Friday 22 December 2017

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 2: 44 - 45

ರಾಮಕಾರ್ಯಂ ತು ಯೈಃ ಸಮ್ಯಕ್ ಸ್ವಯೋಗ್ಯಂ ನ ಕೃತಂ ಪುರಾ ।
ತೈಃ ಪೂರಿತಂ ತತ್ ಕೃಷ್ಣಾಯ ಬೀಭತ್ಸ್ವಾದ್ಯೈಃ ಸಮನ್ತತಃ ॥೨.೪೪॥

ರಾಮಾವತಾರದಲ್ಲಿ - ಇದ್ದ ಔನ್ನತ್ಯ,
ಕೃಷ್ಣಾವತಾರದಲ್ಲಿಲ್ಲ ಎಂಬಲ್ಲಿಲ್ಲ ಔಚಿತ್ಯ,
ರಾಮಾವತಾರದಲ್ಲಿ ಯಾರಿಗಾಗಲಿಲ್ಲವೋ ರಾಮ ಸೇವ,
ಕೃಷ್ಣಾವತಾರದಲ್ಲಿ ಅದನ್ನ ಮಾಡಿದರೆಂಬುದೇ ನೈಜ ಭಾವ,
ಇತರ ಭಗವದವತಾರಗಳಲ್ಲಿ ಸಿಗದ ದೇವತೆಗಳ ಸಾಧನಾ ನಿರ್ಣಯ,
ರಾಮ ಕೃಷ್ಣಾವತಾರಗಳಲ್ಲಿ ತೋರಿಸಲ್ಪಟ್ಟಿದೆ ಸ್ಪಷ್ಟ ಮಾಡಿ ಸಮನ್ವಯ.

ಅಧಿಕಂ ಯೈಃ ಕೃತಂ ತತ್ರ ತೈರೂನಂ ಕೃತಮತ್ರ ತತ್ ।
ಕರ್ಣಾದ್ಯೈರಧಿಕಂ ಯೈಸ್ತು ಪ್ರಾದುರ್ಭಾವದ್ವಯೇ ಕೃತಮ್ ।
ವಿವಿದಾದ್ಯೈರ್ಹಿ ತೈಃ ಪಶ್ಚಾದ್ ವಿಪ್ರತೀಪಂ ಕೃತಂ ಹರೇಃ ॥೨.೪೫॥

ರಾಮಾವತಾರದಲ್ಲಿ ಯಾರ್ಯಾರಿಗಾಯ್ತೋ ಯೋಗ್ಯತೆ ಮೀರಿ ಪುಣ್ಯ ಸಂಪಾದನೆ,
ಕೃಷ್ಣಾವತಾರದಲ್ಲಿ ಕಡಿಮೆ ಪುಣ್ಯ ಸಂಪಾದನೆಯಿಂದ ಸಮತೋಲನದ ಪ್ರತಿಪಾದನೆ,
ರಾಮಾವತಾರದಲ್ಲಿ ಸುಗ್ರೀವನಾಗಿ ಮಾಡಿದ ರಾಮ ಸೇವೆ ಅಧಿಕ,

ಕೃಷ್ಣಾವತಾರದಲ್ಲಿ ಕರ್ಣನಾಗಿ ದೈವವಿರೋಧಿ ಆದದ್ದು ದ್ಯೋತಕ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula