Sunday 16 September 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 10: 42 - 46

ವಸಿಷ್ಠನಾಮಾ ಕಮಳೋದ್ಭವಾತ್ಮಜಃ ಸುತೋsಸ್ಯ ಶಕ್ತಿಸ್ತನಯಃ ಪರಾಶರಃ ।
ತಸ್ಯೋತ್ತಮಂ ಸೋsಪಿ ತಪೋsಚರದ್ಧರಿಃ ಸುತೋ ಮಮ ಸ್ಯಾದಿತಿ 
ತದ್ಧರಿರ್ದ್ದದೌ  ॥೧೦.೪೨॥

ಬ್ರಹ್ಮನಮಗ ವಸಿಷ್ಠ, ವಸಿಷ್ಠರ ಮಗನಾದವ  ಶಕ್ತಿಮುನಿ,
ಶಕ್ತಿಯಮಗ ಪರಾಶರ;ಹರಿ ತನ್ನ ಮಗನಾಗಲೆಂದು ತಪಗೈದ ಜ್ಞಾನಿ.
ಅವನ ಉತ್ಕೃಷ್ಟ ತಪವ ಮೆಚ್ಚಿದ ಶ್ರೀಹರಿ,
ಪರಾಶರನ ಅಭೀಷ್ಟ ಅನುಗ್ರಹಿಸಿದ ಪರಿ.

ಉವಾಚ ಚೈನಂ ಭಗವಾನ್ ಸುತೋಷಿತೋ ವಸೋರ್ಮ್ಮದೀಯಸ್ಯ ಸುತಾsಸ್ತಿ ಶೋಭನಾ ।
ವನೇ ಮೃಗಾರ್ತ್ಥಂ ಚರತೋsಸ್ಯ ವೀಯ್ಯಂ ಪಪಾತ ಭಾರ್ಯ್ಯಾಂ ಮನಸಾ 
ಗತಸ್ಯ  ॥೧೦.೪೩॥

ತಚ್ಛ್ಯೇನಹಸ್ತೇ ಪ್ರದದೌ ಸ ತಸ್ಯೈ ದಾತುಂ ತದನ್ಯೇನ ತು ಯುದ್ಧ್ಯತೋsಪತತ್ ।
ಜಗ್ರಾಸ ತನ್ಮತ್ಸ್ಯವಧೂರ್ಯ್ಯಮಸ್ವಸುರ್ಜ್ಜಲಸ್ಥಮೇನಾಂ ಜಗೃಹುಶ್ಚ 
ದಾಶಾಃ  ॥೧೦.೪೪॥

ತದ್ಗರ್ಭತೋsಭೂನ್ಮಿಥುನಂ ಸ್ವರಾಜ್ಞೇ ನ್ಯವೇದಯನ್ ಸೋsಪಿ ವಸೋಃ ಸಮರ್ಪ್ಪಯತ್ ।
ಪುತ್ರಂ ಸಮಾದಾಯ ಸುತಾಂ ಸ ತಸ್ಮೈ ದದೌ ಸುತೋsಭೂದಥ 
ಮತ್ಸ್ಯರಾಜಃ ॥೧೦.೪೫॥

ಕನ್ಯಾ ತು ಸಾ ದಾಶರಾಜಸ್ಯ ಸದ್ಮನ್ಯವರ್ದ್ಧತಾತೀವ ಸುರೂಪಯುಕ್ತಾ ।
ನಾಮ್ನಾ ಚ ಸಾ ಸತ್ಯವತೀತಿ ತಸ್ಯಾಂ ತವಾsತ್ಮಜೋsಹಂ 
ಭವಿತಾಸ್ಮ್ಯಜೋsಪಿ ॥೧೦.೪೬॥

ಪರಾಶರನ ತಪಸ್ಸಿನಿಂದ ಅತ್ಯಂತ ಸಂತಸಗೊಂಡ ಶ್ರೀಹರಿ,
ತನ್ನ ಭಕ್ತ ವಸುರಾಜ ಪುತ್ರಿಯ ಕಥೆ ಹೇಳಿ ಬಿಚ್ಚಿಟ್ಟ ಪರಿ.
ಕಾಡಿನಲ್ಲಿ ತಿರುಗುತ್ತಿದ್ದ ವಸುರಾಜ ಬೇಟೆಯ ಕಾರಣ,
ಮಾನಸಿಕವಾಗಿ ಹೆಂಡತಿಯೊಡನೆ ಆದಾಗ ಮಿಲನ.
ಆ ಕಾರಣದಿಂದಾಯಿತು ಅವನ ವೀರ್ಯ ಸ್ಖಲನ.
ರೇತಸ್ಸನ್ನು ಗಿಡುಗಗಿತ್ತ ರಾಜ ತನ್ನ ಹೆಂಡತಿಗೆ ಕೊಡಲ್ಹೇಳಿದ,
ಅದಕ್ಕೆದುರಾದ ಇನ್ನೊಂದು ಗಿಡುಗದೊಂದಿಗೆ ಆಯಿತಾಗ ಯುದ್ಧ.
ಗಿಡುಗನಲ್ಲಿದ್ದ ವೀರ್ಯ ಯಮುನಾ ನದಿಗೆ ಬಿತ್ತು,
ಬಿದ್ದ ಆ ರೇತಸ್ಸನ್ನು ಹೆಣ್ಣು ಮೀನೊಂದು ನುಂಗಿತು.
ಅಂಬಿಗರಿಗೆ ಸಿಕ್ಕ ಮೀನಲ್ಲಿ ಸಿಕ್ಕಿದ್ದು ಅವಳಿಜವಳಿ ಮಕ್ಕಳು,
ಮಾಡಿದರು ಆ ಮಕ್ಕಳ ತಮ್ಮೊಡೆಯ ದಾಶರಾಜನ ಪಾಲು.
ದಾಶರಾಜ ಆ ಮಕ್ಕಳನ್ನು ವಸುರಾಜಗೇ ಕೊಟ್ಟ,
ವಸು ಗಂಡನ್ನಿಟ್ಟುಕೊಂಡು ಹೆಣ್ಣನ್ನ ದಾಶಗೇ ಬಿಟ್ಟ.
ಗಂಡುಮಗು ಮತ್ಸ್ಯರಾಜನಾಗಿ -ವಿರಾಟನಾದ ಗತಿ,
ಹೆಣ್ಣು ಬೆಳೆದಾದಳು ರೂಪವತಿ -ಅವಳೇ ಸತ್ಯವತಿ .
ಪರಾಶರ ಮುನಿಯ ಮೇಲಿನ ಅನುಗ್ರಹದಿಂದ ಭಗವಂತ,
ಸತ್ಯವತಿಯಲ್ಲಿ ನಿನ್ನ ಮಗನಾಗಿ ಬರುವೆನೆಂಬ ಮಾತಿತ್ತ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula