Wednesday 30 March 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 21: 168-174

 

ಸುತೋ ಯಯೌ ಶರಣಂ ತಾನ್ ರಮೇಶಭೀಮಾರ್ಜ್ಜುನಾನ್ ಸಹದೇವೋsಸ್ಯ ಧೀಮಾನ್ ।

ರಥಂ ಸ್ವಸಾರಂ ಚ ದದೌ ಸ ಮಾರುತೇರ್ನ್ನನಾಮ ಕೃಷ್ಣಂ ಪರಯಾ ಚ ಭಕ್ತ್ಯಾ               ॥೨೧.೧೬೮॥

ಜರಾಸಂಧನ ಮಗ ಸಹದೇವ ವಿವೇಕಮತಿ,

ಅವನಾದ ಕೃಷ್ಣ ಭೀಮಾರ್ಜುನರಲ್ಲಿ ಶರಣಾರ್ಥಿ.

ಭೀಮಸೇನನಿಗೆ ರಥವನ್ನು ತಂಗಿಯನ್ನೂ ಇತ್ತ,

ಕೃಷ್ಣಗೆ ಬಲು ಭಕ್ತಿಯಿಂದ ನಮಸ್ಕರಿಸಿದನಾತ.

 

[ಜರಾಸಂಧನ ಮಗ ನೀಡಿರುವ ರಥದ ಇತಿಹಾಸವನ್ನು ಹೇಳುತ್ತಾರೆ:]

 

ರಥೋ ಹ್ಯಸೌ ವಸುನಾ ವಾಸುದೇವಾಚ್ಛಕ್ರಾನ್ತರಾsಪ್ತೋ ವಸುವಂಶಜತ್ವಾತ್ ।

ಜರಾಸುತಸ್ಯಾsಸ ವೃಕೋದರಸ್ತಂ ಹರೇ ರಥಂ ಪ್ರಾರ್ಪ್ಪಯಾಮಾಸ ತಸ್ಮೈ             ॥೨೧.೧೬೯॥

ಸಹದೇವ ಕೊಟ್ಟ ಆ ರಥ ಮೂಲದಲ್ಲಿ ಭಗವಂತನದ್ದು,

ಇಂದ್ರನ ಮುಖಾಂತರ ಉಪರಿಚರ ವಸುವಿಗೆ ಸಂದದ್ದು.

ಜರಾಸಂಧನಲ್ಲಿತ್ತದು ಅವನು ಉಪರಿಚರ ವಸುವಿನ ವಂಶದಲ್ಲಿದ್ದ ಕಾರಣ,

ಈ ಹಿನ್ನೆಲೆ ತಿಳಿದ ಭೀಮಸೇನ ಭಕ್ತಿಯಿಂದ ಶ್ರೀಕೃಷ್ಣನಿಗೆ ಮಾಡಿದ ಅರ್ಪಣ.

 

ಕೃಷ್ಣೋsಸ್ಮರದ್ ಗರುಡಂ ಸ ಧ್ವಜೇsಭೂದ್ ರಥಂ ಕೃಷ್ಣೋsಥಾsರುಹತ್ ಪಾಣ್ಡವಾಭ್ಯಾಮ್ ।

ಭೀಮಃ ಕನ್ಯಾಂ ಸಹದೇವಸ್ಯ ಹೇತೋಃ ಸಮಗ್ರಹೀದನುಜಸ್ಯಾsತ್ಮನಃ ಸಃ             ॥೨೧.೧೭೦॥

(ಭಗವಂತನ ರಥಕ್ಕೆ ಗರುಡ ಅಥವಾ ಮುಖ್ಯಪ್ರಾಣ ಲಾಂಛನ),

ಹಾಗಾಗೇ ಕೃಷ್ಣ ನೆನಪಿಸಿಕೊಂಡ ತನ್ನ ಭಕ್ತನಾದಂಥ ಗರುಡನನ್ನ.

ಆ ತಕ್ಷಣ ಗರುಡದೇವನಾದ ರಥಧ್ವಜದಲ್ಲಿ ಪ್ರತಿಷ್ಠಿತ,

ಶ್ರೀಕೃಷ್ಣ ಭೀಮಾರ್ಜುನರನ್ನು ಕೂಡಿಕೊಂಡು ಏರಿದನಾ ರಥ.

ಜರಾಸಂಧ ಪುತ್ರಿಯ ತಮ್ಮ ಸಹದೇವಗಾಗಿ ಸ್ವೀಕರಿಸಿದ ವಾಯುಸುತ.

 

ನಕುಲಸ್ಯಾsದಾನ್ಮದ್ರರಾಜೋ ಹಿ ಪೂರ್ವಂ ಸ್ವೀಯಾಂ ಕನ್ಯಾಂ ಸಾ ತಥೈಷಾsಪ್ಯುಷಾ ಹಿ ।

ಏಕಾ ಪೂರ್ವಂ ತೇ ಅಶ್ವಿನೋಶ್ಚೈವ ಭಾರ್ಯ್ಯಾ ಯಮೌ ರೇಮಾತೇ ಯದುಷಾ ಅಶ್ವಿಭಾರ್ಯ್ಯಾ ॥೨೧.೧೭೧॥

ಸಹದೇವಗೆ ಜರಾಸಂಧನ ಮಗಳೊಂದಿಗೆ ವಿವಾಹವಾಗುವ ಮುನ್ನ,

ನಕುಲಗೆ ಮದುವೆಮಾಡಿಕೊಟ್ಟಿದ್ದ ಮದ್ರರಾಜ ಶಲ್ಯ ತನ್ನ ಮಗಳನ್ನ.

ಜರಾಸಂಧನ ಮಗಳು ಮತ್ತು ಮದ್ರರಾಜನ ಮಗಳು,

ಅಶ್ವೀದೇವತೆಗಳ ಪತ್ನಿ ಉಷೆಯವೇ ಎರಡು ರೂಪಗಳು.

ಮೂಲದಲ್ಲಿ ಅಶ್ವೀದೇವತೆಗಳಿಗೆ ಒಬ್ಬಳೇ ಪತ್ನಿ- ಅವಳೇ ಉಷಾ,

ಎರಡು ರೂಪಗಳಿಂದ ನಕುಲ ಸಹದೇವರ ಪತ್ನಿ ಆದದ್ದು ವಿಶೇಷ.

 

ತತಃ ಕೃಷ್ಣಾಯಾಮಗ್ರಜಭ್ರಾತೃಭಾರ್ಯ್ಯಾವೃತ್ತಿಂ ಹಿ ತೌ ಚಕ್ರತುರ್ಮ್ಮಾದ್ರಿಪುತ್ರೌ ।

ಜರಾಸುತಸ್ಯಾsತ್ಮಜಃ ಕೇಶವಾದೀನ್ ರತ್ನೈಃ ಸಮಭ್ಯರ್ಚ್ಚ್ಯ ಯಯಾವನುಜ್ಞಯಾ ॥೨೧.೧೭೨॥

ಹೀಗೆ ಮದುವೆಯಾದಮೇಲೆ ಮಾದ್ರಿಸುತರಾದ ನಕುಲ ಸಹದೇವರು,

ದ್ರೌಪದಿದೇವಿಯಲ್ಲಿ ಅತ್ತಿಗೆಯ ಭಾವನೆಯನ್ನು ತೋರಲಾರಂಭಿಸಿದರು.

ಜರಾಸಂಧನ ಮಗ ಸಹದೇವ ಕೃಷ್ಣಾದಿಗಳಿಗೆ ರತ್ನಗಳ ಕೊಟ್ಟ,

ಪೂಜಿಸಿ ಅವರನ್ನು ಅವರಾಜ್ಞೆಯನ್ನು ಪಡೆದು ತಾನು ಹೊರಟ.

 

ತದಾಜ್ಞಯಾ ಪಿತೃಕಾರ್ಯ್ಯಾಣಿ ಕೃತ್ವಾ ತದಾಜ್ಞಯೈವಾಮುಚತ್ ತಾನ್ ನೃಪಾಂಶ್ಚ ।

ತೈಃ ಸಂಸ್ತುತಃ ಕೇಶವೋ ಭೀಮಪಾರ್ತ್ಥಯುಕ್ತೋ ಯಯೌ ಭಕ್ತಿನಮ್ರೈರ್ಯ್ಯಥಾವತ್ ॥೨೧.೧೭೩॥

ಕೃಷ್ಣ-ಭೀಮಾರ್ಜುನರ ಆಜ್ಞೆಯಿಂದ ಸಹದೇವ ಮಾಡಿದ ಪಿತೃಯಜ್ಞ,

ಭಗವಂತನ ಆಜ್ಞೆಯಂತೆ ನೀಡಿದ ಬಂಧಿತ  ರಾಜರೆಲ್ಲರಿಗೆ ವಿಮೋಚನ.

ಆ ಎಲ್ಲಾ ರಾಜರಿಂದ ಸ್ತುತಿಸಿ ಕೊಂಡಾಡಲ್ಪಟ್ಟ ಶ್ರೀಕೃಷ್ಣ,

ಭೀಮಾರ್ಜುನರೊಡನೆ ಹೊರಟ ಇಂದ್ರಪ್ರಸ್ಥಕ್ಕೆ ಪಯಣ.

 

ಸಮ್ಭಾವಿತಾಸ್ತೇ ಸಹದೇವೇನ ಸಮ್ಯಕ್ ಪ್ರಶಸ್ಯ ಕೃಷ್ಣಂ ಭೀಮಸೇನಂ ಚ ಸರ್ವೇ ।

ಯಯುರ್ಗ್ಗೃಹಾನ್ ಸ್ವಾನಪತತ್ ಕೇಶವದ್ವಿಡ್ ಜರಾಸುತೋsನ್ಧೇ ತಮಸಿ ಕ್ರಮೇಣ ॥೨೧.೧೭೪॥

ಜರಾಸಂಧನಿಂದ ಬಂಧಿಸಲ್ಪಟ್ಟಿದ್ದ ಎಲ್ಲಾ ರಾಜರು,

ಸಹದೇವನಿಂದ ಒಳ್ಳೆಯ ಗೌರವಕ್ಕೊಳಗಾದರು.

ಶ್ರೀಕೃಷ್ಣ ಭೀಮರಿಗೆ ಸಲ್ಲಿಸಿದರು ಪೂಜಾ ನಮನ,

ಬೆಳೆಸಿದರು ತಮ್ಮ ತಮ್ಮ ದೇಶಗಳತ್ತ ಪ್ರಯಾಣ.

ಸ್ವಭಾವತಃ ಹರಿದ್ವೇಷಿಯಾಗಿದ್ದ ಜರಾಸಂಧ,

ಆ ಫಲವಾಗಿ ಅಂಧಂತಮಸ್ಸಿಗೆ ಹೋಗಿ ಬಿದ್ದ.


[Contributed by Shri Govind Magal]

No comments:

Post a Comment

ಗೋ-ಕುಲ Go-Kula