Thursday 21 December 2017

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 2: 42 - 43

ಬಲದೇವಸ್ತತಃ ಪಶ್ಚಾತ್ ತತಃ ಪಶ್ಚಾಚ್ಚ ಫಲ್ಗುನಃ ।
ನರಾವೇಶಾದನ್ಯಥಾ ತು ದ್ರೌಣಿಃ ಪಶ್ಚಾತ್ ತತೋsಪರೇ ॥೨.೪೨॥

ಭೂಭಾರಹರಣ ಕಾರ್ಯದಲ್ಲಿ ಮೊದಲ ಸಹಾಯಕ ಭೀಮ,
ಆನಂತರ ಕೃಷ್ಣನಣ್ಣನಾಗಿ ಅವತರಿಸಿ ಬಂದ ಬಲರಾಮ,
ತರುವಾಯ ನಿಲ್ಲುತ್ತಾನೆ ತಾನು ಅರ್ಜುನ,
ಅದಕ್ಕೆ ಶೇಷನ ಆವೇಶವಿದ್ದದ್ದೇ ಕಾರಣ,
ಅನುಸರಿಸುತ್ತಾನೆ ಶಿವನವತಾರಿ ಅಶ್ವತ್ಥಾಮ,
ಶೇಷಾವೇಶದಿಂದ ಅರ್ಜುನ ಹೆಚ್ಚೆಂಬ ನೇಮ.

ರಾಮವಜ್ಜಾಮ್ಬವತ್ಯಾದ್ಯಾಃ ಷಟ್ ತತೋ ರೇವತೀ ತಥಾ ।
ಲಕ್ಷ್ಮಣೋ ಹನುಮತ್ ಪಶ್ಚಾತ್ ತತೋ ಭರತವಾಲಿನೌ ।
ಶತ್ರುಘ್ನಸ್ತು ತತಃ ಪಶ್ಚಾತ್ ಸುಗ್ರೀವಾದ್ಯಾಸ್ತತೋsವರಾಃ ॥೨.೪೩॥

ಬಲರಾಮಗೆ ಸಮನಾಗಿ ನಿಂತವಳು ಷಣ್ಮಹಿಷಿಯರೊಂದಿಗೆ ಜಾಂಬವತಿ,
ಶೇಷ ಪತ್ನಿ ವಾರುಣಿ ಅವತರಿಸಿಸುತ್ತಾಳೆ -ಬಲರಾಮನ ಪತ್ನಿಯಾಗಿ ರೇವತಿ,
ರಾಮಾಯಣದಲ್ಲೂ ಪ್ರಮುಖನಾದವ ಹನುಮಂತ,
ರಾಮಸೇವಾ ಕಾರ್ಯದಿ ಸೇವಕನಾಗಿ ತಾನು ನಿಂತ,
ನಂತರ ಬರುವುದು ರಾಮಾನುಜ ಲಕ್ಷ್ಮಣನ ಸ್ಥಾನ,

ಭರತ,ವಾಲಿ,ಶತ್ರುಘ್ನ,ಸುಗ್ರೀವ ತಾರತಮ್ಯದ ಮಾನ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula