Monday 10 September 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 10: 19 - 27

ಉಚ್ಚೈಃಶ್ರವಾ ನಾಮ ತುರಙ್ಗಮೋsಥ ಕರೀ ತಥೈರಾವತನಾಮಧೇಯಃ ।
ಅನ್ಯೇ ಚ ದಿಕ್ಪಾಲಗಜಾ ಬಭೂವುರ್ವರಂ ತಥೈವಾಪ್ಸರಸಾಂ 
ಸಹಸ್ರಮ್ ॥೧೦.೧೯॥
ನಡೆದಿರಲು ಅಮೃತಕ್ಕಾಗಿ ಸಮುದ್ರಮಥನ,
ಉಚ್ಚೈಶ್ರವಾ ಎಂಬ ಕುದುರೆಯ ಆಗಮನ.
ಐರಾವತ ಎಂಬಾನೆ ದಿಕ್ಪಾಲಗಜಗಳ ಜನನ,
ಸಹಸ್ರ ಅಪ್ಸರೆಯರೂ ಬಂದರಂತೆ ಆ ಕ್ಷಣ.

ತಥಾsಯುಧಾನ್ಯಾಭರಣಾನಿ ಚೈವ ದಿವೌಕಸಾಂ ಪರಿಜಾತಸ್ತರುಶ್ಚ ।
ತಥೈವ ಸಾಕ್ಷಾತ್ ಸುರಭಿರ್ನ್ನಿಶೇಶೋ ಬಭೂವ ತತ್ ಕೌಸ್ತುಭಂ 
ಲೋಕಸಾರಮ್  ॥೧೦. ೨೦ ॥

ಹಾಗೆಯೇ ಬಂದವು ದೇವತೆಗಳ ಆಯುಧಗಳು ಆಭರಣಗಳು,
ಪಾರಿಜಾತ ವೃಕ್ಷ ಕಾಮಧೇನು ಚಂದ್ರ ಕೌಸ್ತುಭ ಕೊಟ್ಟಿತು ಕಡಲು.

ಅಥೇನ್ದಿರಾ ಯದ್ಯಪಿ ನಿತ್ಯದೇಹಾ ಬಭೂವ ತತ್ರಾಪರಯಾ ಸ್ವತನ್ವಾ ।
ತತೋ ಭವಾನ್ ದಕ್ಷಿಣಬಾಹುನಾ ಸುಧಾಕಮಣ್ಡಲುಂ ಕಲಶಂ 
ಚಾಪರೇಣ ॥೧೦.೨೧॥

ಪ್ರಗೃಹ್ಯ ತಸ್ಮಾನ್ನಿರಗಾತ್ ಸಮುದ್ರಾದ್ ಧನ್ವನ್ತರಿರ್ನ್ನಾಮ ಹರಿನ್ಮಣಿದ್ಯುತಿಃ ।
ತತೋ ಭವದ್ಧಸ್ತಗತಂ ದಿತೇಃಸುತಾಃ ಸುಧಾಭರಂ ಕಲಶಂ 
ಚಾಪಜಹ್ರುಃ ॥೧೦.೨೨ ॥

ಆನಂತರ ಆಯಿತು ನಿತ್ಯಶರೀರವುಳ್ಳ ಲಕ್ಷ್ಮೀ ದೇವಿಯ ಆವಿರ್ಭಾವ.
ಒಂದುಕೈಲಿ ಸುಧಾಕಮಂಡಲು ಇನ್ನೊಂದುಕೈಲಿ ಕಲಶ ಹಿಡಿದ ದೇವ.
ನೀಲಮಣಿ ಕಾಂತಿಯುಳ್ಳ ಧನ್ವಂತರಿ ಹೆಸರ ಹೊತ್ತು ಬಂದ,
ಅಪಹರಣವಾಯಿತಾಗ ಅಮೃತಕಲಶ ದಿತಿಯ ಮಕ್ಕಳಿಂದ.

ಮುಕ್ತಂ ತ್ವಯಾ ಶಕ್ತಿಮತಾsಪಿ ದೈತ್ಯಾನ್ ಸತ್ಯಚ್ಯುತಾನ್ ಕಾರಯತಾ ವಧಾಯ ।
ತತೋ ಭವಾನನುಪಮಮುತ್ತಮಂ ವಪುರ್ಬಭೂವ ದಿವ್ಯಪ್ರಮದಾತ್ಮಕಂ 
ತ್ವರನ್ ॥೧೦.೨೩ ॥
ಶ್ಯಾಮಂ ನಿತಮ್ಬಾರ್ಪಿತರತ್ನಮೇಖಲಂ ಜಾಮ್ಬೂನದಾಭಾಮ್ಬರಭೃತ್ ಸುಮದ್ಧ್ಯಮಮ್ ।
ಬೃಹನ್ನಿತಮ್ಬಂ ಕಲಶೋಪಮಸ್ತನಂ 
ಸತ್ಪುಣ್ಡರೀಕಾಯತನೇತ್ರಮುಜ್ಜ್ವಲಮ್ ॥೧೦.೨೪ ॥
ಸಮಸ್ತಸಾರಂ ಪರಿಪೂರ್ಣ್ಣಸದ್ಗುಣಂ ದೃಷ್ಟ್ವೈವ ತತ್ ಸಮ್ಮುಮುಹುಃ ಸುರಾರಯಃ ।
ಪರಸ್ಪರಂ ತೇsಮೃತಹೇತುತೋsಖಿಲಾ ವಿರುದ್ಧ್ಯಮಾನಾಃ ಪ್ರದದುಃ ಸ್ಮ ತೇ 
ಕರೇ ॥ ೧೦.೨೫ ॥

ಸದಾ ಇದ್ದರೂ ನಿನ್ನಲ್ಲಿ ಅಪಾರವಾದ ಶಕ್ತಿ,
ತೋರಲು ದೈತ್ಯರಾದಾಗ ಸತ್ಯದಿಂದ ಚ್ಯುತಿ,
ದೈತ್ಯರ ಸಂಹಾರ ಮಾಡುವ ಕಾರಣ,
ಮಾಡಿದೆ ಅಲೌಕಿಕ ಸ್ತ್ರೀರೂಪ ಧಾರಣ.
ನೀಲವರ್ಣ ಕಟಿಯಲ್ಲಿ ದಿವ್ಯ ರತ್ನದ ಉಡಿದಾರ,
ಧರಿಸಿ ಸುವರ್ಣಕಾಂತಿವುಳ್ಳ ಭವ್ಯ ಪೀತಾಂಬರ.
ವಿಶಾಲ ನಿತಂಬ ಕಳಶದಂಥ ಸ್ತನ ಕಮಲದಳದಂಥ ಕಂಗಳು,
ಉತ್ಕೃಷ್ಟ ಸೌಂದರ್ಯ ಕಂಡ ದೈತ್ಯರಿಗೆ ಮೋಹದ ಅಮಲು.
ಅಮೃತಕ್ಕಾಗಿ ದೈತ್ಯರಲ್ಲೇ ಆಯಿತು ಹೊಡೆದಾಟ,
ಎಲ್ಲರ ಮನದಲ್ಲಿದ್ದು ಪ್ರಚೋದಿಸುವ ನಿನ್ನಾಟ.

ಸಮಂ ಸುಧಾಯಾಃ ಕಲಶಂ ವಿಭಜ್ಯ ನಿಪಾಯಯಾಸ್ಮಾನಿತಿ ವಞ್ಚಿತಾಸ್ತ್ವಯಾ।
ಧರ್ಮ್ಮಚ್ಛಲಂ ಪಾಪಜನೇಷು ಧರ್ಮ್ಮ ಇತಿ ತ್ವಯಾ ಜ್ಞಾಪಯಿತುಂ 
ತದೋಕ್ತಮ್ ॥೧೦.೨೬ ॥
ಯದ್ಯತ್ ಕೃತಂ ಮೇ ಭವತಾಂ ಯದೀಹ ಸಂವಾದ ಏವೋದ್ವಿಭಜೇ ಸುಧಾಮಿಮಾಮ್ ।
ಯಥೇಷ್ಟತೋsಹಂ ವಿಭಜಾಮಿ ಸರ್ವಥಾ ನ ವಿಶ್ವಸಧ್ವಂ ಮಯಿ ಕೇನಚಿತ್ 
ಕ್ವಚಿತ್  ॥೧೦.೨೭ ॥

ಹೀಗೆ ದೈತ್ಯರಿಗಾಯಿತು ನಿನ್ನಿಂದ ಮೋಸ,
ನೀನೇ ಹಂಚೆಂದು ನಿನ್ನ ಕೈಗಿಟ್ಟರು ಕಲಶ.
ಧರ್ಮರಕ್ಷಣೆಗಾಗಿ ಪಾಪಿಷ್ಟರಲ್ಲಿ ಮೀರುವ ಒಪ್ಪಂದ,
ಧರ್ಮಾಧರ್ಮಗಳ ಪಾಲನೆಯ ಬಿಚ್ಚಿಟ್ಟ ಗೋವಿಂದ.
ಮೋಹಿನಿಯಿಂದ ಮೋಹಕ ಮಾತು-ಅಮೃತ ವಿಭಾಗ ವಿಚಾರ,
ಒಪ್ಪಬೇಕು ನನ್ನಿಷ್ಟದಂತೇ ನಡೆಯುವುದು ಹಂಚುವ ವ್ಯಾಪಾರ.
ನನ್ನಲ್ಲಿ ಸರ್ವಥಾ ವಿಶ್ವಾಸ ಇಡಬೇಡಿ ಎಂದ,

ಒಪ್ಪಿತು ಸ್ತ್ರೀಮಾದಕತೆಗೆ ಮರುಳಾದ ದೈತ್ಯವೃಂದ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula