Wednesday 27 February 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 12: 08 - 10

ಯೋ ಮನ್ಯತೇ ವಿಷ್ಣುರೇವಾಹಮಿತ್ಯಸೌ ಪಾಪೋ ವೇನಃ ಪೌಣ್ಡ್ರಕೋ ವಾಸುದೇವಃ ।
ಜಾತಃ ಪುನಃ ಶೂರಜಾತ್ ಕಾಶಿಜಾಯಾಂ ನಾನ್ಯೋ ಮತ್ತೋ ವಿಷ್ಣುರಸ್ತೀತಿ ವಾದೀ ॥೧೨.೦೮॥

ಧುನ್ಧುರ್ಹತೋ ಯೋ ಹರಿಣಾ ಮಧೋಃ ಸುತ ಆಸೀತ್ ಸುತಾಯಾಂ ಕರವೀರೇಶ್ವರಸ್ಯ।
ಸೃಗಾಲನಾಮಾ ವಾಸುದೇವೋsಥ ದೇವಕೀಮುದೂಹ್ಯ ಶೌರಿರ್ನ್ನ ಯಯಾವುಭೇ ತೇ ॥೧೨.೦೯॥

ನಾನೇ ವಿಷ್ಣು ಎಂದು ತಿಳಿಯುವ ಪಾಪಿಷ್ಠನಾಗಿದ್ದ  ಅವ  ವೇನ,
ಪೌಂಡ್ರಕನಾಗಿ ವಸುದೇವನಿಂದ ಕಾಶಿರಾಜನ ಮಗಳಲ್ಲಿ ಜನನ.
ಹುಟ್ಟಿನಾನಂತರ ನನಗಿಂತ ಬೇರೆ ವಿಷ್ಣುವಿಲ್ಲ ಎಂದನವ ವೇನ.

ಮಧು ದಾನವನ ಮಗ ಧುಂಧು ಹರಿಯಿಂದ ಹಿಂದೆ  ಹತನಾಗಿದ್ದ,
ವಸುದೇವನಿಂದ ಕರವೀರರಾಜನ ಮಗಳಲ್ಲಿ ಸೃಗಾಲನಾಗಿ ಹುಟ್ಟಿದ.
ವಸುದೇವ ದೇವಕಿ ವಿವಾಹಾನಂತರ ಇವರಿಬ್ಬರ ಸೇರದಂತಾದ.




ತತಸ್ತು ತೌ ವೃಷ್ಣಿಶತ್ರೂ ಬಭೂವತುರ್ಜ್ಜ್ಯೇಷ್ಠೌ ಸುತೌ ಶೂರಸುತಸ್ಯ ನಿತ್ಯಮ್ ।
ಅನ್ಯಾಸು  ಚ ಪ್ರಾಪ ಸುತಾನುದಾರಾನ್ ದೇವಾವತಾರಾನ್ ವಸುದೇವೋsಖಿಲಜ್ಞಃ ॥೧೨.೧೦॥

ತಂದೆ ಪ್ರೀತಿಯಿಂದ ವಂಚಿತರಾದ ವಸುದೇವನ ಜ್ಯೇಷ್ಠಪುತ್ರರಾದವರು,
ಪೌಂಡ್ರಕ ಸೃಗಾಲರಿಬ್ಬರೂ ಯಾದವರಿಗೆ ನಿತ್ಯ ಶತ್ರುಗಳಾಗಿ ಬೆಳೆದವರು.
ಸರ್ವಜ್ಞನಾದ ವಸುದೇವ ಮುಂದೆ ಬೇರೆ ಪತ್ನಿಯರಲ್ಲಿ,
ದೇವಾಂಶಸಂಭೂತರಾದ ಉತ್ತಮ ಮಕ್ಕಳ ಪಡೆದನಲ್ಲಿ.
[Contributed by Shri Govind Magal] 

No comments:

Post a Comment

ಗೋ-ಕುಲ Go-Kula