Wednesday 30 March 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 21: 198-204

 

ಕ್ರಮೇಣ ಸರ್ವಾನ್ ನಿರ್ಜ್ಜಿತ್ಯ ಪೌಣ್ಡ್ರಕಂ ಚ ಮಹಾಬಲಮ್ ।

ವಿರಥೀಕೃತ್ಯ ಕರ್ಣ್ಣಂ ಚ ಕರಮಾದಾಯ ಸರ್ವತಃ         ॥೨೧.೧೯೮॥

ಭೀಮ ಕ್ರಮವಾಗಿ ಎಲ್ಲಾ ರಾಜರನ್ನು ಗೆಲ್ಲುತ್ತಾ ಬಂದ,

ಬಲಿಷ್ಠ ಪೌಂಡ್ರಕನನ್ನು ಗೆದ್ದು ಕರ್ಣನ ವಿರಥನ ಮಾಡಿದ.

ಎಲ್ಲರಿಂದ ಕಪ್ಪವನ್ನು ಸ್ವೀಕರಿಸಿದವನಾಗಿ ಮುಂದೆ ನಡೆದ.

 

ಹಿಮವಚ್ಛಿಖರೇ ದೇವಾನ್ ಜಿತ್ವಾ ಶಕ್ರಪುರೋಗಮಾನ್ ।

ಕ್ರೀಡಾರ್ತ್ಥಂ ಯುದ್ಧ್ಯತಸ್ತೇಭ್ಯಸ್ತುಷ್ಟೇಭ್ಯೋ ರತ್ನಸಞ್ಚಯಮ್             ॥೨೧.೧೯೯॥

ಇಂದ್ರಾದಿ ದೇವತೆಗಳು ಮಾಡಿದ್ದು ಕೇವಲ ಯುದ್ಧದ ಕ್ರೀಡೆ,

ಹಿಮವತ್ಪರ್ವತದಲ್ಲಿ ಎಲ್ಲರ ಗೆಲ್ಲುತ್ತಾ ಸಾಗಿತ್ತು ಭೀಮನ ನಡೆ.

ಸಂತುಷ್ಟರಾದ ಅವರೆಲ್ಲರಿಂದ, ಭೀಮ ರತ್ನರಾಶಿಗಳನ್ನು ಪಡೆದ.

 

ಬಾಹುಯುದ್ಧೇನ ಶೇಷಂ ಚ ಗರುಡಂ ಚ ಮಹಾಬಲಮ್ ।

ಕ್ರೀಡಮಾನೌ ವಿನಿರ್ಜ್ಜಿತ್ಯ ಭೂಷಣಾನ್ಯಾಪ ತೋಷತಃ ।

ತಾಭ್ಯಾಂ ಚ ದೃಢಮಾಶ್ಲಿಷ್ಟಃ ಸ್ನೇಹವಿಕ್ಲಿನ್ನಯಾ ಧಿಯಾ             ॥೨೧.೨೦೦॥

ಕ್ರೀಡೆಗಾಗಿ ಬಂದಿದ್ದ ಶೇಷ, ಬಲಿಷ್ಠ ಗರುಡದೇವ,

ಆಲಿಂಗಿತನಾದ ಮಲ್ಲಯುದ್ಧದಿ ಅವರನ್ನು ಗೆದ್ದವ.

ಅವರನ್ನು ಸಂತುಷ್ಟಗೊಳಿಸಿದ ಭೀಮಸೇನ,

ಅವರಿಂದ ಪಡೆದವನಾದ ಹೇರಳ ಆಭರಣ.

 

ಪೋಪ್ಲೂಯಮಾನಃ ಸ ತತೋsಮ್ಬುಧೌ ಬಲೀ ಜಗಾಮ ಬಾಣಸ್ಯ ಪುರಂ ಹರಂ ಚ ।

ರಣೇsಜಯದ್ ವಾರಣರೂಪಮಾಸ್ಥಿತಂ ಕ್ರೀಡನ್ತಮೇತೇನ ಚ ತೋಷಿತೋ ಹರಃ ॥೨೧.೨೦೧॥

ಭೀಮ ಸಮುದ್ರ ಈಜಿ ಬಾಣನೂರು ಸೇರಿದ,

ಕ್ರೀಡೆಗೆ ಬಂದ ಹರನಲ್ಲಿ ಆನೆಯ ವೇಷದಲ್ಲಿದ್ದ.

ಯುದ್ಧದಲ್ಲಿ ಭೀಮ ಹರನನ್ನು ಗೆದ್ದ,

ಇದರಿಂದ ರುದ್ರದೇವ ಸಂತುಷ್ಟನಾದ.

 

ಪೃಷ್ಟಶ್ಚ ಗಿರೀಶೇನಾಸೌ ವಿಸ್ತರಂ ದಿಗ್ಜಯಸ್ಯ ಚ ।

ಸಿಂಹವ್ಯಾಘ್ರಾದಿರೂಪಾಶ್ಚ ಆತ್ಮನಾ ವಿಜಿತಾ ಯಥಾ ।

ಗರುತ್ಮಚ್ಛೇಷಶಕ್ರಾದ್ಯಾ ದೇವಾಃ ಸರ್ವೇ ತದಬ್ರವೀತ್   ॥೨೧.೨೦೨॥

ಶಿವ ಭೀಮನ ದಿಗ್ವಿಜಯವೃತ್ತಾಂತವ ಕೇಳಬಯಸಿದ,

ಸಿಂಹ ಹುಲಿ ಇತ್ಯಾದಿ ರೂಪಗಳ ತೊಟ್ಟುಕೊಂಡು ಬಂದ್ದಿದ್ದ,

ಗರುಡ ಶೇಷ ಇಂದ್ರ ಮುಂತಾದ ದೇವತೆಗಳೆಲ್ಲಾ,

ತನ್ನಿಂದ ಹೇಗೆ ಸೋತರೆಂದು ಹೇಳಿದ ಜಗಮಲ್ಲ.

 

ನಿಶಮ್ಯ ಶಙ್ಕರೋsಖಿಲಂ ಮಖಸ್ಯ ಚ ಪ್ರಸಾಧಕಮ್ ।

ಹರಿಂ ತತೋ ಬಲೇಃ ಸುತಾದ್ ದದೌ ಚ ರತ್ನಸಞ್ಚಯಮ್             ॥೨೧.೨೦೩॥

ಭೀಮನಿಂದ ಭಗವದ್ಯಜ್ಞ ನಡೆಯುತ್ತಿದೆ ಎಂಬುದ ಕೇಳಿದ ರುದ್ರದೇವ,

ಬಲಿಯ ಮಗ ಬಾಣನಿಂದ ಭೀಮಗೆ ಕೊಡಿಸಿದ ಭವ್ಯ ರತ್ನಸಮೂಹ.

 

ಸ ಬಾಣದೈತ್ಯತೋ ಮಹಚ್ಛಿವೇನ ದತ್ತಮುತ್ತಮಮ್ ।

ಪ್ರಗೃಹ್ಯ ರತ್ನಸಞ್ಚಯಂ ಸ್ವಕಂ ಪುರಂ ಸಮಾಯಯೌ   ॥೨೧.೨೦೪॥

ಭೀಮಸೇನ ಬಾಣನ ಮುಖಾಂತರ ಶಿವ ಕೊಟ್ಟ ರತ್ನ ಪಡೆದ,

ಅಧಿಕವಾದ ಆ ರತ್ನಸಮೂಹದೊಂದಿಗೆ ತನ್ನ ಊರಿಗೆ ನಡೆದ.


 [Contributed by Shri Govind Magal]

No comments:

Post a Comment

ಗೋ-ಕುಲ Go-Kula