Wednesday 20 December 2017

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 2: 39 - 41

ತಸ್ಮಾದ್ ರೂಪಗುಣೋದಾರಾ ಜಾನಕೀ ರುಗ್ಮಿಣೀ ತಥಾ ।
ಸತ್ಯಭಾಮೇತ್ಯಾದಿರೂಪಾ ಶ್ರೀಃ ಸರ್ವಪರಮಾ ಮತಾ ॥೨.೩೯॥

ರೂಪ ಗುಣದಲ್ಲಿ ಮಿಗಿಲಾದವರು ಸೀತೆ ,ರುಗ್ಮಿಣಿ-ಸತ್ಯಭಾಮೆ,
ಅವರೆಲ್ಲರಲ್ಲೂ ಇದ್ದವಳು ಒಬ್ಬಳೇ ಆದ ಮಾತೆ ತಾನು ರಮೆ,
ಲಕ್ಷಣಗಳು, ರೂಪ, ಗುಣಗಳು ಲಕ್ಷ್ಮಿ ಸೇರಿ ಕೆಳಗಿನವರಿಗೆಂದೇ ನಿರ್ಧಾರ,
ಮಾತೆ ಲಕ್ಷ್ಮಿಯೇ "ಸ್ತ್ರೀರತ್ನ"ಎಂದು ಭಾರತದಿಂದ ಸಾಕಾರ.

ತತಃ ಪಶ್ಚಾದ್ ದ್ರೌಪದೀ ಚ ಸರ್ವಾಭ್ಯೋ ರೂಪತೋ ವರಾ ।
ಭೂಭಾರಕ್ಷಪಣೇ ಸಾಕ್ಷಾದಙ್ಗಂ ಭೀಮವದೀಶಿತುಃ ॥೨.೪೦॥

ಆನಂತರ ಗುಣ-ರೂಪದಲ್ಲಿ ಮಿಗಿಲಾಗಿರುವುದು ದ್ರೌಪದಿ,
ಭಗವಂತನ ಪ್ರೀತಿಪಾತ್ರನಾದ ಮಗ ಭೀಮಸೇನನ  ಮಡದಿ,
ಮಹಾಭಾರತದ ಭೂಭಾರಹರಣ ಕಾರ್ಯದಲ್ಲಿ,
ತಾನೂ ಭಗವತ್ಕಾರ್ಯದಲ್ಲಿದ್ದಳು ಮುಂಚೂಣಿಯಲ್ಲಿ,
ಹೀಗಾಗಿ ವ್ಯಾಸರು ಚಿತ್ರಿಸಿದ ಸ್ತ್ರೀ ರೂಪಗಳ ಸೌಂದರ್ಯ,
ಆ ಸ್ತ್ರೀ ಪಾತ್ರಗಳ ಗುಣೋಪಾಸನೆಯ ಮುಖ್ಯ ಆಂತರ್ಯ.

ಹನ್ತಾ ಚ ವೈರಹೇತುಶ್ಚ ಭೀಮಃ ಪಾಪಜನಸ್ಯ ತು ।
ದ್ರೌಪದೀ ವೈರಹೇತುಃ ಸಾ ತಸ್ಮಾದ್ ಭೀಮಾದನನ್ತರಾ ॥೨.೪೧॥

ಭೀಮನಾಗಿದ್ದ ಪಾಪಿ ಜನರ ವೈರತ್ವಕ್ಕೆ ಕಾರಣ,
ಹಾಗೇ ಪೂರೈಸಿದ ಕೂಡಾ ದುಷ್ಟರೆಲ್ಲರ ಮಾರಣ,
ಕಾರಣಳಾಗಿ ನಿಂತ ದ್ರೌಪದಿಯಿಂದಲೇ ದುಷ್ಟರ ವೈರ-ಶತ್ರುತ್ವ,

ಭಗವದಿಚ್ಛೆಯಂತೆ ಪತಿಯ ಕಾರ್ಯದಲ್ಲಿ ನೆರವಾದಳೆಂಬ ತತ್ವ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula