Thursday 16 April 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 17: 60 - 69

ಅಪಾಮ್ಪತಿಶ್ಚ ಮೈಥಿಲಃ ಸ್ವಯಂವರಙ್ಕೃತಾವಪಿ ।
ಹರಿಂ ವಿನಿಶ್ಚಯಾದಿಯಂ ವ್ರಜೇದಿತಿ ಸ್ಮ ಚಕ್ರತುಃ ॥೧೭.೬೦॥
ಕ್ಷೀರಸಾಗರ ಮಥನ ಕಾಲದಿ ಸಮುದ್ರರಾಜ ,
ಸೀತಾಸ್ವಯಂವರ ಕಾಲದಿ ಜನಕರಾಜ ,
ಇಬ್ಬರೂ ಏರ್ಪಡಿಸಿದ್ದರು ಆಗ ಸ್ವಯಂವರ ,
ಇಬ್ಬರಿಗೂ ಇತ್ತು ಮಗಳ ಹರಿಗೆ ಸೇರಿಸೋ ನಿರ್ಧಾರ .

ಸ್ವಯಂವರಃ ಕ್ಷಿತೇರ್ಭುಜಾಂ ಸ್ವಧರ್ಮ್ಮ ಇತ್ಯತೋ ದ್ವಯೋಃ ।
ನ ದೋಷ ಆಸ ಭೀಷ್ಮಕೋ ನ ಕೇಶವಾರ್ತ್ಥಮೈಚ್ಛತ ॥೧೭.೬೧॥
ಕ್ಷತ್ರಿಯರಿಗೆ ಸ್ವಧರ್ಮವದು ಸ್ವಯಂವರ ,
ಇಬ್ಬರು ರಾಜರಿಗೂ ಅದು ದೋಷದೂರ ,
ದಾರಿ ತಪ್ಪಿತ್ತದು ಭೀಷ್ಮಕನ ವ್ಯವಹಾರ .




ಅತೋ ಹರೌ ಪ್ರಬೋದ್ಧ್ಯ ತಂ ಗತೇ ಕೃಪಾಲುಸತ್ತಮೇ ।
ವಶೀಕೃತೇ ಚ ಭೀಷ್ಮಕೇ ನೃಪಾಸ್ತ್ವಮನ್ತ್ರಯನ್ ಪುನಃ ॥೧೭.೬೨॥
ಆದಮೇಲೆ ಪರಮಕೃಪಾಳು ಕೃಷ್ಣ ಭೀಷ್ಮಕನ ಎಚ್ಚರಿಸಿ ಹೋದ ಘಟನೆ ,
ಭೀಷ್ಮಕ ಕೃಷ್ಣವಶವಾಗಲು ಮತ್ತೆ ನಡೆಸಿದರು ರಾಜರೆಲ್ಲ ಮಂತ್ರಾಲೋಚನೆ.

ಯಶಶ್ಚ ಧರ್ಮ್ಮಮುತ್ತಮಂ ವಿಧಿತ್ಸತಾ ವೃಕೋದರೇ ।
ನ ಕೇಶವೇನ ಸೂದಿತೋ ಜರಾಸುತೋ ಹಿ ಮನ್ಯತೇ ॥ ೧೭.೬೩ll
ಭೀಮನಿಗೆ ತಂದುಕೊಡಲು ಪುಣ್ಯ ಮತ್ತು ಕೀರ್ತಿಯ ಹೆಸರು ,
ಶ್ರೀಕೃಷ್ಣ ಇರಬಿಟ್ಟಿದ್ದ ಜರಾಸಂಧನ ಕಳೆಯದೇ ಅವನ ಉಸಿರು ,
ಆದರೆ ಜರಾಸಂಧನ ತಿಳುವಳಿಕೆಯಲ್ಲಿದ್ದದ್ದು ಕೇವಲ ತಿಮಿರು .

ವರಾಚ್ಛಿವಸ್ಯ ಮಾಮಯಂ ನ ಹನ್ತುಮೀಷ್ಟ ಉತ್ತಮಾತ್ ।
ಅತಃ ಶಿವಪ್ರಸಾದತೋ ಜಿತೋsಪಿ ಜೇಷ್ಯ ಉತ್ತರಮ್ ॥೧೭.೬೪॥
ಶಿವನ ವರಬಲದಿಂದ ನಾನಾಗಿದ್ದೇನೆ ಶಕ್ತ ,
ನನ್ನ ಕೊಲ್ಲಲು ಕೃಷ್ಣನಾಗಿಲ್ಲನವ ಸಮರ್ಥ ,
ಸೋಲ ನಂತರ ಶಿವಾನುಗ್ರಹವೆನಗೆ ಗೆಲುವಿನತ್ತ.




ಮೃಧೇಮೃಧೇ ಜಿತೋsಪಿ ಸನ್ ದೃಢಾಶಯಾ ಪುನಃಪುನಃ ।
ಸಮೀಹತೇ ಯುಧೇ ಶಿವಂ ನಚಾವಮನ್ಯತೇ ಕ್ವಚಿತ್ ॥೧೭.೬೫॥
ಹೀಗೆ ಸಾಗಿತ್ತು ಜರಾಸಂಧನ ಯುದ್ಧಗಳ ಸಾಲು ,
ಪ್ರತಿ ಯುದ್ಧದಲ್ಲೂ ಎದುರಾಗುತ್ತಿತ್ತದು ಸೋಲು .
ಗೆಲುವಿನಾಸೆಯಿಂದ ಪ್ರಯತ್ನಿಸುತ್ತಿದ್ದ ಮತಿಹೀನ ಜರಾಸಂಧ ,
ದೈವತಾರತಮ್ಯದಿ ಶಿವನ ಸ್ಥಾನವರಿಯದ ಅಹಂಕಾರೀ ಅಂಧ .

ಅತಃ ಪುನಶ್ಚ ಭೂಮಿಪಾನುವಾಚ ಬಾರ್ಹದ್ರಥಃ ।
ಧಿಗೇವ ಪೌರುಷಂ ಹಿ ನೋ ಯದೇಷ ನೋsಜಯತ್ ಸದಾ ॥೧೭.೬೬॥
ಜರಾಸಂಧ ರಾಜರಿಗೆ ಹೇಳಿದ ನಮ್ಮ ಪೌರುಷಕ್ಕೆ ಧಿಕ್ಕಾರ ,
ಕೃಷ್ಣ ಧರಿಸುತ್ತಿದ್ದಾನೆ ಪ್ರತಿ ಯುದ್ಧದಲ್ಲೂ ಗೆಲುವಿನ ಹಾರ .

ಅಭೂಪತೇರ್ನ್ನಚಾsಸನಂ ಪ್ರದೇಯಮಿತ್ಯುದಾಹೃತಮ್ ।
ಅಮುಷ್ಯ ನಸ್ತದನ್ಯಥಾ ಬಭೂವ ಚಿನ್ತಿತಂ ನೃಪಾಃ ॥೧೭.೬೭॥
ನಾವಂದುಕೊಂಡೆವು-ರಾಜನಲ್ಲದವಗೆ ಆಸನ ಕೊಡಬಾರದೆಂದು,
ಆದರೆ ಶ್ರೀಕೃಷ್ಣನ ವಿಷಯದಲ್ಲಿ ನಡೆದು ಆದದ್ದೇ ಬೇರೊಂದು .

ಅಯಂ ನೃಪೋತ್ತಮಾಙ್ಗಣೇ ಮಹೇನ್ದ್ರಪೀಠಮಾರುಹತ್ ।
ಸಮಸ್ತರಾಜರಾಜತಾಮವಾಪ ನೋsಪ್ಯನಿಚ್ಛತಾಮ್ ॥೧೭.೬೮॥
ರಾಜರು ನೋಡುತ್ತಿರುವಂತೆಯೇ ಕೃಷ್ಣ ಏರಿದ ಇಂದ್ರನ ಪೀಠ,
ನಮ್ಮಿಚ್ಛೆಯಲ್ಲದ ಅವನು ಚಕ್ರವರ್ತಿಯಾಗಿ ಮೆರೆದ ಆ ನೋಟ .

ಅಥಃ ಪುನಃ ಕಥಂ ಹರಿಂ ವಯಂ ಜಯೇಮ ಚಿನ್ತ್ಯತಾಮ್ ।
ಯಥಾ ಚ ಭೀಷ್ಮಕಾತ್ಮಜಾಮವಾಪ್ನುಯಾಚ್ಚ ಚೇದಿರಾಟ್ ॥೧೭.೬೯॥
ನಾವುಗಳು ಕೃಷ್ಣನನ್ನು ಗೆಲ್ಲೋದು ಹೇಗೆ ,
ಯಾವುದು ಶಿಶುಪಾಲ ರುಗ್ಮಿಣಿ ಸೇರಿಸೋ ಬಗೆ .
ಆಗಬೇಕಾಗಿದೆ ಇದರ ಬಗ್ಗೆ ವಿಚಾರ ,
ಇದು ಜರಾಸಂಧನ ಯೋಚನಾಧಾರ
[Contributed by Shri Govind Magal].

No comments:

Post a Comment

ಗೋ-ಕುಲ Go-Kula