Thursday 7 February 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11: 226 - 229


ತತ್ ತ್ವಂ ಭವಸ್ವಾsಶು ಚ ದೇವಕೀಸುತಸ್ತಥೈವ ಯೋ ದ್ರೋಣನಾಮಾ ವಸುಃ ಸಃ ।
ಸ್ವಭಾರ್ಯ್ಯಯಾ ಧರಯಾ ತ್ವತ್ಪಿತೃತ್ವಂ ಪ್ರಾಪ್ತುಂ ತಪಸ್ತೇಪ ಉದಾರಮಾನಸಃ ॥೧೧.೨೨೬॥

ಹಾಗಾಗಿ ಭಗವಂತ ನೀನು ಬೇಗ ದೇವಕಿಯ ಮಗನಾಗಿ ಜನಿಸು,
ದ್ರೋಣನೆಂಬ ವಸು ನಿನಗೆ ತಂದೆಯಾಗಬೇಕೆಂದು ಮಾಡಿದ್ದ ತಪಸ್ಸು.
ಪತ್ನಿಯಾದ ಧರೆಯೊಂದಿಗೆ ತಪಸ್ಸನ್ನಾಚರಿಸಿದ ಇಬ್ಬರದೂ ಸುಮನಸ್ಸು.

ತಸ್ಮೈ ವರಃ ಸ ಮಯಾ ಸನ್ನಿಸೃಷ್ಟಃ ಸ ಚಾsಸ ನನ್ದಾಖ್ಯ ಉತಾಸ್ಯ ಭಾರ್ಯ್ಯಾ ।
ನಾಮ್ನಾ ಯಶೋದಾ ಸ ಚ ಶೂರತಾತಸುತಸ್ಯ ವೈಶ್ಯಾಪ್ರಭವೋsಥ ಗೋಪಃ ॥೧೧.೨೨೭ ॥

ಅವನಿಗೆ ನನ್ನಿಂದ ಆಯಿತು ವರಪ್ರದಾನ,
ನಂದನೆಂಬ ಹೆಸರಿಂದಾಗಿದೆ ಅವನ ಜನನ.
ಅವನ ಪತ್ನಿಯಾಗಿ ಹುಟ್ಟಿದ ಧರೆಗೆ ಯಶೋದೆ ಎಂದು ಹೆಸರು,
ಶೂರಪಿತಪುತ್ರ ರಾಜಾಧಿದೇವನ ವೈಶ್ಯಪತ್ನಿಯಲ್ಲಿ ನಂದನಾದ ಬಸಿರು.

ತೌ ದೇವಕೀವಸುದೇವೌ ಚ ತೇಪತುಸ್ತಪಸ್ತ್ವದೀಯಂ ಸುತಮಿಚ್ಛಮಾನೌ ।
ತ್ವಾಮೇವ ತಸ್ಮಾತ್ ಪ್ರಥಮಂ ಪ್ರದರ್ಶ್ಯ ತತ್ರ ಸ್ವರೂಪಂ  ತತೋ ವ್ರಜಂ ವ್ರಜ ॥೧೧.೨೨೮॥

ಆ ದೇವಕಿ ಮತ್ತು ವಸುದೇವರು ನಿನ್ನ ಮಗನಾಗಿ ಹೊಂದಲು ಮಾಡಿದ್ದಾರೆ ತಪಸ್ಸು,
ಮೊದಲು ಕೃಷ್ಣನಾಗಿ ಅವರಲ್ಲಿ ಹುಟ್ಟಿ ನಂತರ ನಂದಗೋಕುಲದಿ ನಿನ್ನ ರೂಪ ತೋರಿಸು.

ಇತೀರಿತೇ ಸೋsಬ್ಜಭವೇನ ಕೇಶವಸ್ತಥೇತಿ ಚೋಕ್ತ್ವಾ ಪುನರಾಹ ದೇವತಾಃ ।
ಸರ್ವೇ ಭವನ್ತೋ ಭವತಾsಶು ಮಾನುಷೇ ಕಾರ್ಯ್ಯಾನುಸಾರೇಣ ಯಥಾನುರೂಪತಃ ॥೧೧.೨೨೯॥

ಹೀಗೆ ಬ್ರಹ್ಮದೇವ ಹೇಳಿದ ಮಾತಿಗೆ,
ಭಗವಂತ ನಾರಾಯಣನಿಂದ ಒಪ್ಪಿಗೆ.
ಆಗಲಿರುವ ಧರ್ಮಸಂಸ್ಥಾಪನಾ ಯಜ್ಞ,
ಭಗವಂತನಿಂದಾಯ್ತು ದೇವತೆಗಳಿಗೆ ಆಜ್ಞ.
ದೇವತೆಗಳೇ ನೀವೆಲ್ಲರೂ ಬೇಗನೆ ಕಾರ್ಯಾನುಸಾರ,
ಹುಟ್ಟಿರಿ ಭುವಿಯಲ್ಲಿ ಮನುಷ್ಯರಾಗಿ ಯೋಗ್ಯತಾನುಸಾರ.

No comments:

Post a Comment

ಗೋ-ಕುಲ Go-Kula