Wednesday 19 December 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11: 155 - 157

ಸ ತತ್ರ ಜಜ್ಞಿವಾನ್ ಸ್ವಯಂ ದ್ವಿತೀಯರೂಪಕೋ ವಿಭುಃ ।
ಸವರ್ಮ್ಮದಿವ್ಯಕುಣ್ಡಲೋ ಜ್ವಲನ್ನಿವ ಸ್ವತೇಜಸಾ ॥೧೧.೧೫೫ ॥

ಸೂರ್ಯ ಕುಂತಿಯಲ್ಲಿ ಇನ್ನೊಂದು ರೂಪದಿಂದ ಹುಟ್ಟಿಬಂದ ಚೆಂದ,
ದಿವ್ಯ ಕವಚ ಕುಂಡಲಗಳ ಸಮೇತ ಕಾಂತಿಯಿಂದ ಬೆಳಗುತ್ತಾ ನಿಂದ.

ಪುರಾ ಸ ವಾಲಿಮಾರಣಪ್ರಭೂತದೋಷಕಾರಣಾತ್ ।
ಸಹಸ್ರವರ್ಮ್ಮನಾಮಿನಾsಸುರೇಣ ವೇಷ್ಟಿತೋsಜನಿ ॥೧೧.೧೫೬॥

ಹಿಂದೆ ಅವನು ವಾಲಿಯನ್ನು ಕೊಲ್ಲಿಸಿದ್ದರ ಕಾರಣದಿಂದಾದ ದೋಷ,
ಹುಟ್ಟಿ ಬಂದಿದ್ದ ಸಹಸ್ರವರ್ಮನೆಂಬ ಅಸುರ ಸುತ್ತುವರಿದುಕೊಂಡ ಆವೇಶ.

ಯಥಾ ಗ್ರಹೈರ್ವಿದೂಷ್ಯತೇ ಮತಿರ್ನ್ನೃಣಾಂ ತಥೈವ ಹಿ ।
ಅಭೂಚ್ಚ ದೈತ್ಯದೂಷಿತಾ ಮತಿರ್ದ್ದಿವಾಕರಾತ್ಮನಃ  ॥೧೧.೧೫೭॥

ಹೇಗೆ ಮನುಷ್ಯರ ಬುದ್ಧಿಗೆ ಸೂರ್ಯಾದಿ ಗ್ರಹಗಳಿಂದ ಆಗುತ್ತದೋ ಕೆಡುಕು,
ಹಾಗೆಯೇ ದಿವಾಕರನ ಬುದ್ಧಿಗೂ ಆವರಿಸಿಕೊಂಡಿತು ದೈತ್ಯರಿಂದ ಮಂಕು.
[Contributed by Shri Govind Magal] 

No comments:

Post a Comment

ಗೋ-ಕುಲ Go-Kula