Sunday 16 September 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 10: 38 - 41

ವೇದಾಶ್ಚ ಸರ್ವೇ ಸಹಶಾಸ್ತ್ರಸಙ್ಘಾ ಉತ್ಸಾದಿತಾಸ್ತೇನ ನ ಸನ್ತಿ ತೇsದ್ಯ ।
ತತ್ ಸಾಧು ಭೂಮಾವವತೀರ್ಯ್ಯ ವೇದಾನುದ್ಧೃತ್ಯ ಶಾಸ್ತ್ರಾಣಿ ಕುರುಷ್ವ 
ಸಮ್ಯಕ್  ॥೧೦.೩೮॥

ಕಲಿಪ್ರವೇಶದಿಂದ ಆಗಿದೆ ಸಕಲ ವೇದಶಾಸ್ತ್ರಗಳ ನಾಶ,
ಅವನ್ನುಳಿಸಿ ಬಿತ್ತಲು ಭುವಿಯಲ್ಲಾಗಬೇಕು ನಿನ್ನ ಪ್ರವೇಶ.
ನಿನ್ನಿಂದಾಗಬೇಕಿದೆ ವೇದಗಳ ಸಂಪಾದನ,
ನೀಡಬೇಕಿದೆ  ವೇದ ಶಾಸ್ತ್ರಗಳ ಸುಜ್ಞಾನ.

ಅದೃಶ್ಯಮಜ್ಞೇಯಮತರ್ಕ್ಕ್ಯರೂಪಂ ಕಲಿಂ ನಿಲೀನಂ ಹೃದಯೇsಖಿಲಸ್ಯ ।
ಸಚ್ಛಾಸ್ತ್ರಶಸ್ತ್ರೇಣ ನಿಹತ್ಯ ಶೀಘ್ರಂ ಪದಂ ನಿಜಂ ದೇಹಿ 
ಮಹಾಜನಸ್ಯ  ॥೧೦.೩೯॥

ಕಲಿಯದು ಕಾಣದ ತಿಳಿಯದ ಊಹಿಸಲಾಗದ ರೂಪ,
ಸಚ್ಚಾಸ್ತ್ರಗಳ ಶಸ್ತ್ರದಿಂದ ಕೊಂದವನ ಕಳೆ ಭಕ್ತರ ತಾಪ.

ಋತೇ ಭವನ್ತಂ ನಹಿ ತನ್ನಿಹನ್ತಾ ತ್ವಮೇಕ ಏವಾಖಿಲಶಕ್ತಿಪೂರ್ಣ್ಣಃ ।
ತತೋ ಭವನ್ತಂ ಶರಣಂ ಗತಾ ವಯಂ ತಮೋನಿಹತ್ಯೈ 
ನಿಜಭೋಧವಿಗ್ರಹಮ್ ॥೧೦.೪೦॥

ಕಲಿಯನ್ನು ಕೊಲ್ಲಲು ಇನ್ನೊಬ್ಬರಿಲ್ಲ ಸಮರ್ಥ,
ಸ್ವರೂಪಜ್ಞಾನವೇ ಮೈದಾಳಿದ ನೀನೇ ಸರ್ವಶಕ್ತ.
ನಮ್ಮ ಅಜ್ಞಾನದ ನಾಶವಾಗಬೇಕಾದ ಕಾರಣ,
ಶರಣಾಗಿದ್ದೇವೆ ನಿನ್ನಲ್ಲಿ --ಆಗಲಿ ನಿನ್ನವತರಣ.

ಇತೀರಿತಸ್ತೈರಭಯಂ ಪ್ರದಾಯ ಸುರೇಶ್ವರಾಣಾಂ ಪರಮೋsಪ್ರಮೇಯಃ ।
ಪ್ರಾದುರ್ಭಬೂವಾಮೃತಭೂರಿಳಾಯಾಂ 
ವಿಶುದ್ಧವಿಜ್ಞಾನಘನಸ್ವರೂಪಃ  ॥೧೦.೪೧॥

ಈ ರೀತಿ ಪ್ರಾರ್ಥಿಸಲ್ಪಟ್ಟ ದೇವತೆಗಳಿಂದ,
ಅವರೆಲ್ಲರಿಗೆ ಇತ್ತ ಅಭಯದ ಆನಂದ.
ಉತ್ಕೃಷ್ಟ ಅಪ್ರಮೇಯ ಗಟ್ಟಿಸ್ವರೂಪದ ಹೂರಣ,
ಸತ್ಯ-ತತ್ವದ ಉದ್ಧಾರಕ್ಕೆ ಅವತರಿಸಿದ ನಾರಾಯಣ.

No comments:

Post a Comment

ಗೋ-ಕುಲ Go-Kula