Tuesday 27 August 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 13: 127 - 132


ನಿಃಶೇಷತೋ ವಿನಿಹತೇ ಸ್ವಬಲೇ ಸ ಕಂಸಶ್ಚರ್ಮ್ಮಾಸಿಪಾಣಿರಭಿಯಾತುಮಿಯೇಷ ಕೃಷ್ಣಮ್ ।

ತಾವತ್ ತಮೇವ ಭಗವನ್ತಮಭಿಪ್ರಯಾತಮುತ್ತುಙ್ಗಮಞ್ಚಶಿರಸಿ ಪ್ರದದರ್ಶ ವೀರಮ್ ॥೧೩.೧೨೭॥
ಕೃಷ್ಣನಿಂದ ತನ್ನ ಸೈನ್ಯ ನಿಶ್ಯೇಷವಾಗಿ ನಾಶವಾದಾಗ,
ಕತ್ತಿ ಗುರಾಣಿ ಹಿಡಿದು ಕೃಷ್ಣಗೆ ಎದುರಾದ ಕಂಸನಾಗ.
ಅಷ್ಟರಲ್ಲೇ ಕಂಸನ ಆವರಿಸಿಬಿಟ್ಟಿದ್ದ ಕೃಷ್ಣಮಹಾಭಾಗ.

ತಂ ಶ್ಯೇನವೇಗಮಭಿತಃ ಪ್ರತಿಸಞ್ಚರನ್ತಂ ನಿಶ್ಚಿದ್ರಮಾಶು ಜಗೃಹೇ ಭಗವಾನ್ ಪ್ರಸಹ್ಯ ।
ಕೇಶೇಷು ಚೈನಮಭಿಮೃಶ್ಯ ಕರೇಣ ವಾಮೇನೋದ್ಧೃತ್ಯ ದಕ್ಷಿಣಕರೇಣ ಜಘಾನ ಕೇsಸ್ಯ ॥೧೩.೧೨೮॥
ಕಂಸ ಗಿಡುಗವೇಗದಿಂದ ಕೃಷ್ಣನೆದುರು ಮತ್ತೆ ಮತ್ತೆ  ಹಾರಿಬಂದ,
ಇದನ್ನು ನೋಡಿದ ಶ್ರೀಕೃಷ್ಣ ಕಂಸನ ಆ ವೇಗವನ್ನು  ನಾಶಮಾಡಿದ.
ಅವನ ತಲೆಯನ್ನು ಎಡಗೈಯಿಂದ ಹಿಡಿದ,
ಕೂದಲು ಸೆಳೆದು ಬಲಗೈಯಿಂದ ಹೊಡೆದ.

ಸಞ್ಚಾಲಿತೇನ ಮಕುಟೇನ ವಿಕುಣ್ಡಲೇನ ಕರ್ಣ್ಣದ್ವಯೇನ ವಿಗತಾಭರಣೋರಸಾ ಚ ।
ಸ್ರಸ್ತಾಮ್ಭರೇಣ ಜಘನೇನ ಸುಶೋಚ್ಯರೂಪಃ ಕಂಸೋ ಬಭೂವ ನರಸಿಂಹಕರಾಗ್ರಸಂಸ್ಥಃ ॥೧೩.೧೨೯॥
ಪುರುಷೋತ್ತಮ ಕೃಷ್ಣನ ಕೈಯಲ್ಲಿ ಬಂಧಿಯಾದ ಕಂಸನ ಸ್ಥಿತಿ,
ಕಿರೀಟ,ಕುಂಡಲ,ಎದೆಯಾಭರಣ ಎಲ್ಲವೂ ಕಳಚಿದ ಹೇಯಗತಿ.
ಉಟ್ಟ ಸೊಂಟದ ಬಟ್ಟೆಯೂ ಬಿಚ್ಚಿದ ಶೋಚನೀಯ ಪರಿಸ್ಥಿತಿ.

ಉತ್ಕೃಷ್ಯ ತಂ ಸುರಪತಿಃ ಪರಮೋಚ್ಚಮಞ್ಚಾದನ್ಯೈರಜೇಯಮತಿವೀರ್ಯ್ಯಬಲೋಪಪನ್ನಮ್।
ಅಬ್ಜೋದ್ಭವೇಶವರಗುಪ್ತಮನನ್ತಶಕ್ತಿರ್ಭೂಮೌ ನಿಪಾತ್ಯ ಸ ದದೌ ಪದಯೋಃ ಪ್ರಹಾರಮ್ ॥೧೩.೧೩೦॥
ಕಂಸನ ನಿಗ್ರಹಿಸಿದ-ದೇವತೆಗಳ ಒಡೆಯ ಅನಂತ ಶಕ್ತಿಯ ಕೃಷ್ಣಪರಮಾತ್ಮ,,
ಹಣ್ಣಾದ-ಅನ್ಯರಿಗೆ ಅಜೇಯ ಅತಿಬಲದ ಬ್ರಹ್ಮ ರುದ್ರ ವರರಕ್ಷಿತ ದುರಾತ್ಮ.
ಆಸನದಿಂದ ಕಂಸನ ಸೆಳೆದ,
ನೆಲಕ್ಕೆ ಕೆಡವಿ ಕಾಲಿಂದ ಒದ್ದ.

‌ದೇಹೇ ತು ಯೋsಭವದಮುಷ್ಯ ರಮೇಶಬನ್ಧುರ್ವಾಯುಃ ಸ ಕೃಷ್ಣತನುಮಾಶ್ರಯದನ್ಯಪಾಪಮ್ ।
ದೈತ್ಯಂ ಚಕರ್ಷ ಹರಿರತ್ರ ಶರೀರಸಂಸ್ಥಂ ಪಶ್ಯತ್ಸು ಕಞ್ಜಜಮುಖೇಷು ಸುರೇಷ್ವನನ್ತಃ ॥೧೩.೧೩೧॥
ಕಂಸನೊಳಗಿದ್ದ ಭಗವತ್ಬಂಧುವಾದ ಮುಖ್ಯಪ್ರಾಣ,
ಸೇರಿಕೊಂಡ ತನ್ನ ಆಶ್ರಯತಾಣನಾದ ನಾರಾಯಣ.
ಕಂಸನಲ್ಲಿದ್ದ ದೈತ್ಯನ ಸೆಳೆದ ಭಗವಾನ್ ಶ್ರೀಕೃಷ್ಣ.

ದ್ವೇಷಾತ್ ಸ ಸರ್ವಜಗದೇಕಗುರೋಃ ಸ್ವಕೀಯೈಃ ಪೂರ್ವಪ್ರಮಾಪಿತಜನೈಃ ಸಹಿತಃ ಸಮಸ್ತೈಃ ।
ಧಾತ್ರ್ಯಾದಿಭಿಃ ಪ್ರತಿ ಯಯೌ ಕುಮತಿಸ್ತಮೋsನ್ಧಮನ್ಯೇsಪಿ ಚೈವಮುಪಯಾನ್ತಿ ಹರಾವಭಕ್ತಾಃ ॥೧೩.೧೩೨॥   
ಕೆಟ್ಟಬುದ್ಧಿಯುಳ್ಳ ದುರುಳನಾದ ಆ ಕಂಸ,
ಮಾಡಿದ್ದಕ್ಕೆ ಜಗದಗುರು ಭಗವಂತನ ದ್ವೇಷ,
ಮೊದಲೇ ಭಗವಂತನಿಂದ ಹತರಾಗಿ ಸೇರಿಕೊಂಡ ಆಭಗವದ್ವೇಷಿಗಳ ತಾಣ,


No comments:

Post a Comment

ಗೋ-ಕುಲ Go-Kula