Wednesday 30 March 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 21: 99-105

 

ಇತೀರಿತೇsಮುನಾ ಹರಿಃ ಸಮುದ್ಯಮಾತ್ ಪ್ರಧಾನತಃ ।

ಸ್ಥಿತೇ ಹಿ ಯಜ್ಞಕಾರಣೇ ವೃಕೋದರೇ ಜಗಾದ ಹ           ॥೨೧.೯೯॥

ಈ ರೀತಿಯಾಗಿ ಭೀಮಸೇನ ಹೇಳುತ್ತಿರಲು,

ಯಾಗಕ್ಕೆ ಮುಖ್ಯಪ್ರಯತ್ನ ಭೀಮನದೇ ಇರಲು,

ಕೃಷ್ಣನೆಂದ -ಈ ಯಾಗ ನಡೆಸುವುದು ಮೇಲು.

 

ಸ ಏಕ ಏವ ಪೂರುಷೋ ಜರಾಸುತೋsದ್ಯ ವರ್ತ್ತತೇ ।

ಸಮಸ್ತಸದ್ವರೋಧಿನಾಂ ಬಲಂ ಕಲೇರನನ್ತರಃ              ॥೨೧.೧೦೦॥

ಈ ಯಾಗಕ್ಕೆ ಒಬ್ಬನೇ ಒಬ್ಬ ಪುರುಷನಿಂದಿದೆ ಪ್ರತಿರೋಧ,

ದುಷ್ಟರಾಶ್ರಯದಾತ, ಕಲಿಯ ನಂತರದಾತ ಜರಾಸಂಧನಿಂದ.

 

ತಥಾ ಸತಾಂ ಸಮಾಶ್ರಯೋ ಯದುದ್ಭವಾಃ ಸತಾಂ ಗುಣಾಃ ।

ಸ ಏಕ ಏವ ತಾದೃಶಸ್ತ್ವಯಾ ವಿಚಿನ್ತ್ಯ ಯಾತ್ಯತಾಮ್    ॥೨೧.೧೦೧॥

ಅದರಂತೆಯೇ ಸಜ್ಜನರಿಗೆಲ್ಲರಿಗೂ ಆಶ್ರಯದಾತನಾಗಿರುವವನು ಇಲ್ಲಿರುವ,

ನೀನದನ್ನು ಪರಾಮರ್ಶಸಿ ಮಾಡಬೇಕು ಯುದ್ಧಕ್ಕವನ ಕಳಿಸೋ ನಿರ್ಧಾರವ.

 

ಯದಿ ಸ್ಮ ತೇನ ಮಾಗಧೋ ನಿಹನ್ಯತೇ ಸತಾಂ ಜಯಃ ।

ವಿಪರ್ಯ್ಯಯೇಣ ಚಾಸತಾಮಿತಿ ಸ್ಮ ವಿದ್ಧಿ ನಾನ್ಯಥಾ      ॥೨೧.೧೦೨॥

ಭೀಮನಿಂದ ಜರಾಸಂಧ ಹತನಾದರೆ ಸಜ್ಜನರ ಜಯ,

ಹಾಗೊಂದುವೇಳೆ ಆಗದಿದ್ದರೆ ಅದು ದುರ್ಜನರ ಜಯ,

ಇದು ಹೀಗಾಗಬೇಕು, ಅನ್ಯರೀತಿಯಾಗಲ್ಲ ಅದೇ ನಿಶ್ಚಯ.

(ವೇದ ಧರ್ಮಕ್ಕೆ ಜಯ, ಮಿಥ್ಯಾಜ್ಞಾನ ರಕ್ಕಸತ್ವಕ್ಕೆ ಪರಾಜಯ).

 

ಸ ಪಾರಮೇಷ್ಠ್ಯಸತ್ಪದಂ ಪ್ರಯಾತ್ಯಸಂಶಯಂ ಯುಧಿ ।

ಯ ಏವ ಹನ್ತಿ ಮಾಗಧಂ ಸ ವೇದಧರ್ಮ್ಮಪಾಲಕಃ        ॥೨೧.೧೦೩॥

ಯಾರು ಈ ಸಮರದಲ್ಲಿ ಜರಾಸಂಧನ ಕೊಲ್ಲುತ್ತಾನೆ,

ಅವನು ವೇದ ಧರ್ಮದ ಪಾಲನೆಯನ್ನು ಮಾಡುತ್ತಾನೆ.

ಅವನೇ ನಿಸ್ಸಂಶಯವಾಗಿ ಬ್ರಹ್ಮಲೋಕ ಸೇರುವ,

ಹಾಗೆಯೇ ಅರ್ಹವಾದ ಬ್ರಹ್ಮಪದವಿ ಹೊಂದುವ.

 

ನಿಹನ್ತಿ ಮಾಗಧೇಶ್ವರಂ ಯ ಏಷ ವೈಷ್ಣವಂ ಜಗತ್ ।

ಕರೋತಿ ಶರ್ವಪಾಲಿತೋ ಯತಃ ಸ ಬಾರ್ಹದ್ರಥಃ        ॥೨೧.೧೦೪॥

ಯಾವ ಕಾರಣಕ್ಕೆ ಜರಾಸಂಧ ಶೈವಜಗತ್ತಿನ ಪ್ರತಿನಿಧಿಯಾಗಿ ಶಿವನಿಂದ ಪಾಲಿತ,

ಅಂಥವನನ್ನು ಕೊಂದವನು ಮಾಡುತ್ತಾನೆ ಇಡೀ ಜಗತ್ತನ್ನೇ ವಿಷ್ಣುಭಕ್ತಿಭರಿತ.

 

ನಿಹನ್ತಿ ಶೈವನಾಯಕಂ ಯ ಏಷ ವೈಷ್ಣವಾಗ್ರಣೀಃ ।

ಇತಿ ಸ್ಮ ಭಾವಸಂಯುತೇ ವದತ್ಯಜೇsಬಿಭೇನ್ನೃಪಃ      ॥೨೧.೧೦೫ ॥

ಯಾರು ಶೈವನಾಯಕ ಜರಾಸಂಧನ ಕೊಲ್ಲುವ,

ಅವನು ವೈಷ್ಣವಾಗ್ರೇಸರನಾಗಿ ಮೆರೆಯುವ,

ಹೀಗೆ ಕೃಷ್ಣ ಹೇಳಲು ಧರ್ಮಜಗಾಯಿತು ಭಯ.

[Contributed by Shri Govind Magal]

No comments:

Post a Comment

ಗೋ-ಕುಲ Go-Kula