Saturday 9 February 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11: 230 - 232

ಅಥಾವತೀರ್ಣ್ಣಾಃ ಸಕಲಾಶ್ಚ ದೇವತಾ ಯಥಾಯಥೈವಾsಹ ಹರಿಸ್ತಥಾತಥಾ ।
ವಿತ್ತೇಶ್ವರಃ ಪೂರ್ವಮಭೂದ್ಧಿ ಭೌಮಾದ್ಧರೇಃ ಸುತತ್ವೇsಪಿ ತದಿಚ್ಛಯಾsಸುರಾತ್ ॥೧೧.೨೩೦॥

ಎಲ್ಲಾ ದೇವತೆಗಳಿಂದಲೂ ಹರಿ ಹೇಳಿದಂತೆ ಆಯಿತು ಅವತಾರ,
ಮೊದಲು ಹರೀಚ್ಛೆಯಂತೆ ನರಕಾಸುರನಲ್ಲಿ ಹುಟ್ಟಿದ್ದ ಅವ ಕುಬೇರ.
ನರಕಾಸುರ ಹರಿಯ ಮಗನಾಗಿದ್ದಾರೂ ಅವನಾಗಿದ್ದ ಒಬ್ಬ ಅಸುರ.

ಪಾಪೇನ ತೇನಾಪಹೃತೋ ಹಿ ಹಸ್ತೀ ಶಿವಪ್ರದತ್ತಃ ಸುಪ್ರತೀಕಾಭಿಧಾನಃ ।
ತದರ್ತ್ಥಮೇವಾಸ್ಯ ಸುತೋsಭಿಜಾತೋ ಧನೇಶ್ವರೋ ಭಗದತ್ತಾಭಿಧಾನಃ ॥೧೧.೨೩೧ ॥

ಕುಬೇರಗೆ ಶಿವನಿತ್ತಿದ್ದ ಸುಪ್ರತೀಕ ಎಂಬ ಹೆಸರಿನ ಆನೆ,
ಅದನ್ನು ಅಪಹರಿಸಿದ್ದವ ಪಾಪಿಷ್ಠನಾದ ನರಕಾಸುರನೆ.
ಭಗದತ್ತ ಎಂಬ ಹೆಸರಿಂದ ಅವನ ಮಗನಾದವ ಕುಬೇರನೆ.

ಮಹಾಸುರಸ್ಯಾಂಶಯುತಃ ಸ ಏವ ರುದ್ರಾವೇಶಾದ್ ಬಲವಾನಸ್ತ್ರವಾಂಶ್ಚ ।
ಶಿಷ್ಯೋ ಮಹೇನ್ದ್ರಸ್ಯ ಹತೇ ಬಭೂವ ತಾತೇ ಸ್ವಧರ್ಮ್ಮಾಭಿರತಶ್ಚ ನಿತ್ಯಮ್ ॥೧೧.೨೩೨ ॥

ಭಗದತ್ತ ಮಹಾ ಅಸುರಾಂಶಯುಕ್ತನಾಗಿದ್ದ,
ರುದ್ರಾವೇಶದಿಂದ ಬಹಳ ಬಲಿಷ್ಠನಾಗಿದ್ದ.
ದೇವೇಂದ್ರನ ಶಿಷ್ಯನಾಗಿದ್ದು ಅಸ್ತ್ರಜ್ಞ ಎನಿಸಿದ್ದ,
ತಂದೆ ಸತ್ತಮೇಲೆ ಸ್ವಧರ್ಮದಲ್ಲಿ ಆಸಕ್ತನಾದ.
[Contributed by Shri Govind Magal] 

No comments:

Post a Comment

ಗೋ-ಕುಲ Go-Kula