Thursday 7 December 2017

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 1: 118 - 120

ಮಾನುಷೇಷ್ವಧಮಾಃ ಕಿಞ್ಚಿದ್ ದ್ವೇಷಯುಕ್ತಾಃ ಸದಾ ಹರೌ ।
ದುಃಖನಿಷ್ಠಾಸ್ತತಸ್ತೇsಪಿ ನಿತ್ಯಮೇವ ನ ಸಂಶಯಃ ॥೧.೧೧೮॥
ಮನುಷ್ಯಾಧಮ ಎಂದೂ ಭಗವದ್ವೇಷದಲ್ಲಿ ಮುಂದು,
ಆ ಕಾರಣದಿಂದಲೇ ಪರಮದುಃಖಿಯವ ಎಂದೆಂದೂ,
ಇದರಲ್ಲಿ ಎಂದೂ ಯಾವುದೇ ಸಂಶಯವಿಲ್ಲ,
ತಾರತಮ್ಯೋಕ್ತ ಸ್ವಭಾವದಂತೇ ಫಲವೆಲ್ಲಾ!

ಮಧ್ಯಮಾ ಮಿಶ್ರಭೂತತ್ವಾನ್ನಿತ್ಯಂ ಮಿಶ್ರಫಲಾಃ ಸ್ಮೃತಾಃ ।
ಕಿಞ್ಚಿದ್ ಭಕ್ತಿಯುತಾ ನಿತ್ಯಮುತ್ತಮಾಸ್ತೇನ ಮೋಕ್ಷಿಣಃ ॥೧.೧೧೯॥
ಮಧ್ಯಮ ಮಾನವರಿಗೆ ಎಂದೂ ತಪ್ಪದ  ದ್ವಂದ್ವ,
ಒಮ್ಮೆ ಭಕ್ತಿಯಾದರೆ ಮತ್ತೊಮ್ಮೆ ದ್ವೇಷದ ಭಾವ,
ಅದಕ್ಕನುಗುಣವಾಗಿ ಅವರಿಗೆ ಸುಖದುಃಖದ ಮಿಶ್ರಣ,
ಉತ್ತಮ ಭಕ್ತರಿಗೆ ಸಹಜವಾಗೇ ಮುಕುತಿಯ ತೋರಣ.

ಬ್ರಹ್ಮಣಃ ಪರಮಾ ಭಕ್ತಿಃ ಸರ್ವೇಭ್ಯಃ ಪರಮಸ್ತತಃ’ ।
ಇತ್ಯಾದೀನಿ ಚ ವಾಕ್ಯಾನಿ ಪುರಾಣೇಷು ಪೃಥಕ್ ಪೃಥಕ್ ॥೧.೧೨೦॥
ಬ್ರಹ್ಮದೇವನಿಗೆ ಭಗವದ್ ಭಕ್ತಿ ಹೆಚ್ಚು,
ಉತ್ಕೃಷ್ಟನವ ತಂದೆಗೆ ಅಚ್ಚು ಮೆಚ್ಚು,
ಬೇರೆ ಬೇರೆ ಪುರಾಣಗಳಲ್ಲುಂಟು ಇದರ ಉಲ್ಲೇಖ,
ಗುಣೋಪಾಸನೆಯ ಭಕ್ತರಲ್ಲಿ ಅಗ್ರಗಣ್ಯ ಚತುರ್ಮುಖ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula