Tuesday 5 February 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11:218 - 221


ಯೋ ಬಾಣಮಾವಿಶ್ಯ ಮಹಾಸುರೋsಭೂತ್ ಸ್ಥಿತಃ ಸ ನಾಮ್ನಾ ಪ್ರಥಿತೋsಪಿ ಬಾಣಃ ।

ಸ ಕೀಚಕೋ ನಾಮ ಬಭೂವ ರುದ್ರವರಾದವಧ್ಯಃ ಸ ತಮಃ ಪ್ರವೇಶ್ಯಃ ॥೧೧.೨೧೮॥

ಬಾಣನೆಂಬ ಹೆಸರಿನವನು ಬಲಿಚಕ್ರವರ್ತಿಯ ಪುತ್ರ,
ಅವನೊಳು ಪ್ರವೇಶಿಸಿದವನು  ದೈತ್ಯ ಬಾಣಾಸುರ.
ಅವನೇ ಕೀಚಕನೆಂಬ ಹೆಸರಿನಿಂದ ಹುಟ್ಟಿದಾತ,
ರುದ್ರದೇವ ವರಬಲದಿಂದ ಅವಧ್ಯನಾಗಿರುವಾತ.
ಅಂಧಂತಮಸ್ಸಿಗೆ ಬೀಳಲು ಅತ್ಯಂತ ಅರ್ಹನಾದಾತ.

ಅತಸ್ತ್ವಯಾ ಭುವ್ಯವತೀರ್ಯ್ಯ ದೇವಕಾರ್ಯ್ಯಾಣಿ ಕಾರ್ಯ್ಯಾಣ್ಯಖಿಲಾನಿ ದೇವ ।
ತ್ವಮೇವ ದೇವೇಶ ಗತಿಃ ಸುರಾಣಾಂ ಬ್ರಹ್ಮೇಶಶಕ್ರೇನ್ದುಯಮಾದಿಕಾನಾಮ್ ॥೧೧.೨೧೯॥

ಆ ಕಾರಣದಿಂದ ದೇವ;ಭೂಮಿಯಲ್ಲಾಗಬೇಕಿದೆ ನಿನ್ನವತಾರ,
ನಿನ್ನಿಂದ ಮಾಡಪಡಲ್ಬೇಕಾಗಿದೆ ಅನೇಕಾನೇಕ ದೇವಕಾರ್ಯ.
ಓ ದೇವತೆಗಳ ಒಡೆಯ ನೀನು ಅತ್ಯದ್ಭುತ ಅನಂತ ಮೂಲಶಕ್ತಿ,
ಬ್ರಹ್ಮ ರುದ್ರ ಇಂದ್ರ ಯಮ ಮುಂತಾದ  ದೇವತೆಗಳಿಗೆ ನೀನೇ ಗತಿ.

ತ್ವಮೇವ ನಿತ್ಯೋದಿತಪೂರ್ಣ್ಣಶಕ್ತಿಸ್ತ್ವಮೇವ ನಿತ್ಯೋದಿತಪೂರ್ಣ್ಣಚಿದ್ಘನಃ ।
ತ್ವಮೇವ ನಿತ್ಯೋದಿತಪೂರ್ಣ್ಣಸತ್ಸುಖಸ್ತ್ವದೃಙ್ ನ ಕಶ್ಚಿತ್ ಕುತ ಏವ ತೇsಧಿಕಃ  ॥೧೧.೨೨೦ ॥

ನೀನೊಬ್ಬನೇ ನಿತ್ಯದಲ್ಲಿ ಅಭಿವ್ಯಕ್ತವಾಗಬಲ್ಲಂಥ  ಪೂರ್ಣಶಕ್ತಿ,
ನೀನೊಬ್ಬನೇ ಎಂದೆಂದಿಗೂ ಪೂರ್ಣಜ್ಞಾನದ ಕರಗದ ಬುತ್ತಿ.
ನೀನೊಬ್ಬನೇ ಪರಿಪೂರ್ಣ ಉದ್ಭವವಾದ ಜ್ಞಾನಾನಂದ,
ನಿನಗೆ ಸಮವೇ ಇರದಮೇಲೆ ಮಿಗಿಲಾದವನು ಇನ್ನೆಲ್ಲಿಂದ.

ಇತೀರಿತೋ ದೇವವರೈರುದಾರಗುಣಾರ್ಣ್ಣವೋsಕ್ಷೋಭ್ಯತಮಾಮೃತಾಕೃತಿಃ ।
ಉತ್ಥಾಯ ತಸ್ಮಾತ್ ಪ್ರಯಯಾವನನ್ತಸೋಮಾರ್ಕ್ಕಕಾನ್ತಿದ್ಯುತಿರನ್ವಿತೋsಮರೈಃ ॥೧೧.೨೨೧॥

ಹೀಗೆ ದೇವತೆಗಳಿಂದ ಸ್ತೋತ್ರ ಮಾಡಲ್ಪಟ್ಟ ಭಗವಂತ,
ಉತ್ಕೃಷ್ಟ ಗುಣಗಳಿಗೆ ಕಡಲಿನಂತೆ ಇರುವ ಅನಂತ.
ಎಂದೂ ನಾಶವಾಗದ ದೇಹವುಳ್ಳ ಆ ನಾರಾಯಣ,
ಶೇಷಶಯ್ಯೆಯಿಂದ ಎದ್ದು ಹೊರಟ ಲಕ್ಷ್ಮೀರಮಣ.
ಎಣೆಯಿರದ ಸೂರ್ಯ ಚಂದ್ರರ ಕಾಂತಿವುಳ್ಳ ಸ್ವಾಮಿ,
ದೇವತೆಗಳಿಂದನುಸರಿಸಲ್ಪಟ್ಟು ಹೊರಟ ಭಕ್ತಪ್ರೇಮಿ.


No comments:

Post a Comment

ಗೋ-ಕುಲ Go-Kula