Sunday 18 June 2023

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 26: 197-204

 

ತತೋ ದ್ರೌಣಿಮುಖಾಂ ಸೇನಾಂ ಸರ್ವಾಂ ಭೀಮೋSಭ್ಯವರ್ತ್ತತ ।

ಪಾರ್ತ್ಥಃ ಕರ್ಣ್ಣಮುಖಾಞ್ಛಿಷ್ಟಾನ್ ತತೋSಭಜ್ಯತ ತದ್ ಬಲಮ್ ॥೨೬.೧೯೭ ॥

 

ಆನಂತರ ಅಶ್ವತ್ಥಾಮನ ನೇತೃತ್ವದ ಸೈನ್ಯವನ್ನು ಭೀಮ ಎದುರಿಸಿದ,

ಕರ್ಣ ನೇತೃತ್ವ ವಹಿಸಿದ ಕೌರವ ಸೇನೆಯನ್ನು ಅರ್ಜುನ ಎದುರಿಸಿದ.

ಆಗ ಕೌರವರ ಬಲವು ಎರಡು ಸೀಳಾಯಿತು ಪಾಂಡವ ದಾಳಿಯಿಂದ.

 

ಶೀರ್ಣ್ಣಾಂ ಸೇನಾಂ ಪ್ರವಿವಿಶುರ್ದ್ಧೃಷ್ಟದ್ಯುಮ್ನಪುರೋಗಮಾಃ ।

ತತಸ್ತಂ ದೇಶಮಾಪುಸ್ತೇ ಯತ್ರ ಭೀಮಧನಞ್ಜಯೌ ॥೨೬.೧೯೮ ॥

 

ಆಗ ಧೃಷ್ಟದ್ಯುಮ್ನ ಮುಂತಾದವರು ಸೋತು ಸೀಳಾದ ಸೈನ್ಯ ಪ್ರವೇಶಿಸುತ್ತಾರೆ,

ಕೌರವಸೇನೆಯ ಸೋಲಿಸಿ ಹೋಳು ಮಾಡಿದ ಭೀಮಾರ್ಜುನರಲ್ಲಿಗೆ ಬರುತ್ತಾರೆ.

 

 

ತತ ಏಕೀಕೃತಾಃ ಸರ್ವೇ ಪಾಣ್ಡವಾಃ ಸಹಸೋಮಕಾಃ ।

ಪರಾನ್ ವಿದ್ರಾವಯಾಮಾಸುಸ್ತೇ ಭೀತಾಃ ಪ್ರಾದ್ರವನ್ ದಿಶಃ ॥೨೬.೧೯೯ ॥

 

ಆನಂತರ ಪಾಂಚಾಲಾದಿ ಎಲ್ಲಾ ಪಾಂಡವ ಪಕ್ಷದವರು ಶತ್ರುಗಳನ್ನು ಓಡಿಸಿದರು,

ಆಗ ಭಯಗೊಂಡ ಕೌರವ ಪಾಳಯದವರು ಸಿಕ್ಕ-ಸಿಕ್ಕ ಕಡೆಗೆ ಓಡಿಹೋದರು. 

 

ವಿದ್ರಾಪ್ಯಮಾಣಂ ಸೈನ್ಯಂ ತಂ ದೃಷ್ಟ್ವಾ ದುರ್ಯ್ಯೋಧನೋ ನೃಪಃ ।

ಜಯದ್ರಥವಧಾಚ್ಚೈವ ಕುಪಿತೋSಭ್ಯದ್ರವತ್ ಪರಾನ್ ॥೨೬.೨೦೦ ॥

 

ಓಡಿಸಲ್ಪಡುತ್ತಿರುವ ಸೈನ್ಯವನ್ನು ನೋಡಿದ , ಜಯದ್ರಥನ ಸಾವಿನಿಂದ ವಿಪರೀತ ನೊಂದ, ಸಿಟ್ಟುಗೊಂಡಿರುವ ರಾಜ ದುರ್ಯೋಧನನು, ಯುದ್ಧಕ್ಕೆ ತೆರಳಿದ ಎದುರಿಸಲು ಶತ್ರುಗಳನ್ನು.

 

ಸ ಭೀಮಸೇನಂ ಚ ಧನಞ್ಜಯಂ ಚ ಯುಧಿಷ್ಠಿರಂ ಮಾದ್ರವತೀಸುತೌ ಚ ।

ಧೃಷ್ಟದ್ಯುಮ್ನಂ ಸಾತ್ಯಕಿಂ ದ್ರೌಪದೇಯಾನ್ ಸರ್ವಾನೇಕಃ ಶರವರ್ಷೈರ್ವವರ್ಷ ॥೨೬.೨೦೧ ॥

 

ಆ ದುರ್ಯೋಧನನು ಭೀಮಸೇನನನ್ನು, ಅರ್ಜುನ, ಯುಧಿಷ್ಠಿರ,ಧೃಷ್ಟದ್ಯುಮ್ನನನ್ನು, ನಕುಲ-ಸಹದೇವ,ಧೃಷ್ಟದ್ಯುಮ್ನ,ಸಾತ್ಯಕಿಯನ್ನು ,

ಐದು ಜನ ದ್ರೌಪದೇಯರು, ಇವರೆಲ್ಲರನ್ನೂ, ಒಬ್ಬನೇ ತನ್ನ ಶರವರ್ಷದಿಂದ ಪೀಡಿಸಿದನು.

 

ತೇ ವಿವ್ಯಧುಸ್ತಂ ಬಹುಭಿಃ ಶಿಲೀಮುಖೈಃ ಸ ತಾನನಾದೃತ್ಯ ಚಕರ್ತ್ತ ಬಾಣೈಃ ।

ಧನೂಂಷಿ ಚಿತ್ರಾಣಿ ಮಹಾರಥಾನಾಂ ಚಕಾರ ಸಙ್ಖೇ ವಿರಥೌ ಯಮೌ ಚ ॥೨೬.೨೦೨ ॥

 

ಅವರೆಲ್ಲರೂ ದುರ್ಯೋಧನನನ್ನು ಎದುರಿಸಿ, ಬಹಳ ಬಾಣಗಳಿಂದ ಹೊಡೆಯುತ್ತಾರೆ. ದುರ್ಯೋಧನನೋ ಯಾವುದನ್ನೂ ಲೆಕ್ಕಿಸದೇ, ಕಡೆಗಣಿಸಿ ಸುರಿಸುತ್ತಾನೆ ಬಾಣಗಳಧಾರೆ.

ರಥಿಕರ ಬಹಳ ವಿಚಿತ್ರವಾದ ಬಿಲ್ಲುಗಳನ್ನು ಕತ್ತರಿಸುತ್ತಾನೆ,

ಯುದ್ಧದಿ ನಕುಲ ಸಹದೇವರನ್ನು ರಥಹೀನ  ಮಾಡುತ್ತಾನೆ .

 

ಆದಾಯ ಚಾಪಾನಿ ಪರಾಣಿ ತೇSಪಿ  ದುರ್ಯ್ಯೋಧನಂ ವವೃಷುಃ ಸಾಯಕೌಘೈಃ ।

ಅಚಿನ್ತಯಿತ್ವೈವ ಶರಾನ್ತ್ಸ ಏಕೋ ನ್ಯವಾರಯತ್ ತಾನಖಿಲಾಂಶ್ಚ ಬಾಣೈಃ ॥೨೬.೨೦೩ ॥

 

 

ಅವರೆಲ್ಲರೂ ಕೂಡಾ ಬೇರೆ ಬಿಲ್ಲುಗಳನ್ನು ತೆಗೆದುಕೊಳ್ಳುತ್ತಾರೆ,

ದುರ್ಯೋಧನನನ್ನು ಬಾಣಗಳ ಮಳೆಯಿಂದ ಪೀಡಿಸುತ್ತಾರೆ.

ದುರ್ಯೋಧನ ಒಬ್ಬನೇ ಅವರ ಬಾಣಗಳನ್ನು ಕಡೆಗಣಿಸುತ್ತಾನೆ,

ಅವರೆಲ್ಲರನ್ನೂ ಕೂಡಾ ತನ್ನ ತೀಕ್ಷ್ಣ ಬಾಣಗಳಿಂದ ತಡೆಯುತ್ತಾನೆ .

 

ತಂ ಗಾಹಮಾನಂ ದ್ವಿಷತಾಂ ಬಹೂನಾಂ ಮದ್ಧ್ಯೇ ದ್ರೋಣದ್ರೌಣಿಕೃಪಪ್ರಧಾನಾಃ ।

ದೃಷ್ಟ್ವಾ ಸರ್ವೇ ಜುಗುಪುಃ ಸ್ವಾತ್ತಚಾಪಾ ಅನಾರತಂ ಬಾಣಗಣಾನ್ ಸೃಜನ್ತಃ ॥೨೬.೨೦೪ ॥

 

ಹೀಗೆ, ಬಹಳ ಶತ್ರುಗಳ ನಡುವೆ ಒಂಟಿಯಾಗಿ ಸಿಕ್ಕಿಹಾಕಿಕೊಂಡಿರುವ ದುರ್ಯೋಧನನನ್ನು ನೋಡಿ,

ದ್ರೋಣ, ಅಶ್ವತ್ಥಾಮ, ಕೃಪ, ಎಲ್ಲರೂ ಕೂಡಾ ಬರುತ್ತಾರೆ ತಮ್ಮ ಬಿಲ್ಲುಗಳಿಗೆ ಬಾಣಗಳನ್ನು ಹೂಡಿ.

ಬಾಣಗಳನ್ನು ಬಿಡುತ್ತಾ ಬರುತ್ತಾರೆ, ದುರ್ಯೋಧನನನ್ನು ರಕ್ಷಿಸುತ್ತಾರೆ .

No comments:

Post a Comment

ಗೋ-ಕುಲ Go-Kula