Wednesday 21 August 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 13: 112 - 116

ಆಯನ್ ಜಗದ್ಗುರತಮೋ ಬಲಿನಂ ಗಜೇನ್ದ್ರಂ ರುದ್ರಪ್ರಸಾದಪರಿರಕ್ಷಿತಮಾಶ್ವಪಶ್ಯತ್ ।
ದೂಷ್ಟೋರುರಙ್ಗಮುಖಸಂಸ್ಥಿತಮೀಕ್ಷ್ಯ ಚೈಭ್ಯಂ ಪಾಪಾಪಯಾಹಿ ನಚಿರಾದಿತಿ ವಾಚಮೂದೇ ॥೧೩.೧೧೨॥
ರಂಗದತ್ತ ಬರುತ್ತಿರಲು ಜಗತ್ತಿಗೆ ಮಹಾಗುರುವಾದ ಶ್ರೀರಂಗನಾಥ,
ಕಂಡ ಬಾಗಿಲಲ್ಲಿ ರುದ್ರಾನುಗ್ರಹದ ಬಲಿಷ್ಠಆನೆ ಮತ್ತು ಅದರ ಮಾವುತ.
ಪಾಪಿಷ್ಟಾ ಬೇಗ ಆಚೆತೊಲಗು ಎಂದು ಹೇಳಿದನಾಗ ಜಗತ್ತಿನ ತಾತ.

ಕ್ಷಿಪ್ತಃ ಸ ಈಶ್ವರತಮೇನ ಗಿರೀಶಲಬ್ಧಾದ್ ದೃಪ್ತೋ ವರಾಜ್ಜಗತಿ ಸರ್ವಜನೈರವದ್ಧ್ಯಃ ।
ನಾಗಂ ತ್ವವದ್ಧ್ಯಮಭಿಯಾಪಯತೇ ತತೋsಗ್ರೇ ಪಾಪೋ ದುರನ್ತಮಹಿಮಂ ಪ್ರತಿ ವಾಸುದೇವಮ್ ॥೧೩.೧೧೩॥
ಆ ಮಾವುತನಾಗಿದ್ದ ಶಿವವರದಿಂದ ರಕ್ಷಿತ,
ಅವಧ್ಯ ಅಹಂಕಾರಿಯಾಗಿ ಮೆರೆದಿದ್ದನಾತ.
ಸರ್ವೇಶ್ವರ ಕೃಷ್ಣನಿಂದಾಗಿದ್ದನವ ತಿರಸ್ಕೃತ.
ಆನೆಯ ಸಾಗಿಸಿ ಕೃಷ್ಣನ ಕೊಲ್ಲಲೆಂದು ಪ್ರಚೋದಿತ.

ವಿಕ್ರೀಡ್ಯ ತೇನ ಕರಿಣಾ ಭಗವಾನ್ ಸ ಕಿಞ್ಚಿದ್ಧಸ್ತೇ ಪ್ರಗೃಹ್ಯ ವಿನಿಕೃಷ್ಯ ನಿಪಾತ್ಯ ಭೂಮೌ ।
ಕುಮ್ಭೇ ಪದಂ ಪ್ರತಿನಿಧಾಯ ವಿಷಾಣಯುಗ್ಮಮುತ್ಕೃಷ್ಯ ಹಸ್ತಿಪಮಹನ್ ನಿಪಪಾತ ಸೋsಪಿ ॥೧೩.೧೧೪॥
ಗುಣಶಾಲಿ ಕೃಷ್ಣ ಆನೆಯೊಡನಾಡಿದ ಸಣ್ಣ ಆಟ,
ನಂತರ ಸೊಂಡಿಲೆಳೆದು ಭೂಮಿಗೆ ಕೆಡವಿದ ನೋಟ.
ಅದರ ತಲೆಯಮೇಲೆ ಕಾಲಿಟ್ಟು ದಂತಗಳ ಹೊರಸೆಳೆದ,
ಆ ದಂತದಿಂದಲೇ ಮಾವುತಗೆ ಹೊಡೆದವನ ಜೀವ ಕಳೆದ.

ನಾಗಂ ಸಸಾದಿನಮವದ್ಧ್ಯಮಸೌ ನಿಹತ್ಯ  ಸ್ಕನ್ಧೇ ವಿಷಾಣಮವಸಜ್ಜ್ಯ ಸಹಾಗ್ರಜೇನ ।
ನಾಗೇನ್ದ್ರಸಾನ್ದ್ರಮದಬಿನ್ದುಭಿರಞ್ಚಿತಾಙ್ಗಃ ಪೂರ್ಣ್ಣಾತ್ಮಶಕ್ತಿರಮಲಃ ಪ್ರವಿವೇಶ ರಙ್ಗಮ್ ॥೧೩.೧೧೫॥
ಯಾರೂ ಕೊಲ್ಲಲಾಗದ ಮಾವುತ ಆನೆಯ ಕೃಷ್ಣ ಕೊಂದ,
ಅದರ ದಂತ ಹೆಗಲಲ್ಲಿಟ್ಟು ಅಣ್ಣನೊಂದಿಗೆ ತಾನು ನಡೆದ.
ಮೈಮೇಲಾಗಿತ್ತು ಗಜಶ್ರೇಷ್ಠದ ಗಟ್ಟಿಮದದ ಹನಿಗಳ ಸಿಂಚನ,
ಅಂಥಾ ಅಪೂರ್ವ ಅಂಗಾಂಗದವನಾಗಿ ರಂಗಕ್ಕಿಳಿದ ಶ್ರೀಕೃಷ್ಣ.

ವಿಷ್ಟೇ ಜಗದ್ಗುರುತಮೇ ಬಲವೀರ್ಯ್ಯಮೂರ್ತ್ತೌ ರಙ್ಗಂ ಮುಮೋದ ಚ ಶುಶೋಷ ಜನೋsಖಿಲೋsತ್ರ ।
ಕಞ್ಜಂ ತಥಾsಪಿ ಕುಮುದಂ ಚ ಯಥೈವ ಸೂರ್ಯ್ಯ ಉದ್ಯತ್ಯಜೇsನುಭವಿನೋ ವಿಪರೀತಕಾಶ್ಚ ॥೧೩.೧೧೬॥
ಜಗತ್ತು ಪಾಲನೆ ಮಾಡುವವರಲ್ಲೇ ಅತಿಶ್ರೇಷ್ಠ,
ಬಲ ವೀರ್ಯಗಳೇ ಮೈದಾಳಿದ ಮಹಾವಿಶಿಷ್ಟ.
ಮಾಡುತ್ತಿರಲವನು ರಂಗ ಪ್ರವೇಶ,
ಕೆಲವರಿಗಾಯಿತು ಬಲು ಸಂತೋಷ.
ಮತ್ತೆ ಕೆಲವರು ಒಣಗಿದರು ವಿಶೇಷ.
ಹೇಗೆ ಸೂರ್ಯೋದಯಕ್ಕೆ ಅರಳುವುದೋ ಕಮಲ,
ಹಾಗೇ ನೈದಿಲೆಗೆ ಮಾತ್ರ ಬಾಡಿಮುದುಡುವ ಕಾಲ.
[Contributed by Shri Govind Magal] 

No comments:

Post a Comment

ಗೋ-ಕುಲ Go-Kula