ರುಶ್ಯ ಲಕ್ಷ್ಮಣಮುರುವ್ಯಥಯಾ ಸ ಪಾಪಃ ।
ಶ್ರುತ್ವೈವ ಲಕ್ಷ್ಮಣಮಚೂಚುದದುಗ್ರವಾಕ್ಯೈಃ ಸೋsಪ್ಯಾಪ
ರಾಮಪಥಮೇವ ಸಚಾಪಬಾಣಃ
॥೫.೩೪ ॥
ರಾಮಬಾಣದಿಂದ ಬಂತು
ಮಾರೀಚಗೆ ಮರಣ,
ಕುಯುಕ್ತಿಯಿಂದ
ಸಾಯುವಾಗ ಕೂಗಿದ ಹಾ ಲಕ್ಷ್ಮಣ.
ರಾಮನಿರುವಲ್ಲಿಗೆ
ಹೋಗಲು ಲಕ್ಷ್ಮಣಗೆ ಸೀತೆಯ ಆದೇಶ,
ಧನುರ್ಧಾರಿಯಾಗಿ
ಲಕ್ಷ್ಮಣ ಅನುಸರಿಸಿದ ತನ್ನ ಪಾತ್ರದ ವೇಷ.
No comments:
Post a Comment
ಗೋ-ಕುಲ Go-Kula