Tuesday 26 February 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 12: 01 - 03


ಮಹಾಭಾರತ ತಾತ್ಪರ್ಯ ನಿರ್ಣಯ 
                                          ದ್ವಾದಶೊsಧ್ಯಾಯಃ                                              [ಪಾಣ್ಡವೋತ್ಪತ್ತಿಃ]


                                                                               [ಪಾಣ್ಡವೋತ್ಪತ್ತಿಃ]
ಬಭೂವ ಗನ್ಧರ್ವಮುನಿಸ್ತು ದೇವಕಃ ಸ ಆಸ ಸೇವಾರ್ತ್ಥಮಥಾsಹುಕಾದ್ಧರೇಃ ।
ಸ ಉಗ್ರಸೇನಾವರಜಸ್ತಥೈವ ನಾಮಾಸ್ಯ ತಸ್ಮಾದಜನಿ ಸ್ಮ ದೇವಕೀ ॥೧೨.೦೧॥

ದೇವಕನೆಂಬ ಹೆಸರಿನ ಗಂಧರ್ವ ಮುನಿಯಿದ್ದ,
ಹರಿಸೇವೆಗೆ ಆಹುಕ ಯಾದವನಲ್ಲಿ ಹುಟ್ಟಿಬಂದ.
ಉಗ್ರಸೇನನ ತಮ್ಮನಾದ ಅವನಿಗೆ ದೇವಕನೆಂದೇ ನಾಮ,
ಆ ದೇವಕನಿಂದ ದೇವಕಿ ಹುಟ್ಟಿಬಂದದ್ದು ದೈವ ನಿಯಮ.

ಅನ್ಯಾಶ್ಚ ಯಾಃ ಕಾಶ್ಯಪಸ್ಯೈವ ಭಾರ್ಯ್ಯಾ ಜ್ಯೇಷ್ಠಾಂ ತು ತಾಮಾಹುಕ ಆತ್ಮಪುತ್ರೀಮ್ ।
ಚಕಾರ ತಸ್ಮಾದ್ಧಿ ಪಿತೃಷ್ವಸಾ ಸಾ ಸ್ವಸಾ ಚ ಕಂಸಸ್ಯ ಬಭೂವ ದೇವಕೀ ॥೧೨.೦೨॥

ಯಾರ್ಯಾರು ಕಾಶ್ಯಪಮುನಿಯ ಹೆಂಡಿರಾಗಿ ಇದ್ದರು,
ಅವರೆಲ್ಲಾ ದೇವಕಿಯ ತಂಗಿಯರಾಗಿ ಹುಟ್ಟಿ ಬಂದರು.
ದತ್ತು ತೆಗೆದುಕೊಂಡ ಆಹುಕನಿಗೆ ದೇವಕಿಯಾದಳು ಮಗಳು,
ಹಾಗೆಯೇ ದೇವಕಿ ಕಂಸನಿಗೆ ಅತ್ತೆಯೂ ತಂಗಿಯೂ ಆದಳು.

ಸೈವಾದಿತಿರ್ವಸುದೇವಸ್ಯ ದತ್ತಾ ತಸ್ಯಾ ರಥಂ ಮಙ್ಗಲಂ ಕಂಸ ಏವ ।
̐ಯ್ಯಾಪಯಾಮಾಸ ತದಾ ಹಿ ವಾಯುರ್ಜ್ಜಗಾದ ವಾಕ್ಯಂ ಗಗನಸ್ಥಿತೋsಮುಮ್ ॥೧೨.೦೩॥

ಹೀಗೆ ದೇವಕಿಯಾಗಿ ಹುಟ್ಟಿದ ಅದಿತಿ,
ವಸುದೇವನ ವರಿಸಿ ಆದಳವನ ಸತಿ.
ಅವಳ ಮದುವೆಯ ಮೆರವಣಿಗೆಯ ರಥ,
ಕಂಸನೇ ನಡೆಸುವಂತಿತ್ತು ಅದು ವಿಧಿಲಿಖಿತ.
ಆಗೊಂದು ಆಕಾಶದಿಂದ ತೂರಿಬಂದ ಮಾತು,
ಮುಖ್ಯಪ್ರಾಣನೇ ನುಡಿದದ್ದದು ಕಂಸನ ಕುರಿತು.
[Contributed by Shri Govind Magal] 

No comments:

Post a Comment

ಗೋ-ಕುಲ Go-Kula