Wednesday 28 February 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 3: 63 - 67


ಸ ಕಶ್ಯಪಸ್ಯಾದಿತಿಗರ್ಭಜನ್ಮನೋ ವಿವಸ್ವತಸ್ತನ್ತುಭವಸ್ಯ ಭೂಭೃತಃ ।
ಗೃಹೇ ದಶಸ್ಯನ್ದನನಾಮಿನೋsಭೂತ್ ಕೌಸಲ್ಯಕಾನಾಮ್ನಿ ತದರ್ಥಿನೇಷ್ಟಃ ॥೩.೬೩ll

ಕಾಶ್ಯಪ ಅದಿತಿಯಲ್ಲಿ ಹುಟ್ಟಿದ ಮಕ್ಕಳಲ್ಲೊಬ್ಬ ಸೂರ್ಯ,
ಆ ಸೂರ್ಯವಂಶದಲ್ಲೆ ದಶರಥನ ಮಗನಾದ ರಾಮಚಂದ್ರ.
ಅದಕ್ಕಾಗೇ ದಶರಥ ಮಾಡಿದ್ದ ಪುತ್ರಕಾಮೇಷ್ಟಿ ಯಾಗ,
ಕೌಸಲ್ಯೆಯಲ್ಲಿ ರಾಮ ಮಗನಾಗಿ ಹುಟ್ಟಿಬಂದ ಯೋಗ.

ತದಾಜ್ಞಯಾ ದೇವಗಣಾ ಬಭೂವಿರೇ ಪುರೈವ ಪಶ್ಚಾದಪಿ ತಸ್ಯ ಭೂಮ್ನಃ ।
ನಿಷೇವಣಾಯೋರುಗಣಸ್ಯ ವಾನರೇಷ್ವಥೋ ನರೇಷ್ವೇವ ಚ ಪಶ್ಚಿಮೋದ್ಭವಾಃ॥೩.೬೪॥

ಭಗವದಾಜ್ಞೆ ಪಡೆದ ದೇವತಾವೃಂದ,
ಭುವಿಯಲ್ಲಿ ಹುಟ್ಟಿಬಂತು ಆಗಿ ಕಪಿವೃಂದ.
ಅದರಲ್ಲಿ ಕೆಲ ಕಪಿಗಳಾದರು  ರಾಮಾವತಾರಕ್ಕೆ ಮೊದಲು,
ಮತ್ತೆ ಕೆಲ ಕಪಿಗಳು ಮನುಷ್ಯರೂಪಿಗಳದು ನಂತರದ ಸಾಲು.

ಸ ದೇವತಾನಾಂ ಪ್ರಥಮೋ ಗುಣಾಧಿಕೋ ಬಭೂವ ನಾಮ್ನಾ ಹನುಮಾನ್ ಪ್ರಭಞ್ಜನಃ ।
ಸ್ವಸಮ್ಭವಃ ಕೇಸರಿಣೋ ಗೃಹೇ ಪ್ರಭುರ್ಭಭೂವ ವಾಲೀ ಸ್ವತಃ ಏವ ವಾಸವಃ ॥೩.೬೫॥

ದೇವತೆಗಳಲ್ಲಿ ಶ್ರೇಷ್ಠನಾದ ಮುಖ್ಯಪ್ರಾಣ ದೇವ,
ಕೇಸರಿ ಅಂಜನಾರಲ್ಲಿ ಹುಟ್ಟಿದ ಹನುಮಂತನವ.
ದೇವಲೋಕಾಧಿಪತಿ ಇಂದ್ರದೇವ,
ತಾನೇ ವಾಲಿಯಾಗಿ ಆದ ಆವಿರ್ಭಾವ.

ಸುಗ್ರೀವ ಆಸೀತ್ ಪರಮೇಷ್ಠಿತೇಜಸಾ ಯುತೋ ರವಿಃ ಸ್ವಾತ್ಮತ ಏವ ಜಾಮ್ಬವಾನ್ ।
ಯ ಏವ ಪೂರ್ವಂ ಪರಮೇಷ್ಠಿವಕ್ಷಸಸ್ತ್ವಗುದ್ಭವೋ ಧರ್ಮ ಇಹಾsಸ್ಯತೋSಭವತ್ ॥೩.೬೬॥

ಬ್ರಹ್ಮಾವೇಶದಿಂದ ಕೂಡಿದ ಸೂರ್ಯ ತಾನಾದ ಸುಗ್ರೀವ.
ಹಿಂದೆ ಬ್ರಹ್ಮನೆದೆ ಚರ್ಮದಿಂದ ಹುಟ್ಟಿದವ ಯಮರಾಯ.
ಬ್ರಹ್ಮಾವೇಶದಿಂದ ಬ್ರಹ್ಮಮುಖದಿ ಪಡೆದ ಜಾಂಬವಂತ ಕಾಯ.

ಯ ಏವ ಸೂರ್ಯಾತ್ ಪುನರೇವ ಸಂಜ್ಞಯಾ ನಾಮ್ನಾ ಯಮೋ ದಕ್ಷಿಣದಿಕ್ಪ ಆಸೀತ್ ।
ಸ ಜಾಮ್ಬವಾನ್ ದೈವತಕಾರ್ಯದರ್ಶಿನಾ ಪುರೈವ ಸೃಷ್ಟೋ ಮುಖತಃ ಸ್ವಯಮ್ಭುವಾ॥೩.೬೭॥

ಸೂರ್ಯ ಸಂಜ್ಞಾದೇವಿಯಲ್ಲಿ ಹುಟ್ಟಿದ ಯಮಧರ್ಮ,
ಯಮನಾಮದಿಂದವನ ದಕ್ಷಿಣ ದಿಕ್ಪಾಲನೆಯ ಕರ್ಮ,
ಬ್ರಹ್ಮಮುಖದಿಂದ ಜಾಂಬವಂತನಾಗಿ ಹುಟ್ಟಿದ ಮರ್ಮ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula