Saturday 9 February 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11: 233 - 237

ಅಭೂಚ್ಛಿನಿರ್ನ್ನಾಮ ಯದುಪ್ರವೀರಸ್ತಸ್ಯಾsತ್ಮಜಃ ಸತ್ಯಕ ಆಸ ತಸ್ಮಾತ್ ।
ಕೃಷ್ಣಃ ಪಕ್ಷೋ ಯುಯುಧಾನಾಭಿಧೇಯೋ ಗರುತ್ಮತೋsಮ್ಶೇನ ಯುತೋ ಬಭೂವ ॥೧೧.೨೩೩॥
ಯಃ ಸಂವಹೋ ನಾಮ ಮರುತ್ ತದಂಶಶ್ಚಕ್ರಸ್ಯ ವಿಷ್ಣೋಶ್ಚ ಬಭೂವ ತಸ್ಮಿನ್ ।
ಯದುಷ್ವಭೂದ್ಧೃದಿಕೋ ಭೋಜವಂಶೇ ಸಿತಃ ಪಕ್ಷಸ್ತಸ್ಯ ಸುತೋ ಬಭೂವ॥೧೧.೨೩೪॥
ಸ ಪಾಞ್ಚಜನ್ಯಾಂಶಯುತೋ ಮರುತ್ಸು ತಥಾSಮ್ಶಯುಕ್ತಃ ಪ್ರವಹಸ್ಯ ವೀರಃ ।
ನಾಮಾಸ್ಯ ಚಾಭೂತ್ ಕೃತವರ್ಮ್ಮೇತ್ಯಥಾನ್ಯೇ ಯೇ ಯಾದವಾಸ್ತೇsಪಿ ಸುರಾಃ ಸಗೋಪಾಃ॥೧೧.೨೩೫॥

ಶಿನಿ ಎಂಬ ಯಾದವ ವೀರನಿದ್ದ,
ಅವನಿಗೆ ಸತ್ಯಕನೆಂಬ ಮಗನಿದ್ದ.
ಅವನಿಂದ ಕೃಷ್ಣಪಕ್ಷಾಭಿಮಾನಿಯ ಹುಟ್ಟು ಹೆಸರು  ಯುಯುಧಾನ,
ಹೀಗಾಯಿತು ಗರುಡನ ಅಂಶಯುಕ್ತನಾಗಿ ಅವನದು  ಜನನ.
ಸಂವಹನನೆಂಬ ಮರುತ ಮತ್ತು ವಿಷ್ಣುಚಕ್ರದಂಶಗಳ ಯುಯುಧಾನ ಹೊಂದಿದ್ದ,
ಯಾದವ ವಂಶದ ಹೃದಿಕಗೆ ಶುಕ್ಲಪಕ್ಷಾಭಿಮಾನಿದೇವ ಮಗನಾಗಿ ಹುಟ್ಟಿಬಂದ.
ಹೃದಿಕನ ಮಗ ಪಾಂಚ್ಯಜನ್ಯಾಂಶಯುಕ್ತ,
ಮರುತ್ತುಗಳಲ್ಲಿ ಪ್ರವಹನ ಅಂಶಯುಕ್ತ.
ವೀರನಾದ ಅವನಿಗೆ ಕೃತವರ್ಮನೆಂಬ ಹೆಸರು,
ಬೇರೆ ಯಾದವ ಗೋಪಾಲರೂ ದೇವಾಂಶರಾಗಿದ್ದರು.

ಯೇ ಪಾಣ್ಡವಾನಾಮಭವನ್ ಸಹಾಯಾ ದೇವಾಶ್ಚ ದೇವಾನುಚರಾಃ ಸಮಸ್ತಾಃ ।
ಅನ್ಯೇ ತು ಸರ್ವೇsಪ್ಯಸುರಾ ಹಿ ಮಧ್ಯಮಾ ಯೇ ಮಾನುಷಾಸ್ತೇ ಚಲಬುದ್ಧಿವೃತ್ತಯಃ ॥೧೧.೨೩೬॥

ಯಾರ್ಯಾರು ಆಗಿದ್ದರೋ ಪಾಂಡವರಿಗೆ ಸಹಾಯಕರು,
ಅವರೆಲ್ಲಾ ದೇವತೆಗಳು ಅಥವಾ ದೇವತೆಗಳ ಅನುಚರರು.
ಯಾರ್ಯಾರು ವಿರೋಧಿಗಳು ಆಗಿದ್ದವರೆಲ್ಲ  ಅಸುರರು.
ಆಚೆ ಈಚೆ ಚಂಚಲ ಬುದ್ಧಿಯ ಉದಾಸೀನರು ಮನುಷ್ಯರು.

ಲಿಙ್ಗಂ ಸುರಾಣಾಂ ಹಿ ಪರೈವ ಭಕ್ತಿರ್ವಿಷ್ಣೌ ತದನ್ಯೇಷು ಚ ತತ್ ಪ್ರತೀಪತಾ ।
ಅತೋsತ್ರ ಯೇಯೇ ಹರಿಭಕ್ತಿತತ್ಪರಾಸ್ತೇತೇ ಸುರಾಸ್ತದ್ಭರಿತಾ ವಿಶೇಷತಃ ॥೧೧.೧೩೭ ॥

ವಿಷ್ಣುವಿನಲ್ಲಿ ಉತ್ತಮ ಭಕ್ತಿ ದೇವತೆಗಳ ಲಕ್ಷಣ,
ವಿರೋಧಿಗಳಾಗಿರುವುದೆಲ್ಲ ಅಸುರರ ಲಕ್ಷಣ.
ಕುರುಪಾಂಡವ ಸೇನೆಯಲ್ಲಿ ಯಾರ್ಯಾರು ಹರಿಭಕ್ತರಾಗಿದ್ದರು,
ಅವರೆಲ್ಲ ದೇವತೆಗಳು ಅಥವಾ ವಿಶೇಷವಾಗಿ ಅವರಿಂದಾವಿಷ್ಟರು.
ಯಾರ್ಯಾರು ಹರಿಭಕ್ತಿಗೆ ವಿಪರೀತವಾಗಿ ದ್ವೇಷಪರಾಯಣರು,
ಅವರೆಲ್ಲ ಅಸುರರು ಅಥವಾ ವಿಶೇಷವಾಗಿ ಅವರಿಂದಾವಿಷ್ಟರು.

ಇತಿ ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ ಶ್ರೀಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ಭಗವದವತಾರಪ್ರತಿಜ್ಞಾ ನಾಮ ಏಕಾದಶೋsಧ್ಯಾಯಃ ॥
ಹೀಗೆ ಶ್ರೀಮದಾನಂದತೀರ್ಥಭಗವತ್ಪಾದರಿಂದ,
ಮಹಾಭಾರತತಾತ್ಪರ್ಯನಿರ್ಣಯ ಅನುವಾದ,
ಭಗವದವತಾರಪ್ರತಿಜ್ಞಾ ಹೆಸರಿನ ಹನ್ನೊಂದನೇ ಅಧ್ಯಾಯ,
                                                      ಯೋಗ್ಯತಾನುಸಾರ ಅನುವಾದಿಸಿ ಕೃಷ್ಣಗರ್ಪಿಸಿದ ಧನ್ಯಭಾವ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula