Tuesday 27 February 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 3: 58 - 62


ತ್ವಯಾ ಪುರಾ ಕರ್ಣಪುಟಾದ್ ವಿನಿರ್ಮಿತೌ ಮಹಾಸುರೌ ತೌ ಮಧುಗಕೈಟಭಾಖ್ಯೌ ।
ಪ್ರಭಞ್ಜನಾವೇಶವಶಾತ್ ತವಾsಜ್ಞಯಾ ಬಲೋದ್ಧತಾವಾಶು ಜಲೇ ವ್ಯವರ್ಧತಾಮ್ ॥೩.೫೮॥

ನೀನು ಹಿಂದೆ ಕರ್ಣಪುಟದಿಂದ ಸೃಜಿಸಿದ ಮಧುಕೈಟಭರು,
ವಾಯುವಿನಾವೇಷದಿಂದ ಬಲಾಢ್ಯರಾಗಿ ದೇವಪೀಡಕರಾದರು.
ನಿನ್ನಾಜ್ಞೆಯಂತೆಯೇ ಬಲದರ್ಪದಿಂದ ಪ್ರಳಯ ಜಲದಿ ಪ್ರಬಲರಾದರು.

ತ್ವದಾಜ್ಞಯಾ ಬ್ರಹ್ಮವರಾದವಧ್ಯೌ ಚಿಕ್ರೀಡಿಷಾಸಮ್ಭವಯಾ ಮುಖೋದ್ಗತಾನ್ ।
ಸ್ವಯಮ್ಭುವೋ ವೇದಗಣಾನಹಾರ್ಷತಾಂ ತದಾsಭವಸ್ತ್ವಂ ಹಯಶೀರ್ಷ ಈಶ್ವರಃ  ॥೩.೫೯॥

ನಿನ್ನಾಜ್ಞೆ ಬ್ರಹ್ಮವರದಿಂದ ಅವಧ್ಯರಾದ ಮಧುಕೈಟಭರು,
ಬ್ರಹ್ಮಮುಖದಿಂದ ಬಂದ ವೇದಾಭಿಮಾನಿಗಳ ಅಪಹರಿಸಿದರು.
ಅನಂತರೂಪಿ/ಅವತಾರಿಯಾದ ನೀನಾದೆ ಆಗ ಹಯಗ್ರೀವದೇವರು.

ಆಹೃತ್ಯ ವೇದಾನಖಿಲಾನ್ ಪ್ರದಾಯ ಸ್ವಯಮ್ಭುವೇ ತೌ ಚ ಜಘನ್ಥ ದಸ್ಯೂ ।
ನಿಷ್ಪೀಡ್ಯ ತಾವೂರುತಳೇ ಕರಾಭ್ಯಾಂ ತನ್ಮೇದಸೈವಾsಶು ಚಕರ್ಥ ಮೇದಿನೀಮ್ ॥೩.೬೦॥

ಅಪಹರಿಸಿದ ವೇದಗಳ ಕಸಿದು ಬ್ರಹ್ಮಗಿತ್ತೆ,
ಕಳ್ಳರ ತೊಡೆಯಲಿಟ್ಟು ತಾಡನದಿ ಅವರ ಜೀವ ಕಿತ್ತೆ.
ಅವರಿಂದ ಸೆಳೆಯಲ್ಪಟ್ಟ ಮೇದಸ್ಸು,
ಮೇದಿನಿ ಸೃಷ್ಟಿಗಾಯ್ತದು ರೇತಸ್ಸು.

ಏವಂ ಸುರಾಣಾಂ ಚ ನಿಸರ್ಗಜಂ ಬಲಂ ತಥಾsಸುರಾಣಾಂ ವರದಾನಸಮ್ಭವಮ್ ।
ವಶೇ ತವೈತದ್ ದ್ವಯಮಪ್ಯತೋ ವಯಂ ನಿವೇದಯಾಮಃ ಪಿತುರೇವ ತೇsಖಿಲಮ್ ॥೩.೬೧॥

ದೇವತೆಗಳಲ್ಲಿರುವ ಸಹಜವಾದ ಬಲ,
ದೈತ್ಯರಲ್ಲಿ ತುಂಬಿಕೊಂಡಿರುವ ವರ ಬಲ,
ಎರಡೂ ನಿನ್ನದೇ ವಶ- ನೀನೇ ಕಾರಣ,
ತಂದೇ ನಿನಗೆ ವಂದನ -ನಿನ್ನಲ್ಲೇ ನಿವೇದನ.

ಇಮೌ ಚ ರಕ್ಷೋಧಿಪತೀ ವರೋದ್ಧತೌ ಜಹಿ ಸ್ವವೀರ್ಯೇಣ ನೃಷು ಪ್ರಭೂತಃ ।

ಇತೀರಿತೇ ತೈರಖಿಲೈಃ ಸುರೇಶ್ವರೈರ್ಬಭೂವ ರಾಮೋ ಜಗತೀಪತಿಃ ಪ್ರಭುಃ ॥೩.೬೨॥

ಹಿರಣ್ಯಾಕ್ಷ ಹಿರಣ್ಯಕಶಿಪುಗಳಾಗಿದ್ದಾರೆ ರಾವಣ ಕುಂಭಕರ್ಣ,
ವರಬಲದಿಂದ ಅವಧ್ಯರಾದವರ ಅಟ್ಟಹಾಸವದು ಬಲು ದಾರುಣ.
ದೇವತೆಗಳು ಪ್ರಾರ್ಥಿಸಿದರು ಹರಿಗೆ ತಾಳಲು ಮಾನವ ಜನ್ಮ,
ಪ್ರಾರ್ಥನೆಗೊಲಿದ ನಾರಾಯಣನಾದ ದಶರಥ ಪುತ್ರ ರಾಮ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula