Wednesday 27 February 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 12: 04 - 07

ವಿನಾsಪರಾಧಂ ನ ತತೋ ಗರೀಯಸೋ ನ ಮಾತುಲೋ ವಧ್ಯತಾಮೇತಿ ವಿಷ್ಣೋಃ ।
ಲೋಕಸ್ಯ ಧರ್ಮ್ಮಾನನುವರ್ತ್ತತೋsತಃ ಪಿತ್ರೋರ್ವಿರೋಧಾರ್ತ್ಥಮುವಾಚ ವಾಯುಃ ॥೧೧.೦೪॥

ಮೃತ್ಯುಸ್ತವಾಸ್ಯಾ ಭವಿತಾsಷ್ಟಮಃ ಸುತೋ ಮೂಢೇತಿ ಚೋಕ್ತೋ ಜಗೃಹೇ ಕೃಪಾಣಮ್ ।
ಪುತ್ರಾನ್ ಸಮರ್ಪ್ಯಾಸ್ಯ ಚ ಶೂರಸೂನುರ್ವಿಮೋಚ್ಯ ತಾಂ ತತ್ಸಹಿತೋ ಗೃಹಂ ಯಯೌ॥೧೨.೫॥

ಸೋದರಮಾವ (ಕಂಸ )ಹಾಗೇ ವಧಾರ್ಹನಲ್ಲ -ಇದು ಲೋಕಧರ್ಮ,
ಅವನಿಂದ ಅಪರಾಧವೆಸಗಿಸಿ ಕೊಲ್ಲಲು ಅನುವು ಮಾಡುವ ಮರ್ಮ.
ಕಂಸನಿಗೆ ಬರಬೇಕು ಕೃಷ್ಣನ ತಂದೆ ತಾಯಿಗಳಲ್ಲಿ ವಿರೋಧ,
ದೇವಕಿಯ ಎಂಟನೇಮಗು ಕಂಸಗೆ ಮೃತ್ಯುವೆಂದು ವಾಯು ನುಡಿದ.
ಇದ ಕೇಳಿ ಕೆರಳಿದ ಕಂಸ ಅವಳ ತರಿಯಲು ಕತ್ತಿಯ ಹಿರಿದ,
ವಸುದೇವನಿಟ್ಟ ತನ್ನೆಲ್ಲಾ ಮಕ್ಕಳನ್ನು ಕಂಸಗೊಪ್ಪಿಸುವ ವಾದ.
ಬೇಡಿ ಬಿಡಿಸಿಕೊಂಡ ದೇವಕಿಯೊಂದಿಗೆ ವಸುದೇವ ಮನೆಗೆ ತೆರಳಿದ.

ಷಟ್ ಕನ್ಯಕಾಶ್ಚಾವರಜಾ ಗೃಹೀತಾಸ್ತೇನೈವ ತಾಭಿಶ್ಚ ಮುಮೋದ ಶೂರಜಃ ।
ಬಾಹ್ಲೀಕಪುತ್ರೀ ಚ ಪುರಾ ಗೃಹೀತಾ ಪುರಾsಸ್ಯ ಭಾರ್ಯ್ಯಾ ಸುರಭಿಸ್ತು ರೋಹಿಣೀ ॥೧೧.೦೬॥

ದೇವಕಿಯ ಆರೂ ಮಂದಿ ತಂಗಿಯರವರು,
ವಸುದೇವನ ವರಿಸಿ ಅವನ ಹೆಂಡಂದಿರಾದರು.
ಅವರೆಲ್ಲರೊಂದಿಗೆ ವಸುದೇವನ ಸುಖೀ ಸಂಸಾರ,
ಸುರಭಿ ಹುಟ್ಟಿದ್ದಳು ರೋಹಿಣಿಯಾಗಿ ಬಾಹ್ಲೀಕನ ದ್ವಾರ,
ಆರು ತಂಗಿಯರಿಗಿಂತ ಮೊದಲೇ ಅವಳ ವರಿಸಿದ್ದ ವ್ಯಾಪಾರ.

ರಾಜ್ಞಶ್ಚ ಕಾಶಿಪ್ರಭವಸ್ಯ ಕನ್ಯಾಂ ಸ ಪುತ್ರಿಕಾಪುತ್ರಕಧರ್ಮ್ಮತೋsವಹತ್ ।
ಕನ್ಯಾಂ ತಥಾ ಕರವೀರೇಶ್ವರಸ್ಯ ಧರ್ಮ್ಮೇಣ ತೇನೈವ ದಿತಿಂ ಧನುಂ ಪುರಾ ॥೧೧.೦೭॥

ದಿತಿ ಹುಟ್ಟಿದ್ದಳು ಕಾಶಿರಾಜನ ಮಗಳಾಗಿ,
ಪುತ್ರಿಕಾಪುತ್ರ ಧರ್ಮದ ಅನುಸಾರವಾಗಿ,
ಕರವೀರರಾಜನ ಮಗಳೊಬ್ಬಳು ದನುವಿನವತಾರಿ,
ಇಬ್ಬರನ್ನು ವರಿಸಿದ್ದ ವಸುದೇವ ವಿಧಿಯನುಸಾರಿ. 

No comments:

Post a Comment

ಗೋ-ಕುಲ Go-Kula