Monday 26 February 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 3: 54 - 57

ತದಾsಬ್ಜಜಂ ಶೂಲಿನಮೇವ ಚಾಗ್ರತೋ ನಿಧಾಯ ದೇವಾಃ ಪುರುಹೂತಪೂರ್ವಕಾಃ ।
ಪಯೋಮ್ಬುಧೌ ಭೋಗಿಪಭೋಗಶಾಯಿನಂಸಮೇತ್ಯ ಯೋಗ್ಯಾಂ ಸ್ತುತಿಮಭ್ಯಯೋಜಯನ್ ॥೩.೫೪॥

ರಾವಣ ಕುಂಭಕರ್ಣರಿಂದ ಪೀಡಿತ ದೇವತಾವೃಂದ,
ಬ್ರಹ್ಮರುದ್ರಾದಿಗಳು ಧಾವಿಸಿದರು ಶೇಷಶಾಯಿಯ ಮುಂದ.
ಕ್ಷೀರಸಾಗರದಲ್ಲಿ ಶೇಷನ ಮೇಲೆ ಮಲಗಿದ್ದ ಶ್ರೀಹರಿ,

ದೇವಾನುದೇವತೆಗಳೆಲ್ಲ ಹರಿಸಿದರು ಸ್ತೋತ್ರದ ಝರಿ.

ತ್ವಮೇಕ ಈಶಃ ಪರಮಃ ಸ್ವತನ್ತ್ರಃ ತ್ವಮಾದಿರನ್ತೋ ಜಗತೋ ನಿಯೋಕ್ತಾ ।
ತ್ವದಾಜ್ಞಯೈವಾಖಿಲಮಮ್ಬುಜೋದ್ಭವಾ ವಿತೇನಿರೇsಗ್ರ್ಯಾಶ್ಚರಮಾಶ್ಚ ಯೇsನ್ಯೇ ॥೩.೫೫॥

ಈ ಜಗತ್ತಿಗೆ ನೀನೊಬ್ಬನೇ ಒಬ್ಬ ಒಡೆಯ,
ಈ ಜಗತ್ತು ನಿನ್ನಿಂದಲೇ ಆದದ್ದು ಉದಯ.
ನೀನೇ ಆದಿ ನೀನೇ ಅಂತ್ಯ ನೀನೇ ಪ್ರೇರಕ,
ನಿನ್ನಾಜ್ಞೆಯಿಂದಲೇ ಬ್ರಹ್ಮಂದಿರ ಸೃಷ್ಟಿಯ ಕಾಯಕ.
ಹಿಂದಿನ ಮುಂದಿನ ಇಂದಿನ ಬ್ರಹ್ಮನೂ ನಿನ್ನಾಜ್ಞಾಧಾರಕ.

ಮನುಷ್ಯಮಾನಾತ್ ತ್ರಿಶತಂ ಸಷಷ್ಟಿಕಂ ದಿವೌಕಸಾಮೇಕಮುಶನ್ತಿ ವತ್ಸರಮ್ ।
ದ್ವಿಷಟ್ಸಹಸ್ರೈರಪಿ ತೈಶ್ಚತುರ್ಯದಂ ತ್ರೇತಾದಿಭಿಃ ಪಾದಶ ಏವ ಹೀನೈಃ   ॥೩.೫೬॥

ಮನುಷ್ಯ ಮಾನದ ಮುನ್ನೂರರವತ್ತು ವರ್ಷ,
ದೇವತಾಮಾನಕ್ಕೆ ಅದು ಬರೀ ಒಂದು ವರ್ಷ.
ದೇವತೆಗಳ ಹನ್ನೆರಡು ಸಾವಿರ ವರ್ಷಗಳ ಕಾಲದ ಅವಧಿ,
ಮನುಷ್ಯರಿಗೆ ಕೃತ ತ್ರೇತಾ ದ್ವಾಪರ ಕಲಿಯುಗಗಳೆಂದು ನಿಗದಿ.
ಯುಗದಿಂದ ಯುಗಕ್ಕೆ ಕ್ರಮೇಣ ಕಾಲುಭಾಗ ಕಡಿತವಾಗೋ ಕ್ರಮ,
ಕಾಲಾಂತರ್ಗತ ಕಾಲನಿಯಾಮಕ ಕಾಲನಾಮಕನ ಕಾಣದ ನೇಮ.

ಸಹಸ್ರವೃತ್ತಂ ತದಹಃ ಸ್ವಯಮ್ಭುವೋ ನಿಶಾ ಚ ತನ್ಮಾನಮಿತಂ ಶರಚ್ಛತಮ್ ।
ತ್ವದಾಜ್ಞಯಾ ಸ್ವಾನನುಭೂಯ ಭೋಗಾನುಪೈತಿ ಸೋsಪಿತ್ವರಿತಸ್ತ್ವದನ್ತಿಕಮ್  ॥೩.೫೭॥

ಸಾವಿರ ಬಾರಿ ಸುತ್ತಿದಾಗ ಚತುರ್ಯುಗ ಬ್ರಹ್ಮನ ಒಂದು ಹಗಲು,
ಸಾವಿರ ಬಾರಿ ಸುತ್ತಿದಾಗ ಚತುರ್ಯುಗ ಬ್ರಹ್ಮನ ಒಂದು ಇರುಳು.
ಈ ಗಣನೆಯಿಂದ ಬ್ರಹ್ಮನ ಸಾಧನೆ ನೂರು ವರ್ಷ.
ತನ್ನ ಕೆಲಸಗಳ ಪೂಜೆಮುಗಿಸಿ ನಿನ್ನ ಸೇರುವ ಹರ್ಷ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula