Saturday 19 December 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 20: 67 - 71

 

ಕೂರ್ಮ್ಮೋ ದೃಷ್ಟೋ ವಿಷ್ಣುಪದ್ಯಾಂ ಮಯೋಕ್ತಸ್ತ್ವಮುತ್ತಮೋ ನಾಸ್ತಿ ಸಮಸ್ತವೇತಿ ।

ಊಚೇ ಗಙ್ಗಾಮುತ್ತಮಾಂ ಸಾ ಜಲೇಶಮುಮಾಮೂಚೇ ಪೃಥಿವೀನಾಮಿಕಾಂ ಸಃ ॥೨೦.೬೭॥

ಯಾ ಮಾದೃಶಾ ದೇವತಾಃ ಸರ್ವಶಸ್ತಾ ಧೃತಾಸ್ತಯಾ ಪ್ರಥಿತತ್ವಾತ್ ಪೃಥಿವ್ಯಾ ।

ಶಿವಂ ಶೇಷಂ ಗರುಡಂ ಚಾsಹ ಸಾsಪಿ ಪರವಾನಾತ್ ಪರ್ವತನಾಮಧೇಯಾನ್ ॥೨೦.೬೮॥

ತೈರೇವಾಹಂ ಮತ್ಸಮಾಶ್ಚೈವ ದೇವ್ಯೋ ಧ್ರಿಯನ್ತ ಇತ್ಯೇವ ತ ಊಚಿರೇsಥ ।

ಬ್ರಹ್ಮಾಣಮೇವೋತ್ತಮಮಾಹ ಸೋsಪಿ ವೇದಾತ್ಮಿಕಾಂ ಪ್ರಕೃತಿಂ ವಿಷ್ಣುಪತ್ನೀಮ್ ॥೨೦.೬೯॥

ಸೈಕಾ ದೇವೀ ಬಹುರೂಪಾ ಬಭಾಷೇ ಯುಕ್ತಾ ಯದಾsಹಂ ಜ್ಞೇನ ನಾರಾಯಣೇನ ।

ಯಜ್ಞಕ್ರಿಯಾಮಾನಿನೀ ಯಜ್ಞನಾಮ್ನೀ ತದೋತ್ತಮಾ ತತ್ಪ್ರವೇಶಾತ್ ತದಾಖ್ಯಾ ॥೨೦.೭೦॥

ನಾರದರೆಂದರು-ನಾನು ಗಂಗೆಯಲ್ಲಿ ದೊಡ್ಡ ಕೂರ್ಮವೊಂದನ್ನು ಕಂಡೆ,

ಅದಕ್ಕೆ, ನೀನು ಉತ್ಕೃಷ್ಟ ಉತ್ತಮ ನಿನಗೆ ಸಮರಾದವರಾರಿಲ್ಲ ಎಂದೆ.

ಆಗ ಕೂರ್ಮ ಗಂಗೆ ಉತ್ತಮ ಎಂದ,

ವರುಣ ಶ್ರೇಷ್ಠವೆಂಬ ಮಾತು ಗಂಗೆಯಿಂದ.

ವರುಣ ಪೃಥಿವೀನಾಮಕ ಉಮೆ ಉತ್ತಮಳೆoದ.

ಉಮೆಯೆಂದಳು----ಶಿವ ಶೇಷ ಗರುಡರು ಉತ್ತಮರು,

ಪರ್ವತವಾಗಿ ಉಮೆ ವಾರುಣಿ ಸುಪರ್ಣಿಯರ ಧರಿಸಿರುವರು.

ಗರುಡ ಶೇಷ ರುದ್ರರೆಂದರು-ಬ್ರಹ್ಮದೇವನೇ  ಉತ್ತಮ,

ಬ್ರಹ್ಮನೆಂದ-ವೇದಾಭಿಮಾನಿ ವಿಷ್ಣುಪತ್ನಿ ರಮೆ ಉತ್ತಮ.

ರಮೆ ಒಬ್ಬಳಾದರೂ ಬಹಳ ರೂಪದವಳಾಗಿ ಹೇಳಿದಳು,

ನಾನು ಸರ್ವಜ್ಞನಿಂದ ಕೂಡಿ ಯಜ್ಞಾಭಿಮಾನಿ ಆದವಳು.

ಭಗವದ್ ಪ್ರವೇಶದಿಂದ ಯಜ್ಞಾ ನಾಮದಿಂದ ಉತ್ಕೃಷ್ಟ,

ಇದರೆಲ್ಲರ ಹಿಂದಿರುವ ನಾರಾಯಣನೇ ಸರ್ವೋತ್ಕೃಷ್ಟ.

(ಈ ಕತೆಯಲ್ಲಿ ಹೇಳಿರುವ ಯಾರೂ ಯಾವುದೂ ಜಡ ಪದಾರ್ಥವಲ್ಲ,

ಅಭಿಮಾನಿ ದೇವತೆಗಳು ಅವರ ಅಂತರ್ಯಾಮಿ ಹರಿ ಎಂಬ ಸೊಲ್ಲ.) 

 

ವಿಷ್ಣ್ವಾವಿಷ್ಟಾ ಯಜ್ಞನಾಮ್ನೀ ತದಙ್ಕಸ್ಥಿತಾ ಸೋಚೇ ಕೇಶವೋ ಹ್ಯುತ್ತಮೋsಲಮ್ ।

ನ ತತ್ಸಮಶ್ಚಾಧಿಕೋsತಃ ಕುತಃ ಸ್ಯಾದೃಷೇ ಸತ್ಯಂ ನಾನ್ಯಥೇತಿ ಸ್ಮ ಭೂಯಃ ॥೨೦.೭೧॥

ವಿಷ್ಣು ಆವೇಶದಿಂದ ಯಜ್ಞ ನಾಮದಿಂದ ಅವನ ತೊಡೆ ಮೇಲೆ ಕುಳಿತವಳು,

ರಮೆಯೆಂದಳು ಕೇಶವಗೆ ಸಮರಿಲ್ಲ, ಮುನಿಯೇ ಸತ್ಯ ಅವನೇ ಎಲ್ಲಕೂ ಮಿಗಿಲು.

[1] ಕಠೋಪನಿಷತ್ತಿನ ವಿವರಣೆಯನ್ನು ಓದುಗರು ಇಲ್ಲಿ ಕಾಣಬಹುದು: https://kathopanishat.blogspot.com

[Contributed by Shri Govind Magal]

No comments:

Post a Comment

ಗೋ-ಕುಲ Go-Kula