Sunday 20 December 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 20: 72 - 82

 ತಯೋಕ್ತೋsಹಂ ನಾವತಾರೇಷು ಕಶ್ಚಿದ್ ವಿಶೇಷ ಇತ್ಯೇವ ಯದುಪ್ರವೀರಮ್ ।

ಸರ್ವೋತ್ತಮೋsಸೀತ್ಯವದಂ ಸ ಚಾsಹ ನ ಕೇವಲಂ ಮೇsಙ್ಕಗಾಯಾಃ ಶ್ರಿಯೋsಹಮ್ ॥೨೦.೭೨॥

ಸದೋತ್ತಮಃ ಕಿನ್ತು ಯದಾ ತು ಸಾ ಮೇ ವಾಮಾರ್ದ್ಧರೂಪಾ ದಕ್ಷಿಣಾನಾಮಧೇಯಾ ।

ಯಸ್ಮಾತ್ ತಸ್ಯಾ ದಕ್ಷಿಣತಃ ಸ್ಥಿತೋsಹಂ ತಸ್ಮಾನ್ನಾಮ್ನಾ ದಕ್ಷಿಣೇತ್ಯೇವ ಸಾ ಸ್ಯಾತ್ ॥೨೦.೭೩ ॥

ಹೀಗೆ ಯಜ್ಞನಾಮಕ ಲಕ್ಷ್ಮೀದೇವಿ ನನಗೆ (ನಾರದರಿಗೆ)ಹೇಳಿದಳು,

ಕೃಷ್ಣ ಉತ್ಕೃಷ್ಟನೆಂದೆ ಸಿದ್ಧವಾದ್ದರಿಂದ ಭೇದವಿಲ್ಲವನ ಅವತಾರಗಳು.

ಕೃಷ್ಣನೆಂದ-ಕೇವಲ ನನ್ನ ತೊಡೆಯಲ್ಲಿರುವ ಲಕ್ಷ್ಮೀಯಿಂದ ನಾನಲ್ಲ ಉತ್ಕೃಷ್ಟ,

ಅವಳ ಬಲಕ್ಕೆ ನಾನಿದ್ದು ದಕ್ಷಿಣಾ ನಾಮಕಳಾಗಿ ಎಡದಲ್ಲಾಗಿದ್ದಾಳೆ ಆವಿಷ್ಟ.

 

ಸಾ ದಕ್ಷಿಣಾಮಾನಿನೀ ದೇವತಾ ಚ ಸಾ ಚ ಸ್ಥಿತಾ ಬಹುರೂಪಾ ಮದರ್ದ್ಧಾ ।

ವಾಮಾರ್ದ್ಧೋ ಮೇ ತತ್ಪ್ರವಿಷ್ಟೋ ಯತೋ ಹಿ ತತೋsಹಂ ಸ್ಯಾಮರ್ದ್ಧನಾರಾಯಣಾಖ್ಯಃ ॥೨೦.೭೪॥

ಯಜ್ಞ ದಕ್ಷಿಣೆ, ವೇದಜ್ಞಾನಕ್ಕೆ ಅಭಿಮಾನಿನಿಯಾಗಿ  ಇರುವಳು ಲಕ್ಷ್ಮೀ,

ಬಹುರೂಪದಿಂದ ನಾರಾಯಣನರ್ಧ ರೂಪದಿಂದ ಆಗಿದ್ದಾಳೆ ಸಾಕ್ಷಿ.

ನನ್ನ ಎಡಭಾಗ ಅವಳಲ್ಲಿ ಪ್ರವೇಶ ಹೊಂದಿದ ಕಾರಣ,

ನನಗೆ ಆ ಹೆಸರು ಪ್ರಸಿದ್ಧವಾಗಿದೆ ಅರ್ಧನಾರಾಯಣ.

 

ತದಾsಪ್ಯಸ್ಯಾ ಉತ್ತಮೋsಹಂ ಸುಪೂರ್ಣ್ಣೋ ನ ಮಾದೃಶಃ ಕಶ್ಚಿದಸ್ತ್ಯುತ್ತಮೋ ವಾ ।

ಇತ್ಯೇವಾವಾದೀದ್ ದಕ್ಷಿಣಾಭಿಃ ಸಹೇತಿ ಸರ್ವೋತ್ತಮತ್ವಂ ದಕ್ಷಿಣಾನಾಂ ಸ್ಮರನ್ತ್ಸಃ ॥೨೦.೭೫॥

ಆಗಲೂ ಕೂಡಾ ನಾನವಳಿಂದ ಉತ್ಕೃಷ್ಟ -ಪರಿಪೂರ್ಣ,

ಯಾರೂ ಸಮ ಮಿಗಿಲಿಲ್ಲವೆಂದನವ ಶ್ರೀಮನ್ನಾರಾಯಣ.

 

ತಾಭಿಶ್ಚೈತಾಭಿರ್ದ್ದಕ್ಷಿಣಾಭಿಃ ಸಮೇತಾದ್ ವರಿಷ್ಠೋsಹಂ ಜಗತಃ ಸರ್ವದೈವ ।

ಮತ್ಸಾಮರ್ತ್ಥ್ಯಾನ್ನೈವ  ಚಾನನ್ತಭಾಗೋ ದಕ್ಷಿಣಾನಾಂ ವಿದ್ಯತೇ ನಾರದೇತಿ ॥೨೦.೭೬॥

ನಾರದಾ, ದಕ್ಷಿಣೆಯ ಎಲ್ಲಾ ರೂಪಗಳ ಈ ಜಗತ್ತಿನಿಂದ ನಾ ಯಾವಾಗಲೂ ಉತ್ತಮ,

ನನ್ನ ಶಕ್ತಿ ಸಾಮರ್ಥ್ಯದ ಅನಂತಭಾಗದ ಒಂದಂಶ ಕೂಡಾ ದಕ್ಷಿಣೆಯಾಗಲಾರಳು ಸಮ.

 

ಉಕ್ತಂ ಕೃಷ್ಣೇನಾಪ್ರತಿಮೇನ ಭೂಪಾ ಅನ್ಯೋತ್ತಮತ್ವಂ ದಕ್ಷಿಣಾನಾಂ ಚ ಶಶ್ವತ್ ।

ಸೇಯಂ ಭೈಷ್ಮೀ ದಕ್ಷಿಣಾ ಕೇಶವೋsಯಂ ತಸ್ಯಾಃ ಶ್ರೇಷ್ಠಃ ಪಶ್ಯತ ರಾಜಸಙ್ಘಾಃ ॥೨೦.೭೭॥

ಇದು ಶ್ರೀಕೃಷ್ಣ ಹೇಳಿದ ಮಾತು ಎಂದು ಹೇಳಿದರು  ಮುನಿ ನಾರದ,

ಸಮನಿರದವ ಕೃಷ್ಣನಾದರೂ ಉಳಿದವರಿಗಿಂತ ಲಕ್ಷ್ಮೀ ಮೇಲು ಸದಾ.

ರಾಜರೇ ಈ ರುಗ್ಮಿಣಿಯೇ ದಕ್ಷಿಣಾ,

ಈ ನಮ್ಮ ಕೃಷ್ಣನೇ ಆ ನಾರಾಯಣ.

 

ಪ್ರತ್ಯಕ್ಷಂ ವೋ ವೀರ್ಯ್ಯಮಸ್ಯಾಪಿ ಕುನ್ತ್ಯಾ ಯುಧೇsರ್ತ್ಥಿತಃ ಕೇಶವೋ ವೀರ್ಯ್ಯಮಸ್ಯೈ ।

ಅದರ್ಶಯತ್ ಪಾಣ್ಡವಾನ್ ಧಾರ್ತ್ತರಾಷ್ಟ್ರಾನ್ ಭೀಷ್ಮದ್ರೋಣದ್ರೌಣಿಕೃಪಾನ್ ಸಕರ್ಣ್ಣಾನ್ ।

ನಿರಾಯುಧಾಂಶ್ಚಕ್ರ ಏಕಃ ಕ್ಷಣೇನ ಲೋಕಶ್ರೇಷ್ಠಾನ್ ದೈವತೈರಪ್ಯಜೇಯಾನ್ ॥೨೦.೭೮॥

ಇವನ ಶಕ್ತಿ ವೀರ್ಯ ನಿಮಗೇ ಪ್ರತ್ಯಕ್ಷ ಪ್ರಮಾಣ,

ಕುಂತಿಯಿಂದವಗೆ ಬರಲು ಯುದ್ಧಕ್ಕಾಗಿ ಪ್ರಾರ್ಥನ,

ಕೃಷ್ಣ ಮಾಡಿದ ಕುಂತಿಗಾಗಿ --ತನ್ನ ಬಲಪ್ರದರ್ಶನ.

ಪಾಂಡವರು ಕೌರವರು ಭೀಷ್ಮ ದ್ರೋಣ ಅಶ್ವತ್ಥಾಮ ಕೃಪಾಚಾರ್ಯ ಕರ್ಣ ಮುಂತಾದ ಲೋಕವೀರರು,

ಸರ್ವೋತ್ತಮ ಸರ್ವಶಕ್ತ ಕೃಷ್ಣಪರಮಾತ್ಮನಿಂದ ಒಂದೇ ಕ್ಷಣದಲ್ಲಿ ಸೋತು ಹೋಗಿ ಆದರವರು ನಿರಾಯುಧರು.

 

ವ್ರತಂ ಭೀಮಸ್ಯಾಸ್ತಿ ನೈವಾಭಿ ಕೃಷ್ಣಮಿಯಾಮಿತಿ ಸ್ಮಾsಜ್ಞಯಾ ತಸ್ಯ ವಿಷ್ಣೋಃ ।

ಚಕ್ರಂ ರಥಸ್ಯಾಗ್ರಹೀತ್ ಸಃ ಪ್ರಣಮ್ಯ ಕೃಷ್ಣಂ ಸ ತಂ ಕೇಶವೋsಪಾಹರಚ್ಚ ॥೨೦.೭೯॥

ಕೃಷ್ಣನ ಎಂದೂ ಎದುರಿಸಲಾರೆ ಇದು ಭೀಮಸೇನನ ವ್ರತ,

ಕೃಷ್ಣನಾಜ್ಞೆಯಂತೆ ಭೀಮ ನಮಸ್ಕರಿಸಿ ರಥಚಕ್ರ ಹಿಡಿದು ನಿಂತ.

ಅವನನ್ನು ತಳ್ಳಿ ಮುಂದೆ ಯುದ್ಧಕೆಂದು ಹೊರಟ ದೇವಕೀಸುತ.

 

ಏವಂ ಕ್ರೀಡನ್ತೋsಪ್ಯಾತ್ಮಶಕ್ತ್ಯಾ ಪ್ರಯತ್ನಂ ಕುರ್ವನ್ತಸ್ತೇ ವಿಜಿತಾಃ ಕೇಶವೇನ ।

ತತಃ ಸರ್ವೇ ನೇಮುರಸ್ಮೈ ಪೃಥಾ ಚ ಸವಿಸ್ಮಯಾ ವಾಸುದೇವಂ ನನಾಮ ॥೨೦.೮೦॥

ಎಲ್ಲ ರಾಜರ ಕ್ರೀಡೆಯಲ್ಲಿತ್ತು ಪೂರ್ಣಬಲದ ಪ್ರಯತ್ನ,

ಕೃಷ್ಣನಿಂದ ಸೋತು ಕೃಷ್ಣಗೆ ಮಾಡಿದರೆಲ್ಲ ನಮನ.

ಕುಂತಿಯಿಂದಲೂ ಆಯ್ತು ಕೃಷ್ಣಗೆ ಅಚ್ಚರಿಯ ನಮನ.

 

ಏವಂವಿಧಾನ್ಯದ್ಭುತಾನೀಹ ಕೃಷ್ಣೇ ದೃಷ್ಟಾನಿ ವಃ ಶತಸಾಹಸ್ರಶಶ್ಚ ।

ತಸ್ಮಾದೇಷ ಹ್ಯದ್ಭುತೋsತ್ಯುತ್ತಮಶ್ಚೇತ್ಯುಕ್ತಾ ನೇಮುಸ್ತೇsಖಿಲಾ ವಾಸುದೇವಮ್ ॥೨೦.೮೧॥

ಈ ಥರದ ಅದ್ಭುತಗಳು ಕೃಷ್ಣನಲ್ಲಿ ಅನಂತ,

ಹಾಗಾಗಿ ಇವನು ಅತ್ಯುತ್ತಮ -ಅತ್ಯದ್ಭುತ.

ಕೇಳಿದ ರಾಜರಿಂದ ಭಗವಂತನಾದ ನಮಸ್ಕೃತ.

 

ವಾಯ್ವಾಜ್ಞಯಾ ವಾಯುಶಿಷ್ಯಃ ಸ ಸತ್ಯಮಿತ್ಯಾದ್ಯುಕ್ತ್ವಾ ನಾರದೋ ರುಗ್ಮಿಣೀಂ ಚ ।

ಸ್ತುತ್ವಾ ಪುಷ್ಪಂ ಪಾರಿಜಾತಸ್ಯ ದತ್ವಾ ಯಯೌ ಲೋಕಂ ಕ್ಷಿಪ್ರಮಬ್ಜೋದ್ಭವಸ್ಯ ॥೨೦.೮೨॥

ವಾಯುದೇವರ ಆಜ್ಞಾನುಸಾರ,

ಅವರ ಶಿಷ್ಯ ನಾರದರ ವ್ಯಾಪಾರ.

ಕೃಷ್ಣ ಹಿರಿಮೆಯನ್ನು' ಇದು ಸತ್ಯಾ' ಎಂದ,

ರುಗ್ಮಿಣಿಗೆ ಪಾರಿಜಾತ ಕೊಟ್ಟು ಸ್ತುತಿ ಮಾಡಿದ,

ಆ ಕೂಡಲೇ ಬ್ರಹ್ಮಲೋಕದೆಡೆಗೆ ತೆರಳಿದ.

No comments:

Post a Comment

ಗೋ-ಕುಲ Go-Kula