Tuesday 27 August 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 13: 123 - 126

ತಾಭ್ಯಾಂ ಹತಾನಭಿಸಮೀಕ್ಷ್ಯ ನಿಜಾನ್ ಸಮಸ್ತಾನ್ ಕಂಸೋ ದಿದೇಶ ಬಲಮಕ್ಷಯಮುಗ್ರವೀರ್ಯ್ಯಮ್।
ರುದ್ರಪ್ರಸಾದಕೃತರಕ್ಷಮವ ದ್ಧ್ಯಮೇನೌ ನಿಸ್ಸಾರ್ಯ ದಣ್ಡಮಧಿಕಂ ಕುರುತೇತಿ ಪಾಪಃ ॥೧೩.೧೨೩॥
ಕೃಷ್ಣಬಲರಾಮರಿಂದ ತನ್ನವರೆಲ್ಲರೂ ನಾಶವಾದದ್ದ ಕಂಡ ಪಾಪಿಷ್ಟ ಕಂಸ,
ರುದ್ರದೇವವರದಿಂದ ರಕ್ಷಿತ ತನ್ನ ಅಭೇದ್ಯ ಸೈನ್ಯಕ್ಕೆ ಹೊರಡಿಸುತ್ತಾನೆ ಆದೇಶ.
ರಾಮಕೃಷ್ಣರನ್ನು ಪಟ್ಟಣದಿಂದ ಹೊರಗೊಯ್ದು ಹೆಚ್ಚು ಶಿಕ್ಷೆಯ ಕೊಡುವಾದೇಶ.

ಶ್ರುತ್ವೈವ ರಾಜವಚನಂ ಬಲಮಕ್ಷಯಂ ತದಕ್ಷೋಹಿಣೀದಶಕಯುಗ್ಮಮನನ್ತವೀರ್ಯ್ಯಮ್ ।
ಕೃಷ್ಣಂ ಚಕಾರ ವಿವಿದಾಸ್ತ್ರಧರಂ ಸ್ವಕೋಷ್ಠೇ ಸಿಂಹಂ ಯಥಾsಕಿಲ ಸೃಗಾಲಬಲಂ ಸಮೇತಮ್॥೧೩.೧೨೪॥
ದೈತ್ಯ ಕಂಸನ ಆಜ್ಞೆಯ ಕೇಳಿದ ಒಡನೆ,
ಇಪ್ಪತ್ತು ಅಕ್ಷೋಹಿಣಿ ಅವಿನಾಶಿ ಸೇನೆ,
ವಿಧ ವಿಧ ಅಸ್ತ್ರಗಳ ಧರಿಸಿದ ಆ ಬಲಶಾಲಿ ಸೈನಿಕರ ದಂಡು,
ರಾಮಕೃಷ್ಣರ ಆವರಿಸಿತು ಹೇಗೆ ಸಿಂಹನ ಸುತ್ತುವರೆದ ನರಿಹಿಂಡು.

ಜಾನನ್ನಪೀಶ್ವರಮನನ್ತಬಲಂ ಮಹೇನ್ದ್ರಃ ಕೃಷ್ಣಂ ರಥಂ ನಿಜಮಯಾಪಯದಾಯುಧಾಢ್ಯಮ್ ।
ಶುಶ್ರೂಷಣಾಯ ಪರಮಸ್ಯ ಯಥಾ ಸಮುದ್ರಮರ್ಘ್ಯೇಣ ಪೂರಯತಿ ಪೂರ್ಣ್ಣಜಲಂ ಜನೋsಯಮ್॥೧೩.೧೨೫॥
ಕೃಷ್ಣನನ್ನು ಅನಂತಬಲದ ಸರ್ವಸಮರ್ಥ ಎಂದು ತಿಳಿದರೂ ಇಂದ್ರ,
ದೇವಕಾರ್ಯಕ್ಕೆ ತನ್ನ ಆಯುಧಭರಿತ ರಥವ ಕಳಿಸಿದ ಪುರಂದರ.
ಇಂದ್ರನ ಈ ಸೇವೆ ಕಂಡದ್ದು ಹೀಗೆ,
ಸಮುದ್ರಕ್ಕೆ ಅರ್ಘ್ಯದಿಂದ ಅರ್ಚಿಸಿದ ಹಾಗೆ.
(ಕೆರೆಯ ನೀರನು ಕೆರೆಗೆ ಚೆಲ್ಲಿದ ಹಾಗೆ )



 ಸ್ವಸ್ಯನ್ದನಂ ತು ಭಗವಾನ್ ಸ ಮಹೇನ್ದ್ರದತ್ತಮಾರುಹ್ಯ ಸೂತವರಮಾತಲಿಸಙ್ಗೃಹೀತಮ್ ।
ನಾನಾಯುಧೋಗ್ರಕಿರಣಸ್ತರಣಿರ್ಯ್ಯಥೈವ ಧ್ವಾನ್ತಂ ವ್ಯನಾಶಯದಶೇಷತ ಆಶು ಸೈನ್ಯಮ್ ॥೧೩.೧೨೬॥
ಭಗವಂತ, ಅಗ್ರಗಣ್ಯಸಾರಥಿ ಮಾತಲಿಯಿಂದ ತರಲ್ಪಟ್ಟ ಆ ಇಂದ್ರರಥವನ್ನು ಏರಿ,
ಕಂಸನ ಸೈನ್ಯವ ನಾಶಮಾಡಿದ ಹೇಗೆ ಸೂರ್ಯ ಕತ್ತಲೋಡಿಸಿತ್ತಾನೋ ಉಗ್ರಕಿರಣ ಬೀರಿ. 

No comments:

Post a Comment

ಗೋ-ಕುಲ Go-Kula