Wednesday 30 March 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 21: 180-190

ಅಸಾಧಾರಣಹೇತುಶ್ಚ ಭೀಮ ಏವ ಪ್ರಕೀರ್ತ್ತಿತಃ ।

ಯಜ್ಞಸ್ಯಾಸ್ಯ ಜರಾಸನ್ಧವದಾತ್ ಕರ್ಣ್ಣಜಯಾದಪಿ         ॥೨೧.೧೮೦॥

 

ಜಯಾಚ್ಚ ಕೀಚಕಾದೀನಾಮನ್ಯೈರ್ಜ್ಜೇತುಮಶಕ್ಯತಃ ।

ದ್ವಿತೀಯಃ ಫಲ್ಗುನಶ್ಚೈವ ತೃತೀಯಸ್ತು ಯುಧಿಷ್ಠಿರಃ         ॥೨೧.೧೮೧॥

ಪಾಂಡವರು ಮಾಡುತ್ತಿರುವ ಈ ಯಜ್ಞಕ್ಕೆ ಭೀಮನೇ ಮುಖ್ಯ ಕಾರಣ,

ಅವನಿಂದಲೇ ಹತನಾಗಿದ್ದ ಜರಾಸಂಧ ಸೋತುಹೋಗಿದ್ದನು ಕರ್ಣ.

ಯಾರೂ ಗೆಲ್ಲಲಾಗದಂಥ ಕೀಚಕ ಮೊದಲಾದ ಬಲವಂತರನ್ನು ಗೆದ್ದಿದ್ದ,

ಎರಡನೇ ಕಾರಣ ಅರ್ಜುನ ಮೂರನೇ ಕಾರಣ ಯುಧಿಷ್ಠಿರನಾಗಿದ್ದ.

 

ತಸ್ಮಾದ್ ಬ್ರಹ್ಮಪದಾವಾಪ್ತ್ಯೈ ವ್ಯಾಸೋ ಭೀಮಸ್ಯ ತಂ ಕ್ರತುಮ್ ।

ಅನನ್ಯಕೃತಮಾದಿಶ್ಯ ದಿಶಾಂ ವಿಜಯಮಾದಿಶತ್                     ॥೨೧.೧೮೨॥

ಈ ತೆರನಾಗಿ ಭೀಮಸೇನನಾಗಿದ್ದ ಬ್ರಹ್ಮಪದವಿ ಪ್ರಾಪ್ತಿಗಾಗಿ ಅರ್ಹ,

ವ್ಯಾಸರಾಜ್ಞೆಯಿತ್ತು:ಅವನು ಮಾಡಲು ಅಶ್ವಮೇಧ ರಾಜಸೂಯ ಕಾರ್ಯ.

ಅಪ್ಪಣೆಯಿತ್ತರು :ಮೊದಲಾಗಲಿ ದಿಗ್ವಿಜಯ ಅದು ಬಲು ಅನಿವಾರ್ಯ.

 

ಅಥಾsಬ್ರವೀದ್ ಧನಞ್ಜಯೋ ಧನುರ್ಧ್ವಜೋ ರಥೋ ವರಃ ।

ಮಮಾಸ್ತಿ ತದ್ದಿಶಾಂ ಜಯೋ ಮಮೈವ ವಾಞ್ಛಿತಃ ಪ್ರಭೋ             ॥೨೧.೧೮೩॥

ನಂತರ ಅರ್ಜುನ ಹೇಳುವ -ಸರ್ವಸಮರ್ಥರಾದ ವೇದವ್ಯಾಸರೇ,

ಉತ್ತಮ ಬಿಲ್ಲು, ಧ್ವಜ, ಶ್ರೇಷ್ಠ ರಥಗಳದು ನನಗಿದೆ ಗಟ್ಟಿ ಆಸರೆ.

ನಾನೊಬ್ಬನೇ ಮಾಡುವೆ ದಿಗ್ವಿಜಯ ನನಗೆ ಆಗದದು ಹೊರೆ.

 

ಇತೀರಿತೋsಖಿಲಪ್ರಭುರ್ಜ್ಜಗಾದ ಸತ್ಯಮಸ್ತಿತೇ ।

ಸಮಸ್ತಸಾಧನೋನ್ನತಿರ್ಮ್ಮಹಚ್ಚ ವೀರ್ಯ್ಯಮಸ್ತಿತೇ                 ॥೨೧.೧೮೪॥

 

ತಥಾsಪಿ ಕೀಚಕಾದಯೋ ವೃಕೋದರಾದೃತೇ ವಶಮ್ ।

ನ ಯಾನ್ತಿ ನಾಪಿ ತೇ ವಶಂ ಪ್ರಯಾತಿ ಕರ್ಣ್ಣ ಏವ ಚ                  ॥೨೧.೧೮೫॥

ಅರ್ಜುನ ಹೀಗೆ ಹೇಳಲು, ಸರ್ವರೊಡೆಯ ವ್ಯಾಸರು ಹೇಳುತ್ತಾರೆ,

ಖಂಡಿತ ನಿನ್ನಲ್ಲಿದೆ ವೀರ್ಯ ಮತ್ತು ಸಾಧನ ಸಂಪತ್ತಿನ ಅಖಂಡಧಾರೆ.

ಆದರೂ ಕೀಚಕಾದಿಗಳು ಭೀಮಸೇನಗಲ್ಲದೆ ನಿನಗಾಗಲ್ಲ ವಶ,

ಮುಖ್ಯವಾಗಿ ಕರ್ಣನ ವಶೀಕರಿಸಿಕೊಳ್ಳಲೂ ನಿನಗಿಲ್ಲ ಅವಕಾಶ.

 

ಬಲಾಧಿಕೋsಸಿ ಕರ್ಣ್ಣತಸ್ತಥಾsಪಿ ನಾಮೃತಃ ಕರಮ್ ।

ದದಾತಿ ತೇ ಹ್ಯತಿಸ್ಪೃಧಾ ನ ವದ್ಧ್ಯ ಏಷ ತೇsದ್ಯ ಚ                    ॥೨೧.೧೮೬॥

 

ಸವರ್ಮ್ಮಕುಣ್ಡಲತ್ವತೋ ನ ವದ್ಧ್ಯ ಏಷ ಯತ್ ತ್ವಯಾ ।

ತತೋ ವೃಕೋದರೋ ದಿಶಂ ಪ್ರಯಾತು ತೇ ಪಿತುಃ ಪ್ರಿಯಾಮ್ ॥೨೧.೧೮೭॥ 

ಕರ್ಣನಿಗಿಂತ ನೀನು ಹೆಚ್ಚು ಬಲಶಾಲಿ ಹೌದು,

ಜಿದ್ದಿನ ಸ್ಪರ್ಧಿಯವನು ಸಾಯದೇ ಕಪ್ಪ ಸಿಗದು.

ಅವನನ್ನು ಈಗಲೇ ಕೊಲ್ಲುವ ಹಾಗಿಲ್ಲ ,

ಕವಚಕುಂಡಲಧಾರಿಯ ವಧಿಸುವುದು ಸಲ್ಲ.

ಇವೆಲ್ಲಾ ಕಾರಣಗಳಿಂದಲೇ ನಿನ್ನಣ್ಣನಾದ ಭೀಮಸೇನ,

ನಿನ್ನಪ್ಪ ಇಂದ್ರಗೆ ಪ್ರಿಯವಾದ ಪೂರ್ವಕ್ಕೆ ಹೋಗಲಿ ಪ್ರಯಾಣ.

 

ಜೀವಗ್ರಾಹಭಯಾತ್ ಕರ್ಣ್ಣೋ ದದಾತಿ ಕರಮಞ್ಜಸಾ ।

ಭೀಮಾಯ ನಾತ್ರ ಸನ್ದೇಹೋ ಜಿತೋsನೇನ ಚ ಸಂಯುಗೇ             ॥೨೧.೧೮೮॥

ಕರ್ಣನಿಗಿದೆ ಭೀಮಸೇನ ತನ್ನನ್ನು ಜೀವಂತ ಸೆರೆ ಹಿಡಿವನೆಂಬ ಭಯ,

ಹಾಗಾಗಿ ಅವನು ಚೆನ್ನಾಗಿ ಕರವ ಕೊಡುತ್ತಾನೆ ಬೇಡವಿದಕೆ ಸಂಶಯ.

 

ಅಜೇಯೌ ಶರ್ವವಚನಾದ್ ರಣೇ ಕೀಚಕಪೌಣ್ಡ್ರಕೌ ।

ವಶಂ ಪ್ರಯಾತೋ ಭೀಮಸ್ಯ ತಥಾsವದ್ಧ್ಯೋsಪಿ ಚೇದಿಪಃ             ॥೨೧.೧೮೯ll  

ರುದ್ರವರದಿಂದ ಕೀಚಕ ಮತ್ತು ಪೌಂಡ್ರಕರು ಅಜೇಯರು,

ಹಾಗಿದ್ದಾಗಿಯೂ ಭೀಮನ ಬಲಕ್ಕೆ ಅವರು ಬಾಗುವರು.

ಅಂತೆಯೇ ಶಿಶುಪಾಲನವನು ಆಗಿದ್ದಾನೆ ಅವಧ್ಯ,

ಆದರೂ ಅವ ಭೀಮನ ವಶವಾಗದಿರುವುದು ಅಸಾಧ್ಯ.

 

ಜೀವಗ್ರಾಹಭಯಂ ಹ್ಯೇಷಾಂ ಭೀಮಾನ್ಮಾಗಧಪಾತನಾತ್ ।

ತಸ್ಮಾತ್ ಕರಂ ಪ್ರಯಚ್ಛನ್ತಿ ಜಿತಾ ವಾ ಪೂರ್ವಮೇವ ವಾ             ॥೨೧.೧೯೦॥

ಜರಾಸಂಧನನ್ನೇ ಮಣಿಸಿದ್ದಾನೆ ಅವನು ಭೀಮಸೇನ,

ಅವನಿಗೆ ಜೀವಂತ ಸೆರೆಯಾಗುವುದು ಭಯಕ್ಕೆ ಕಾರಣ.

ಹಾಗಾಗಿ ಯುದ್ಧದಿ ಸೋತು ಕೊಡುತ್ತಾರೆ ಕರ,

ಯುದ್ಧವಿಲ್ಲದೇ ಕೊಟ್ಟರೂ ಇರದು ಆಶ್ಚರ್ಯ.

 [Contributed by Shri Govind Magal]

No comments:

Post a Comment

ಗೋ-ಕುಲ Go-Kula