Friday 18 December 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 20: 63 - 66

 ಏವಂ ಕೃಷ್ಣೇ ದ್ವಾರಕಾಮದ್ಧ್ಯಸಂಸ್ಥೇ ಗಿರಿಂ ಭೂಪಾ ರೈವತಕಂ ಸಮಾಯಯುಃ ।

ದುರ್ಯ್ಯೋಧನಾದ್ಯಾಃ ಪಾಣ್ಡವಾಶ್ಚೈವ ಸರ್ವೇ ನಾನಾದೇಶ್ಯಾ ಯೇ ಚ ಭೂಪಾಲಸಙ್ಘಾಃ ॥೨೦.೬೩॥

ಹೀಗೆ ದ್ವಾರಕೆಯ ಮಧ್ಯದಿ ಶ್ರೀಕೃಷ್ಣ ಇರಲು,

ರಾಜರಾದ ದುರ್ಯೋಧನಾದಿಗಳು ಬರಲು,

ಪಾಂಡವರು ಇತರ ದೇಶದ ರಾಜ ಸಮೂಹ ಕೂಡಾ,

ರೈವತ ಕ್ರೀಡಾಪರ್ವತ ಕುರಿತು ಸಾಗಿಬಂದರು ನೋಡಾ.

 

 

ಆತ್ಮಾನಂ ತಾನ್ ದ್ರಷ್ಟುಮಭ್ಯಾಗತಾನ್ ಸ ಕೃಷ್ಣೋ ಗಿರೌ ರೈವತಕೇ ದದರ್ಶ ।

ನಮಸ್ಕೃತೇ ಸರ್ವನರೇನ್ದ್ರಮುಖ್ಯೈಃ ಕೃಷ್ಣೇ ವೈದರ್ಭ್ಯಾ ಸಹ ದಿವ್ಯಾಸನಸ್ಥೇ ॥೨೦.೬೪॥

ಏತ್ಯಾsಕಾಶಾನ್ನಾರದಃ ಕೃಷ್ಣಮಾಹ ಸರ್ವೋತ್ತಮಸ್ತ್ವಂ ತ್ವಾದೃಶೋ ನಾಸ್ತಿ ಕಶ್ಚಿತ್ ।

ಇತ್ಯಾಶ್ಚರ್ಯ್ಯೋ ಧನ್ಯ ಇತ್ಯೇವ ಶಬ್ದದ್ವಯೇ ತೂಕ್ತೇ ವಾಸುದೇವಸ್ತಮಾಹ ॥೨೦.೬೫॥

ದಕ್ಷಿಣಾಭಿಃ ಸಾಕಮಿತ್ಯೇವ ಕೃಷ್ಣಂ ಪಪ್ರಚ್ಛುರೇತತ್ ಕಿಮಿತಿ ಸ್ಮ ಭೂಪಾಃ ।

ನಾರಾಯಣೋ ಮುನಿಮೂಚೇ ವದೇತಿ  ಶೃಣುಧ್ವಮಿತ್ಯಾಹ ಸ ನಾರದೋsಪಿ ॥೨೦.೬೬॥

ತನ್ನ ನೋಡಲು ಬಂದ ಪಾಂಡವಾದಿ ರಾಜರನ್ನು,

ಶ್ರೀಕೃಷ್ಣಪರಮಾತ್ಮ ರೈವತ ಪರ್ವತದಲ್ಲಿ ಕಂಡನು.

ಎಲ್ಲಾ ಶ್ರೇಷ್ಠ ರಾಜರುಗಳು ಮಾಡುತ್ತಿರಲು ನಮಸ್ಕಾರ,

ರುಗ್ಮಿಣೀಸಮೇತ ದಿವ್ಯಾಸನದಿ ಕುಳಿತಿದ್ದ ಮಂದರಧರ.

ಆಕಾಶದಿಂದಿಳಿದ ನಾರದ ಮುನಿಗಳು ಕೃಷ್ಣನ ಬಳಿಗೆ ಸಾರಿ ಬಂದು,

ಅಂದರು-ನೀ ಸರ್ವೋತ್ತಮ,ನಿನಗೆ ಸಮರಿಲ್ಲ -ನೀನು ಆಶ್ಚರ್ಯ,ಧನ್ಯ ಎಂದು.

ಹೀಗೆ ನಾರದರ ಬಾಯಿಂದ ಆ ಎರಡು ಶಬ್ದಗಳು ಬಂದಾಗ,

ವಾಸುದೇವ-ದಕ್ಷಿಣೆಯ ಜೊತೆ ನಾ ಸರ್ವೋತ್ತಮ ಎಂದನಾಗ.

ಆಗ ರಾಜರುಗಳೆಲ್ಲ ಹಾಗೆಂದರೇನು ಎಂದು ಕೇಳಲು,

ನಾರಾಯಣನೆಂದ -ನಾರದಾ ನೀನೇ ಅದನ್ನು ಹೇಳು.

ಕೇಳಿರಿ ಎಂದು ಹೇಳಲಾರಂಭಿಸಿದರು ನಾರದ ಮುನಿಗಳು.

No comments:

Post a Comment

ಗೋ-ಕುಲ Go-Kula