Sunday 16 September 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 10: 33 - 37

ತಸ್ಯಾರ್ದ್ಧದೇಹಾತ್ ಸಮಭೂದಲಕ್ಷ್ಮೀಸ್ತತ್ಪುತ್ರಕಾ ದೋಷಗಣಾಶ್ಚ ಸರ್ವಶಃ ।
ಅಥೇನ್ದಿರಾ ವಕ್ಷಸಿ ತೇ ಸಮಾಸ್ಥಿತಾ ತ್ವತ್ ಕಣ್ಠಗಂ ಕೌಸ್ತುಭಮಾಸ 
ಧಾತಾ ॥೧೦.೩೩॥

ಕಲಿಯ ಅರ್ಧದೇಹದಿಂದ ಅವನಾರ್ಧಾಂಗಿ ಅಲಕ್ಷ್ಮಿ ಹುಟ್ಟಿಬಂದಳು,
ಆನಂತರ ಬಂದದ್ದವರ ಮಕ್ಕಳಾದ ಸರ್ವದೋಷಗಳ ಅಭಿಮಾನಿಗಳು.
ಆವಿರ್ಭವಿಸಿದ ಶ್ರೀಲಕ್ಷ್ಮಿ ಆಶ್ರಯ ಪಡೆದದ್ದು ನಿನ್ನೆದೆಯ ಜಾಗ,
ಬ್ರಹ್ಮಾಭಿಮಾನಿಕವಾದ ಕೌಸ್ತುಭ ಸೇರಿದ್ದು ನಿನ್ನ  ಕಂಠಭಾಗ.

ಯಥಾವಿಭಾಗಂ ಚ ಸುರೇಷು ದತ್ತಾಸ್ತ್ವಯಾ ತಥಾsನ್ಯೇsಪಿ ಹಿ ತತ್ರ ಜಾತಾಃ ।
ಇತ್ಥಂ ತ್ವಯಾ ಸಾಧ್ವಮೃತಂ ಸುರೇಷು ದತ್ತಂ ಹಿ ಮೋಕ್ಷಸ್ಯ 
ನಿದರ್ಶನಾಯ ॥೧೦.೩೪॥

ದೇವತೆಗಳಿಗೂ ನೀನು ಅಮೃತ ಉಣಿಸಿದ್ದು ತಾರತಮ್ಯಾನುಸಾರ,
ಹಾಗೇ ನೀನು ಅಮೃತ ಹಂಚಿದ್ದು ಮೋಕ್ಷಕ್ಕೆ ನಿದರ್ಶನವಾದ ವ್ಯಾಪಾರ.

ಭವೇದ್ಧಿ ಮೋಕ್ಷೋ ನಿಯತಂ ಸುರಾಣಾಂ ನೈವಾಸುರಾಣಾಂ ಸ ಕಥಞ್ಚನ ಸ್ಯಾತ್ ।
ಉತ್ಸಾಹಯುಕ್ತಸ್ಯ ಚ ತತ್ ಪ್ರತೀಪಂ ಭವೇದ್ಧಿ ರಾಹೋರಿವ 
ದುಃಖರೂಪಮ್ ॥೧೦.೩೫॥

ದೇವತೆಗಳಿಗೆ ಮೋಕ್ಷವು ನಿಯತ -ನಿಶ್ಚಿತ,
ಅಸುರರಿಗೆಂದೂ ಮೋಕ್ಷವಿಲ್ಲೆಂಬುದು ಖಚಿತ.
ಹಾಗೊಮ್ಮೆ ರಾಹುವಿನಂತಾದರೆ ಯಾರಾದರೂ ಉತ್ಸಾಹಭರಿತ,
ಅವರಿಗೊದಗುವ ಪರಿಣಾಮ-ಗತಿಯದು ದುಃಖದಾಯಕ ವಿಪರೀತ.

ಕಲಿಸ್ತ್ವಯಂ ಬ್ರಹ್ಮವರಾದಿದಾನೀಂ ವಿಬಾಧತೇsಸ್ಮಾನ್ ಸಕಲಾನ್ ಪ್ರಜಾಶ್ಚ।
ಅಜ್ಞಾನಮಿತ್ಥ್ಯಾಮತಿರೂಪತೋsಸೌ ಪ್ರವಿಶ್ಯ 
ಸಜ್ಜ್ಞಾನವಿರುದ್ಧರೂಪಃ ॥೧೦.೩೬॥

ಈ ರೀತಿ ಬ್ರಹ್ಮವರದಿಂದ ಅವಧ್ಯನಾದ ಕಲಿಯ ವ್ಯಾಪಾರ,
ಬಾಧಕನಾಗಿ ಜ್ಞಾನಕ್ಕೆ-ಕಾಡುತ್ತಿರುವ ವಿಪರೀತಜ್ಞಾನ ಅಜ್ಞಾನದ್ವಾರ.

ತ್ವದಾಜ್ಞಯಾ ತಸ್ಯ ವರೋsಬ್ಜಜೇನ ದತ್ತಃ ಸ ಆವಿಶ್ಯ ಶಿವಂ ಚಕಾರ ।
ಕದಾಗಮಾಂಸ್ತಸ್ಯ ಕುಯುಕ್ತಿಬಾಧಾನ್ ನಹಿ ತ್ವದನ್ಯಶ್ಚರಿತುಂ 
ಸಮರ್ತ್ಥಃ ॥೧೦.೩೭॥

ಬ್ರಹ್ಮದೇವ ಕಲಿಗೆ ವರ ಕೊಟ್ಟದ್ದು ಪಾಲಿಸಿ ನಿನ್ನ ಆಜ್ಞೆ,
ಅವ ಶಿವನಲ್ಲಿ ಪ್ರವೇಶಿಸಿ ಮಾಡಿದ ದುಷ್ಟಶಾಸ್ತ್ರಗಳ ರಚನೆ.
ಅವನ ಕುಯುಕ್ತಿಗಳ ಖಂಡನ ಮಾಡಬಲ್ಲವ ನೀನೊಬ್ಬನೇ.

No comments:

Post a Comment

ಗೋ-ಕುಲ Go-Kula