Wednesday 30 March 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 21: 90-98

 [ಈ ರೀತಿಯಾಗಿ ಹೇಳಿದ ಕೃಷ್ಣ ಮುಂದೆ ಇನ್ನೂ ಕೆಲವು ಮಾತುಗಳನ್ನು ಹೇಳಲಿದ್ದಾನೆ. ಆದರೆ ಅದಕ್ಕೂ ಮೊದಲು, ಹಿನ್ನೆಲೆಯಾಗಿಮುಂದೆ ಶ್ರೀಕೃಷ್ಣ ಹೇಳಲಿರುವ ಮಾತುಗಳ ಹಿಂದೆ ಯಾವ ಭಾವವಿದೆ ಎನ್ನುವುದನ್ನು ಮುಂದಿನ ಎರಡು ಶ್ಲೋಕಗಳಲ್ಲಿ ಹೇಳುತ್ತಾರೆ:]

 

ಉದೀರ್ಯ್ಯ ಚೈವಮೀಶ್ವರಃ ಕ್ರತೋರಮುಷ್ಯ ಯೋಗ್ಯತಾ ।

ವೃಕೋದರೇ ಯತೋsಖಿಲಾ ಚತುರ್ಮ್ಮುಖತ್ವಯೋಗ್ಯತಾ     ॥೨೧.೯೦॥

 

 ತತಃ ಸುಪೂರ್ಣ್ಣಮಸ್ಯ ತತ್ ಫಲಂ ವಿಧಾತುಮಞ್ಜಸಾ ।

ಜಗಾದ ವಾಯುವಾಹನೋ ವಚೋ ಯುಧಿಷ್ಠಿರಂ ತ್ವಿದಮ್        ॥೨೧.೯೧॥

ಸರ್ವಸಮರ್ಥನಾದ ಕೃಷ್ಣಪರಮಾತ್ಮ ಈ ರೀತಿ ಹೇಳಿದ ನಂತರ,

ಭೀಮಸೇನನೇಕೆ ರಾಜಸೂಯದ ಪೂರ್ಣಫಲದ ಜವಾಬ್ದಾರ.

ಭೀಮನಲ್ಲಿದೆ ಮುಂದೆ ಚತುರ್ಮುಖ ಬ್ರಹ್ಮನಾಗುವ ಯೋಗ್ಯತಾ ಗುಣ,

ಅದೇ ಮಾತುಗಳ ಸ್ಪಷ್ಟವಾಗಿ ಹೇಳಿದ್ದ (ಶ್ರೀಕೃಷ್ಣ ) ವಾಯುವಾಹನ.

 

ಕ್ವ ರಾಜಸೂಯಮದ್ಯ ತೇ ಜರಾಸುತೇ ತು ಜೀವತಿ ।

ಜಯೇತ್ ಕ ಏವ ತಂ ಯುಧಾ ಮೃತೋ ನ ಯೋsಪಿ ಸೀರಿಣಾ ॥೨೧.೯೨॥

ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ರಾಜಸೂಯ ಯಾಗ ಸಾಧ್ಯವಿಲ್ಲ,

ಜರಾಸಂಧ ಬದುಕಿರುವಾಗ ಯಾರಿದ್ದಾರೆ ಅವನನ್ನು ಗೆಲ್ಲುವ ಮಲ್ಲ?

ಬಲರಾಮನಿಂದಲೂ ಅವನಿಗೆ ಬರಲಿಲ್ಲ ಸಾವು,

ಯಾರಲ್ಲಿದೆ ಅವನ ಗೆಲ್ಲುವ ಛಲ ಬಲದ ಕಾವು.

 

ವಿರಿಞ್ಚಶರ್ವವಾಕ್ಯತಃ ಸಮಸ್ತಲೋಕಜಾಯಿನಿ ।

ಸ್ಥಿತೇ ತು ತೇ ಜರಾಸುತೇ ನ ಸೇತ್ಸ್ಯತಿ ಕ್ರತೂತ್ತಮಃ     ॥೨೧.೯೩॥ 

ಬ್ರಹ್ಮ ರುದ್ರರ ವರದಿಂದ ಸಮಸ್ತ ಲೋಕ ಗೆದ್ದಿರುವ ಜರಾಸಂಧ,

ಅವನಿರುವವರೆಗೂ ನಿನ್ನಿಂದ ರಾಜಸೂಯ ಯಾಗವು ಅಸಾಧ್ಯ.

 

ಇತೀರಿತೇ ರಥಾಙ್ಗಿನಾ ಜಗಾದ ಧರ್ಮ್ಮನನ್ದನಃ ।

ನಿವರ್ತ್ತಿತಂ ಮನಃ ಕ್ರತೋರಲಂ ಮಮಾಮುನಾ ಪ್ರಭೋ    ॥೨೧.೯೪॥

ಇಷ್ಟೆಲ್ಲವನ್ನೂ ಶ್ರೀಕೃಷ್ಣ ಹೇಳುತ್ತಾನೆ,

ಸಾವಧಾನದಿ ಧರ್ಮರಾಜ ಕೇಳುತ್ತಾನೆ,

ಪ್ರಭುವೇ ನನಗೆ ಯಜ್ಞವೇ ಬೇಡವೆನ್ನುತ್ತಾನೆ.

 

ಬಭೂವುರೇವ ಭೂಭೃತೋ ನಚಾsಧಿರಾಜ್ಯಮಾಪಿರೇ ।

ಯದಾ ಚ ಚಕ್ರವರ್ತ್ತಿನಸ್ತದೇದೃಶಾ ನ ಶತ್ರವಃ                          ॥೨೧.೯೫॥

ಈ ಮೊದಲು ಅನೇಕ ರಾಜರುಗಳು ಆಗಿಹೋಗಿರುವುದು ಸತ್ಯ,

ಎಲ್ಲರಿಗೆಲ್ಲಿತ್ತು ಪ್ರಪಂಚ ಗೆದ್ದು ಚಕ್ರವರ್ತಿ ಆಗಿ ಮೆರೆವ ಸಾಮರ್ಥ್ಯ.

ಹಿಂದೆ ಹರಿಶ್ಚಂದ್ರನಂಥವರು ಚಕ್ರವರ್ತಿಗಳು ಆಗಿದ್ದು ಇತಿಹಾಸ,

ಜರಾಸಂಧನಂಥ ಶತ್ರುಗಳಿರಲಿಲ್ಲವೆಂಬುದು ಗಮನಿಸೋ ಅಂಶ.

 

ಇತೀರಿತೇsಮುನಾsವದತ್ ಪ್ರಧಾನಮಾರುತಾತ್ಮಜಃ ।

ಪದಂ ಚತುರ್ಮ್ಮುಖಸ್ಯ ವಾ ಸುಸಾದ್ಧ್ಯಮೇವ ಯತ್ನತಃ              ॥೨೧.೯೬॥

ಹೀಗೆ ಹೇಳುವಾಗ ಮುಖ್ಯಪ್ರಾಣಸುತ ಭೀಮಸೇನ ಹೇಳುತ್ತಾನೆ,

ಪ್ರಯತ್ನ ಮಾಡಿದರೆ ದಕ್ಕಿಸಿಕೊಳ್ಳಬಹುದು ಬ್ರಹ್ಮಪದವಿಯನ್ನೇ.

 

ನಿಜಾನುಭಾವವರ್ಜ್ಜಿತಾ ಹರೇರನುಗ್ರಹೋಜ್ಝಿತಾಃ ।

ಮಹಾಪ್ರಯತ್ನವರ್ಜ್ಜಿತಾ ಜನಾ ನ ಜಗ್ಮುರುನ್ನತಿಮ್                 ॥೨೧.೯೭॥

ಸ್ವರೂಪಭೂತವಾದ ಭಕ್ತಿಯಿಂದ ರಹಿತ,

ಭಗವಂತನ ಅನುಗ್ರಹದಿಂದ ವರ್ಜಿತ,

ಮಹಾಪ್ರಯತ್ನವನ್ನೇ ಮಾಡದಂಥಾ ಜನ,

ಹೊಂದಲಾರರು ಎಂದೂ ಎತ್ತರದ ಸ್ಥಾನ ಮಾನ.

 

ಸ್ಥಿರೋsನುಭಾವ ಏವ ಮೇ ಮಹಾನನುಗ್ರಹೋ ಹರೇಃ ।

ಪ್ರಯತ್ನಮೇಕಮಗ್ರತೋ ನಿಧಾಯ ಭೂತಿಮಾಪ್ನುಮಃ              ॥೨೧.೯೮॥

ಭಗವಂತನಲ್ಲಿ ನನಗಿರುವ ಭಕ್ತಿ ಸ್ಥಿರ,

ಸದಾ ಇದೆ ಭಗವದನುಗ್ರಹದ ಧಾರ,

ನಮ್ಮ ಪ್ರಯತ್ನವನ್ನು ಮಾಡೋಣ,

ಪ್ರಯತ್ನದಿಂದ ಸಂಪತ್ತು ಗಳಿಸೋಣ.


[Contributed by Shri Govind Magal]

No comments:

Post a Comment

ಗೋ-ಕುಲ Go-Kula