Sunday 25 February 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 3: 52 - 53


ತತಃ ಪುಲಸ್ತ್ಯಸ್ಯ ಕುಲೇ ಪ್ರಸೂತೌ ತಾವಾದಿದೈತ್ಯೌ ಜಗದೇಕಶತ್ರೂ ।
ಪರೈರವಧ್ಯೌ ವರತಃ ಪುರಾ ಹರೇಃ ಸುರೈರಜೈಯೌ ಚ ವರಾದ್ ವಿಧಾತುಃ  ॥೩.೫೨॥

ಆನಂತರ ಪುಲಸ್ತ್ಯ ಕುಲದಲ್ಲಿ ಹುಟ್ಟಿದ ಆದಿದೈತ್ಯರು,
ಬ್ರಹ್ಮವರಬಲದಿಂದಾದರು ಅವಧ್ಯರು ಅಜೇಯರು.

ಸರ್ವೈರಜೇಯಃ ಸ ಚ ಕುಮ್ಭಕರ್ಣಃ ಪುರಾತನೇ ಜನ್ಮನಿ ಧಾತುರೇವ ।
ವರಾನ್ನರಾದೀನೃತ ಏವ ರಾವಣಸ್ತದಾತನಾತ್ ತೌ ತ್ರಿದಶಾನಬಾಧತಾಮ್  ॥೩.೫೩॥

ಕುಂಭಕರ್ಣಗೆ ಬ್ರಹ್ಮವರದಿಂದ ಅಜೇಯತ್ವದ ಪಟ್ಟ,
ರಾವಣನೂ ನರವಾನರ ಬಿಟ್ಟು ಅಜೇಯನಾದ ಘಟ್ಟ.
ಇವರಿಬ್ಬರಿಂದಲೂ ದೇವತೆಗಳಿಗೆ ಬಗೆ ಬಗೆಯ ಪೀಡಾಟ.
 
ತದಾsಬ್ಜಜಂ ಶೂಲಿನಮೇವ ಚಾಗ್ರತೋ ನಿಧಾಯ ದೇವಾಃ ಪುರುಹೂತಪೂರ್ವಕಾಃ ।
ಪಯೋಮ್ಬುಧೌ ಭೋಗಿಪಭೋಗಶಾಯಿನಂಸಮೇತ್ಯ ಯೋಗ್ಯಾಂ ಸ್ತುತಿಮಭ್ಯಯೋಜಯನ್ ॥೩.೫೪॥

ರಾವಣ ಕುಂಭಕರ್ಣರಿಂದ ಪೀಡಿತ ದೇವತಾವೃಂದ,
ಬ್ರಹ್ಮರುದ್ರಾದಿಗಳು ಧಾವಿಸಿದರು ಶೇಷಶಾಯಿಯ ಮುಂದ.
ಕ್ಷೀರಸಾಗರದಲ್ಲಿ ಶೇಷನ ಮೇಲೆ ಮಲಗಿದ್ದ ಶ್ರೀಹರಿ,
ದೇವಾನುದೇವತೆಗಳೆಲ್ಲ ಹರಿಸಿದರು ಸ್ತೋತ್ರದ ಝರಿ.
[Contributed by Shri Govind Magal]


No comments:

Post a Comment

ಗೋ-ಕುಲ Go-Kula