Friday 17 April 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 17: 70 - 77

ಅಯಂ ಹಿ ದತ್ತಪುತ್ರಕೋ ಮ ಔರಸಾದ್ ವಿಶಿಷ್ಯತೇ ।
ಅತೋ ನಿವೇಶ್ಯ ಏಷ ಮೇ ಸುರೂಪಿಣೀ ಚ ರುಗ್ಮಿಣೀ ॥೧೭.೭೦॥
ಜರಾಸಂಧ ಹೇಳುವ-ಶಿಶುಪಾಲ ನನ್ನ ಸಾಕುಮಗ ಸ್ವಂತ ಮಗನಿಗಿಂತಲೂ ಅಧಿಕ ಪ್ರಧಾನ ,
ಆ ಕಾರಣದಿಂದ ಸುರೂಪಿಯಾದ ರುಗ್ಮಿಣಿಯೊಡನೆ ಇವನದು ನಡೆಯಲೇಬೇಕು ಕಲ್ಯಾಣ .

ಶಿವಾಗಮೇಷು ಶಿಷ್ಯಕಾಃ ಸರುಗ್ಮಿಸಾಲ್ವಪೌಣ್ಡ್ರಕಾಃ ।
ಮಮಾಖಿಲಾ ನೃಪಾಸ್ತತಃ ಕುರುಧ್ವಮೇತದೇವ ಮೇ ॥೧೭.೭೧॥
ರುಗ್ಮಿ ಸಾಲ್ವ ಪೌಂಡ್ರ ಸಮಸ್ತ ರಾಜರೂ ಶೈವಾಗಮದಲ್ಲಿ ನನ್ನ ಶಿಷ್ಯವೃಂದ ,
ಹಾಗಾಗಿ ಗುರುದಕ್ಷಿಣೆಯಾಗಿ ಈ ಕಾರ್ಯ ಪೂರೈಸಿ ನನಗೀಯಬೇಕು ಆನಂದ .

ಇತೀರಿತೇ ತು ಸೌಭರಾಡ್ ಜಗಾದ ರುಗ್ಮಿಸಂವಿದಾ ।
ಸ್ವಯಂವರೋ ನಿವರ್ತ್ತಿತಃ ಸ್ವಸಾರಮೇಷ ದಾಸ್ಯತಿ ॥೧೭.೭೨॥
ಜರಾಸಂಧ ಇಂತು ಹೇಳಲು ರುಗ್ಮಿ ಅನುಮತಿಯಂತೆ ಸಾಲ್ವ ನುಡಿದ ,
ಸ್ವಯಂವರ ಬಿಟ್ಟಾಗಿದೆ-ರುಗ್ಮಿ ತಂಗಿಯ ಶಿಶುಪಾಲಗೆ ಕೊಡುವ ಎಂದ .

ನಚಾತಿವರ್ತ್ತಿತುಂ ಕ್ಷಮಃ ಪಿತಾsಸ್ಯ ಚೇದಿಪಾಯ ತಾಮ್ ।
ಪ್ರದಾತುಕಾಮಮಾತ್ಮಜಂ ವಯೋಗತಸ್ತಥಾsಬಲಃ ॥೧೭.೭೩॥
ತಂಗಿಗೆ ಅನುರೂಪನೆಂದು ರುಗ್ಮಿಣಿಯ ಆಯ್ಕೆ ಆಗಿರುವಾಗ ಶಿಶುಪಾಲ ,
ವಯಸ್ಸಾದ ದುರ್ಬಲನಾದ ಭೀಷ್ಮಕರಾಜ ಅದನ್ನು ಮೀರಲು ಆಗುವುದಿಲ್ಲ .

ಸ್ವಯಂ ತು ಕೃಷ್ಣ ಏತ್ಯ ನೋ ವಿಜಿತ್ಯ ಕನ್ಯಕಾಂ ಹರೇತ್ ।
ತತೋsಸ್ಯ ಪೂರ್ವಮೇವ ನೋ ಹ್ಯಭಾವತಾ ಕೃತಾ ಶುಭಾ ॥೧೭.೭೪॥
ಆದರೆ ಕೃಷ್ಣ ತಾನೇ ಬಂದು ನಮ್ಮನ್ನು ಸೋಲಿಸಿ ,
ಕನ್ಯೆಯನ್ನೇ ಕರೆದೊಯ್ಯಬಹುದು ಅಪಹರಿಸಿ .
ಈ ಕಾರಣದಿಂದ ಅದಕ್ಕೂ ಮೊದಲು ,
ಕೃಷ್ಣನ ಮುಗಿಸಿಬಿಡುವುದು ಮಿಗಿಲು .

ಉಪಾಯ ಏಷ ಚಿನ್ತಿತೋ ಮಯಾsತ್ರ ಮಾಗಧೇಶ್ವರ ।
ಮುನಿಂ ಹಿ ಗರ್ಗ್ಗನಾಮಕಂ ಹ್ಯಮುಷ್ಯ ಸಾಲ ಆಕ್ಷಿಪತ್ ॥೧೭.೭೫॥
ಮಗಧಾಧಿಪತಿಯೇ ,ನನ್ನಲ್ಲಿದೆ ಒಂದು ಉಪಾಯದ ಚಿಂತನೆ ,
ಹಿಂದೊಮ್ಮೆ ಗರ್ಗಗೆ ಕೃಷ್ಣನ ಹೆಂಡತಿ ತಮ್ಮ ಮಾಡಿದ್ದ ನಿಂದನೆ .

ಯದಾsಸ್ಯ ಷಣ್ಡತೋದಿತಾ ಮುನೇಃ ಪುರೋಹಿತಸ್ಯ ಚ ।
ಪರೇಣ ವೃಷ್ಣಯೋsಹಸಂಶ್ಚುಕೋಪ ಗರ್ಗ್ಗ ಏಷು ಹ ॥೧೭.೭೬॥
ಯಾವಾಗ ಅವನು ಗರ್ಗನ ಷಂಡನೆಂದು ಬೈಯ್ದ ,
ಕೃಷ್ಣಸೇರಿ ಯಾದವರೆಲ್ಲ ನಕ್ಕಾಗ ಗರ್ಗ ಕುಪಿತನಾದ.

ಚಕಾರ ಚ ಪ್ರತಿಶ್ರವಂ ಸಮಾರ್ಜ್ಜಯೇ ಸುತಂ ದ್ರುತಮ್ ।
ಅಕೃಷ್ಣತಾಂ ಯ ಆನಯೇದ್ ಭುವೋsಪಿ ವೃಷ್ಣಿನಾಶಕಃ ॥೧೭.೭೭॥
ಕುಪಿತನಾದ ಗರ್ಗ ಆಗ ಪ್ರತಿಜ್ಞೆ ಮಾಡುತ್ತಾನೆ ,
ಶೀಘ್ರದಲ್ಲೇ ಒಬ್ಬ ಮಗನನ್ನು ಪಡೆಯುತ್ತೇನೆ ,
ಅವನು ಕೃಷ್ಣ ಸೇರಿದಂತೆ ಯಾದವರ ಮುಗಿಸುತ್ತಾನೆ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula