Tuesday 21 April 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 17: 78 - 83

ಯತೋ ಹಿ ಕೃಷ್ಣಸಂಶ್ರಯಾದ್ ಬತಾಪಹಾಸಿತಾ ವಯಮ್ ।
ಇತಿ ಬ್ರುವನ್ ವನಂ ಯಯೌ ತಪಶ್ಚ ಶೈವಮಾಚರತ್ ॥೧೭.೭೮॥
ಕೃಷ್ಣ ಮತ್ತವನ ಕುಲ ನಾಶದ ಶಪಥಗೈದ ಗರ್ಗಾಚಾರ್ಯ ,
ಕೃಷ್ಣನಾಶ್ರಯದ ಬಲದಿಂದಲೇ ಆಯ್ತು ಅಪಹಾಸ್ಯಕಾರ್ಯ,
ಅಂತ್ಹೇಳುತ್ತಾ ಕಾಡಿಗ್ಹೊರಟ ಆಚರಿಸಲು ಶಿವತಪಶ್ಚರ್ಯ .

ಸ ಚೂರ್ಣ್ಣಮಾಯಸಂ ತ್ವದನ್ ದದರ್ಶ ಚಾಬ್ದತಃ ಶಿವಮ್ ।
ವರಂ ತತೋsಭಿಪೇದಿವಾನ್ ಸುತಂ ಹರೇರಭಾವದಮ್ ॥೧೮.೭೯॥
ಗರ್ಗ ಸ್ವೀಕರಿಸುತ್ತಾ ಲೋಹಪುಡಿಯನ್ನಾಗಿ ಆಹಾರ ,
ತಪಗೈದ -ವರ್ಷಾನಂತರವಾಯ್ತು ಶಿವ ಸಾಕ್ಷಾತ್ಕಾರ ,
ಶಿವನಿಂದ ಪಡೆದ ಕೃಷ್ಣಾಭಾವ ಮಾಡುವ ಆ ವರ .

ಸ ವಿಷ್ಣುದೈವತೋsಪಿ ಸನ್ ಪ್ರವಿಷ್ಟ ಉಲ್ಬಣಾಸುರೈಃ ।
ವ್ಯಧಾದ್ಧರೇಃ ಪ್ರತೀಪಕಂ ವ್ರತಂ ಚ ನೈಷ್ಠಿಕಂ ಜಹೌ ॥೧೭.೮೦॥
ಗರ್ಗಮುನಿ ಆಗಿದ್ದರೂ ವಿಷ್ಣುಭಕ್ತ ,
ಆಗಿದ್ದ ಕ್ರೂರ ಅಸುರಾವೇಶಯುಕ್ತ .
ಅವನಿಂದಾಯಿತು ಕೃಷ್ಣ ವಿರೋಧ ,
ತನ್ನ ನೈಷ್ಠಿಕ ವ್ರತವನ್ನೂ ತೊರೆದ .

ತಮಾರ ಚಾsಸುರಾಪ್ಸರಾ ಬಲಿಷ್ಠಪುತ್ರಕಾಮ್ಯಯಾ ।
ಪ್ರವಿಶ್ಯ ಗೋಪಿಕಾಙ್ಗನಾಸಮೂಹಮದ್ಧ್ಯಮುಲ್ಬಣಾ ॥೧೭.೮೧॥
ಗೋಪಿಕೆಯರ ಗುಂಪಲ್ಲಿ ಕ್ರೂರ ಅಸುರ ಜಾತಿಯ ಅಪ್ಸರೆಯೊಬ್ಬಳು ,
ಬಲಿಷ್ಠ ಮಗನ ಬಯಕೆಯಿಂದ ಗರ್ಗಮುನಿಯನ್ನು ಹೊಂದಿದಳು .

ಸ ಯಾವನೇನ ಭೂಭೃತಾ ಹಿ ಗೋಪಿಕಾಭಿರರ್ಚ್ಚಿತಃ ।
ಅಪುತ್ರಕೇಣ ಜಾನತಾ ಮುನೇರ್ಮ್ಮನೋsನುಚಿನ್ತಿತಮ್ ॥೧೭.೮೨॥
ಗರ್ಗರ ಮನದ ಚಿಂತನೆ ಅರಿತ ಯವನರಾಜನಿಂದ ,
ಮತ್ತೆ ಗೋಪಿಯರಿಂದ ಗರ್ಗಮುನಿ ಪೂಜಿತನಾದ .

ಸ ಚಾಪ್ಸರಸ್ತನೌ ಸುತಂ ನಿಷಿಚ್ಯ ಯಾವನಾಯ ಚ ।
ದದೌ ವಿಮೋಹಿತಃ ಕ್ರುಧಾ ಕಿಮೇತದೀಶ ವೈರಿಣಃ ॥೧೭.೮೩॥
ಅಸುರ ಅಪ್ಸರೆಯ ಕೂಡಿದ ಗರ್ಗಾಚಾರ್ಯ,
ಪಡೆದ ಮಗುವನ್ನು ಯವನನಿಗೆ ಕೊಟ್ಟ ಕಾರ್ಯ,
ಅಸುರಾವೇಶದ ಕೃಷ್ಣದ್ವೇಷಿ ಮಾಡಿದ್ದೇನಾಶ್ಚರ್ಯ.


No comments:

Post a Comment

ಗೋ-ಕುಲ Go-Kula