Monday 27 April 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 17: 107 - 111

ಹರಿಶ್ಚ ವೈನತೇಯಯುಗ್ ವಿಚಾರ್ಯ್ಯ ರಾಮಸಂಯುತಃ ।
ಸದಾsತಿಪೂರ್ಣ್ಣಸಂವಿದಪ್ಯಜೋsಥ ಲೀಲಯಾsಸ್ಮರತ್ ॥೧೭.೧೦೭॥
ಆಗಿದ್ದರೂ ಸರ್ವಕಾಲದಲ್ಲೂ ಸರ್ವವಿಷಯದಲ್ಲೂ ಸರ್ವಜ್ಞ ,
ಬಲರಾಮ ಗರುಡರೊಡಗೂಡಿ ತೋರಿದ ಆದಂತೆ ಧ್ಯಾನಮಗ್ನ .

ಯುಯುತ್ಸುರೇಷ ಯಾವನಃ ಸಮೀಪಮಾಗತೋsದ್ಯ ನಃ ।
ಯುಯುತ್ಸತಾಮನೇನ ನೋ ಜರಾಸುತೋsಭಿಯಾಸ್ಯತಿ ॥೧೭.೧೦೮॥
ಕಾಲಯವನ ಯುದ್ಧಕ್ಕೆಂದು ನಮ್ಮ ಬಳಿ ಬಂದಿದ್ದಾನೆ ,
ಜರಾಸಂಧನೂ ಇನ್ನೊಂದು ದಿಕ್ಕಿನಿಂದ ಬರುತ್ತಿದ್ದಾನೆ .

ಸ ಯಾದವಾನ್ ಹನಿಷ್ಯತಿ ಪ್ರಭಙ್ಗತಸ್ತು ಕೋಪಿತಃ ।
ಪುರಾ ಜಯಾಶಯಾ ಹಿ ನೌ ಯದೂನ್ ನ ಜಘ್ನಿವಾನಸೌ ॥೧೭.೧೦೯॥

ಹಿಂದಾದ ಸೋಲಿಂದ ಸಿಟ್ಟಾಗಿ ಯಾದವರನ್ನು ಕೊಲ್ಲುವ ,
ನಮ್ಮನ್ನಷ್ಟೇ ಗೆಲ್ಲಬೇಕೆಂದು ಹಿಂದೆ ಯಾದವರ ಬಿಟ್ಟವ .

ನಿರಾಶಕೋsದ್ಯ ಯಾದವಾನಪಿ ಸ್ಮ ಪೀಡಯಿಷ್ಯತಿ ।
ಅತಃ ಸಮುದ್ರಮದ್ಧ್ಯಗಾಪುರೀವಿಧಾನಮದ್ಯ ಮೇ ॥೧೭.೧೧೦॥
ಹೀಗೆ ಹತಾಶನಾದ ಜರಾಸಂಧ ಖಂಡಿತ ಯಾದವರ ಪೀಡಿಸುವ ,
ಸಮುದ್ರಮಧ್ಯದಲ್ಲೊಂದು ಪಟ್ಟಣನಿರ್ಮಾಣ ನನ್ನ ಮನದ ಭಾವ .

ಪ್ರರೋಚತೇ ನಿಧಾನಮಪ್ಯಮುತ್ರ ಸರ್ವಸಾತ್ತ್ವತಾಮ್ ।
ಉದೀರ್ಯ ಚೈವಮೀಶ್ವರೋsಸ್ಮರತ್ ಸುರೇಶವರ್ದ್ಧಕಿಮ್ ॥೧೭.೧೧೧॥
ಆ ಪಟ್ಟಣದಲ್ಲೇ ಮಾಡಬೇಕು ಎಲ್ಲಾ ಯಾದವರೂ ವಾಸ,
ಎಂದು ಹೇಳುತ್ತಾ ವಿಶ್ವಕರ್ಮನ ಸ್ಮರಿಸಿದ ಶ್ರೀನಿವಾಸ.


No comments:

Post a Comment

ಗೋ-ಕುಲ Go-Kula