Sunday 16 September 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 10: 28 - 32

ಇತಿ ಪ್ರಹಸ್ಯಾಭಿಹಿತಂ ನಿಶಮ್ಯ ಸ್ತ್ರೀಭಾವಮುಗ್ಧಾಸ್ತು ತಥೇತಿ ತೇsವದನ್ ।
ತತಶ್ಚ ಸಂಸ್ಥಾಪ್ಯ ಪೃಥಕ್ ಸುರಾಸುರಾಂಸ್ತವಾತಿರೂಪೋಚ್ಚಲಿತಾನ್ 
ಸುರೇತರಾನ್ ॥೧೦.೨೮ ॥
ಸರ್ವಾನ್ ಭವದ್ದರ್ಶಿನ ಈಕ್ಷ್ಯ ಲಜ್ಜಿತಾsಸ್ಮ್ಯಹಂ ದೃಶೋ ಮೀಲಯತೇತ್ಯವೋಚಃ ।
ನಿಮೀಲಿತಾಕ್ಷೇಷ್ವಸುರೇಷು ದೇವತಾ ನ್ಯಪಾಯಯಃ ಸಾಧ್ವಮೃತಂ ತತಃ 
ಪುಮಾನ್ ॥೧೦.೨೯॥

ಈ ರೀತಿ ಮುಗುಳ್ನಗುತ್ತಾ ನೀನು ಹೇಳಿದ ಮಾತು,
ಮಂತ್ರಮುಗ್ದರನ್ನಾಗಿ ಇರಿಸಿ ದೈತರನ್ನ ಒಪ್ಪಿಸಿತು.
ಆಗ ನೀನು ದೇವತೆಗಳು ದೈತ್ಯರನ್ನು ಪ್ರತ್ಯೇಕ ಮಾಡಿ,
ನಾಚಿಕೆ ಎನಗೆ ಕಣ್ಮುಚ್ಚಿ ಎಂದು ದೈತ್ಯರಿಗ್ಹೇಳಿದ ಮೋಡಿ.
ಅಸುರರೆಲ್ಲಾ ಕಣ್ಮುಚ್ಚಿಕೊಂಡು ಕುಳಿತಿರಲು ಆಗ,
ದೇವತೆಗಳಿಗೆ ಕರುಣಿಸಿದೆ ಅಮೃತಪಾನದ ಯೋಗ.

ಕ್ಷಣೇನ ಭೂತ್ವಾ ಪಿಬತಃ ಸುಧಾಂ ಶಿರೋ ರಾಹೋರ್ನ್ನ್ಯಕೃನ್ತಶ್ಚ ಸುದರ್ಶನೇನ ।
ತೇನಾಮೃತಾರ್ತ್ಥಂ ಹಿ ಸಹಸ್ರಜನ್ಮಸು ಪ್ರತಪ್ಯ ಭೂಯಸ್ತಪ ಆರಿತೋ ವರಃ ।
ಸ್ವಯಮ್ಭುವಸ್ತೇನ ಭವಾನ್ ಕರೇsಸ್ಯ ಬಿನ್ದುಂ ಸುಧಾಂ ಪ್ರಾಸ್ಯ ಶಿರೋ 
ಜಹಾರ ॥೧೦.೩೦॥

ಸುಧೆ ಬಯಸಿ ದೇವತೆಗಳ ಸಾಲಲ್ಲಿ ರಾಹು ಬಂದ;ನೀನಾಗ ಕಂಡೆ ಪುರುಷರೂಪದಿಂದ,
ಕೊಟ್ಟೆ ಅವನಿಗೊಂದು ಸುಧಾಬಿಂದು ಸುದರ್ಶನದಿಂದ ಮಾಡಿದೆಯವನ ಶಿರಚ್ಛೇದ.
ಹಿಂದೆ ಅಮೃತಕ್ಕಾಗಿ ಸಾವಿರ ಜನ್ಮಗಳಲ್ಲಿ ರಾಹುವಿನ  ತಪಸ್ಸಿತ್ತು,
ಬ್ರಹ್ಮವರವಿದ್ದವಗೆ ಸುಧಾಹನಿಕೊಟ್ಟು ಮಗನ ವರ ಗೌರವಿಸಿದ ಗತ್ತು.

ಶಿರಸ್ತು ತಸ್ಯ ಗ್ರಹತಾಮವಾಪ ಸುರೈಃ ಸಮಾವಿಷ್ಟಮಥೋ ಸಬಾಹು ।
ಕ್ಷಿಪ್ತಃ ಕಬನ್ಧೋsಸ್ಯ ಶುಭೋದಸಾಗರೇ ತ್ವಯಾ ಸ್ಥಿತೋsದ್ಯಾಪಿ ಹಿ ತತ್ರ 
ಸಾಮೃತಃ  ॥೧೦.೩೧॥

ಆ ರಾಕ್ಷಸನ  ಶಿರ ದೇವತೆಗಳಿಂದ ಪ್ರವಿಷ್ಟವಾಗಿ ಗ್ರಹವಾದ ಪ್ರಸಂಗ,
ಶುಭೋದಸಾಗರಕ್ಕೆಸೆಯಲ್ಪಟ್ಟು ಇಂದಿಗೂ ಇರುವ ಅವನದೇಹದ ಮುಂಡಭಾಗ.

ಅಥಾಸುರಾಃ ಪ್ರತ್ಯಪತನ್ನುದಾಯುಧಾಃ ಸಮಸ್ತಶಸ್ತೇ ಚ ಹತಾಸ್ತ್ವಯಾ ರಣೇ ।
ಕಲಿಸ್ತು ಸ ಬ್ರಹ್ಮವರಾದಜೇಯೋ ಹ್ಯೃತೇ ಭವನ್ತಂ ಪುರುಷೇಷು 
ಸಂಸ್ಥಿತಃ  ॥೧೦.೩೨॥

ದೈತ್ಯರೆಲ್ಲರೂ ನಿನ್ನೆದುರು ಬಂದರು ಆಯುಧ ಸಮೇತ,
ಬಂದವರೆಲ್ಲಾ ನಿನ್ನಿಂದ ಸಂಹಾರವಾಗಿ ಆದರು ಮೃತ.
ನಿನ್ನ ಬಿಟ್ಟು ಇನ್ನೊಬ್ಬರಿಂದ ಗೆಲ್ಲಲಾಗದೆಂದು ಕಲಿಗೆ ಬ್ರಹ್ಮನ ವರ,
ನೀನು,ಬ್ರಹ್ಮವಾಯುಗಳ ಬಿಟ್ಟು ಎಲ್ಲ ಪುರುಷರಲ್ಲಿ ಕಲಿಯ  ವ್ಯಾಪಾರ. 

No comments:

Post a Comment

ಗೋ-ಕುಲ Go-Kula