Sunday 25 June 2023

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 27: 171-192

 

ವವರ್ಷತುಸ್ತೌ ಚ ಮಹಾಸ್ತ್ರಶಸ್ತ್ರೈರ್ಭೀಮೋ ರಥಸ್ಥೋSವರಜಂ ಜುಗೋಪ ।

ಶೈನೇಯಪಾಞ್ಚಾಲಮುಖಾಶ್ಚ ಪಾರ್ತ್ಥಮಾವಾರ್ಯ್ಯ ತಸ್ಥುಃ ಪ್ರಸಭಂ ನದನ್ತಃ ॥೨೭.೧೭೧ ॥

 

ಮಹಾ ಶಸ್ತ್ರಾಸ್ತ್ರಗಳಿಂದ ಕರ್ಣಾರ್ಜುನರು,          ಪರಸ್ಪರ ಮಳೆಯನ್ನೇ ಕರೆದುಕೊಂಡರು.

ಅರ್ಜುನನನ್ನು ರಕ್ಷಿಸುವನಾಗಿ ರಥದಲ್ಲಿ ಕುಳಿತ  ಭೀಮಸೇನ,

ಸಾತ್ಯಕಿ, ದ್ರುಪದಾದಿಗಳು ಸುತ್ತಲೂ ನಿಂತರು ಅರ್ಜುನನ್ನ,

ಹಾಗೆ ರಕ್ಷಣೆಗೆ ನಿಂತವರು ಗಟ್ಟಿಯಾಗಿ ಮಾಡಿದರು ಗರ್ಜನ.

 

ದುರ್ಯ್ಯೋಧನೋ ದ್ರೌಣಿಮುಖಾಶ್ಚ ಕರ್ಣ್ಣಂ ರರಕ್ಷುರಾವಾರ್ಯ್ಯ ತದಾSSಸ ಯುದ್ಧಮ್ ।

ತತ್ರಾರ್ಜ್ಜುನಂ ಬಾಣವರೈಃ ಸ ಕರ್ಣ್ಣಃ ಸಮರ್ದ್ದಯಾಮಾಸ ವಿಶೇಷಯನ್ ರಣೇ ॥೨೭.೧೭೨ ॥

 

ದುರ್ಯೋಧನ, ಅಶ್ವತ್ಥಾಮ, ಮೊದಲಾದ ಎಲ್ಲರೂ,

ಕರ್ಣನನ್ನು ಸುತ್ತುವರಿದು ಅವನ ರಕ್ಷಕರಾಗಿ ನಿಂತರು.

ಆಗ ಪ್ರಾರಂಭವಾದ ಯುದ್ಧದಲ್ಲಿ ಕರ್ಣನು, ಬಾಣಗಳಿಂದ ಅರ್ಜುನನನ್ನು ಪೀಡಿಸಿದನು.

 

ತದಾ ನದನ್ ಭೀಮಸೇನೋ ಜಗಾದ ಗದಾಂ ಸಮಾದಾಯ ಸಮಾತ್ತರೋಷಃ ।

ಅಹಂ ವೈನಂ ಗದಯಾ ಪೋಥಯಾಮಿ  ತ್ವಂ ವಾ ಜಹೀಮಂ ಸಮುಪಾತ್ತವೀರ್ಯ್ಯಃ ॥೨೭.೧೭೩ ॥

 

ಆಗ ಕೋಪದಿಂದ ತನ್ನ ಗದೆಯನ್ನು ಹಿಡಿದ, ಭೀಮ ಸಿಂಹನಾದ ಮಾಡುತ್ತಾ ಹೇಳಿದ.

ಅರ್ಜುನಾ - ‘ನಾನು ಈ ಗದೆಯಿಂದಲೇ ಕರ್ಣನನ್ನು ಕೊಲ್ಲುತ್ತೇನೆ,

ಅಥವಾ ನಿನ್ನ ಪರಾಕ್ರಮದಿಂದ ಅವನನ್ನು ಸೇರಿಸು ಸಾವಿನ ಮನೆ.

 

ಕೃಷ್ಣೋSಪಿ ತಂ ಬೋಧಯಾಮಾಸ ಸಮ್ಯಙ್ ನರಾವೇಶಂ ವ್ಯಞ್ಜಯನ್ ಭೂಯ ಏವ ।

ಸಮೃದ್ಧವೀರ್ಯ್ಯಃ  ಸ ತದಾ ಧನಞ್ಜಯಃ ಸುಯೋಧನದ್ರೌಣಿಕೃಪಾನ್ ಸಭೋಜಾನ್ ।

ಸಾಕಂ ಚ ಬಾಣೈರ್ವಿರಥಾಂಶ್ಚಕಾರ ವಿವ್ಯಾಧ ತಾನಪ್ಯರಿಹಾ ಸುಪುಙ್ಖೈಃ ॥೨೭.೧೭೪ ॥

 

ಶ್ರೀಕೃಷ್ಣನೂ ಕೂಡಾ ಮತ್ತೆ ಮತ್ತೆ ಅರ್ಜುನನನಿಗೆ ನರಾವೇಶವನ್ನು ನೆನಪಿದ,

ಆಗ ಅರ್ಜುನನು ದೈವಾನುಗ್ರಹದಿಂದ ಸಮೃದ್ಧಗೊಂಡ ವೀರ್ಯವುಳ್ಳವನಾದ.                               ಭೋಜರಾಜನಿಂದ ಕೂಡಿದ ದುರ್ಯೋಧನ, ಅಶ್ವತ್ಥಾಮ, ಕೃಪಾಚಾರ್ಯ ಇವರೆಲ್ಲರನ್ನ,                 ಏಕಕಾಲದಲ್ಲಿ ತನ್ನ ಬಾಣಗಳಿಂದ, ಅರ್ಜುನ ರಥಹೀನರ ಮಾಡಿದ. ಶತ್ರು ಸಂಹಾರಕನಾದ ಅರ್ಜುನನು,               ಶೋಭನವಾದ ತೀಕ್ಷ್ಣ  ಬಾಣಗಳನ್ನು, ದುರ್ಯೋಧನಾದಿಗಳಿಗೆ ಹೊಡೆದನು.

 

ತೇ ಕಿಞ್ಚಿದ್ ದೂರತಸ್ತಸ್ಥುಃ ಪಶ್ಯನ್ತೋ ಯುದ್ಧಮುತ್ತಮಮ್ ।

ಅಮಾನುಷಂ ತತ್ ಪಾರ್ತ್ಥಸ್ಯ ದೃಷ್ಟ್ವಾ ಕರ್ಮ್ಮ ಗುರೋಃ ಸುತಃ ।

ಗೃಹೀತ್ವಾ ಪಾಣಿನಾ ಪಾಣಿಂ ದುರ್ಯ್ಯೋಧನಮಭಾಷತ ॥೨೭.೧೭೫ ॥

 

ಆಗ ದುರ್ಯೋಧನಾದಿಗಳು ಅತ್ಯದ್ಭುತವಾದ ಆ ಯುದ್ಧವನ್ನು ನೋಡುವವರಾಗಿ ಸ್ವಲ್ಪ ದೂರದಲ್ಲಿ ನಿಂತಾಗ,

ದ್ರೋಣಪುತ್ರ ಅಶ್ವತ್ಥಾಮ ಅರ್ಜುನನ ಅಲೌಕಿಕ ಕರ್ಮವನ್ನು ಕಂಡು, ಕೌರವನ ಕೈಯನ್ನು ಹಿಡಿದು ಹೇಳುವನಾಗ.

 

ದೃಷ್ಟಂ ಹಿ ಭೀಮಸ್ಯ ಬಲಂ ತ್ವಯಾSದ್ಯ ತಥೈವ ಪಾರ್ತ್ಥಸ್ಯ ಯಥಾ ಜಿತಾ ವಯಮ್ ।

ಅಲಂ ವಿರೋಧೇನ ಸಮೇತ್ಯ ಪಾಣ್ಡವೈಃ ಪ್ರಶಾಧಿ ರಾಜ್ಯಂ ಚ ಮಯಾ ಸಮೇತಃ ॥೨೭.೧೭೬ ॥

 

ಭೀಮಸೇನ ಮತ್ತು ಅರ್ಜುನರ ಬಲದಿಂದ ನಾವು ಪರಾಜಿತರಾಗಿರುವುದು ನಿನ್ನಿಂದ ಕಾಣಲ್ಪಟ್ಟಿದೆ, ವಿರೋಧ ಸಾಕು ;ಪಾಂಡವರಿಂದ ಕೂಡಿಕೊಂಡು ರಾಜ್ಯಪಾಲನೆ ಮಾಡು. ನನ್ನ ಸಹಕಾರ ನಿನಗಿದೆ.

 

‘ಧನಞ್ಜಯಸ್ತಿಷ್ಠತಿ ವಾರಿತೋ ಮಯಾ ಜನಾರ್ದ್ದನೋ ನೈವ ವಿರೋಧಮಿಚ್ಛತಿ ।

ವೃಕೋದರಸ್ತದ್ವಚನೇ ಸ್ಥಿತಃ ಸದಾ ಯುಧಿಷ್ಠಿರಃ ಶಾನ್ತಮನಾಸ್ತಥಾ ಯಮೌ’ ॥೨೭.೧೭೭ ॥

 

ಹಿತಾರ್ತ್ಥಮೇತತ್ ತವ ವಾಕ್ಯಮೀರಿತಂ ಗೃಹಾಣ ಮೇ ನೈವ ಭಯಾದುದೀರಿತಮ್ ।

ಅಹಂ ಹ್ಯವದ್ಧ್ಯೋ ಮಮ ಚೈವ ಮಾತುಲೋ ನ ಶಙ್ಕಿತುಂ ಮೇ ವಚನಂ ತ್ವಮರ್ಹಸಿ ॥೨೭.೧೭೮ ॥

 

ಅರ್ಜುನ ನನ್ನಿಂದ ತಡೆಯಲ್ಪಟ್ಟವನಾಗಿ ಯುದ್ಧವನ್ನು ನಿಲ್ಲಿಸುತ್ತಾನೆ.

ಶ್ರೀಕೃಷ್ಣ ವಿರೋಧ ಇಚ್ಛಿಸುವುದಿಲ್ಲ;ಭೀಮ ಕೃಷ್ಣನಂತೆ ನಡೆಯುತ್ತಾನೆ.

ಧರ್ಮರಾಜನದು ಶಾಂತವಾದ ಮನ, ನಕುಲ-ಸಹದೇವರದೂ ಶಾಂತಗುಣ.

ನಿನ್ನ ಹಿತಕ್ಕಾಗಿ ಸ್ವೀಕರಿಸು ನನ್ನ ಈ ಮಾತು,

ನನ್ನ ಈ ಮಾತಿಗಿಲ್ಲ ಯಾವ ಭಯದ ಹೇತು.          

ನಾನು ಮತ್ತು ಕೃಪಾಚಾರ್ಯ ಅವಧ್ಯರು.

ಹೀಗಾಗಿ ನನ್ನ ಮಾತನ್ನು ಶಂಕಿಸದೇ ಇರು.

 

ಇತೀರಿತಃ ಪ್ರಾಹ ಸುಯೋಧನಸ್ತಂ ದುಃಶಾಸನಸ್ಯಾದ್ಯ ಪಪೌ ಹಿ ಶೋಣಿತಮ್ ।

ಶಾರ್ದ್ದೂಲಚೇಷ್ಟಾಮಕರೋಚ್ಚ ಭೀಮೋ ನ ಮೇ ಕಥಞ್ಚಿತ್ ತದನೇನ ಸನ್ಧಿಃ ॥೨೭.೧೭೯॥

 

ಈರೀತಿ ಅಶ್ವತ್ಥಾಮನಿಂದ ಹೇಳಲ್ಪಟ್ಟ ಸುಯೋಧನ ಹೇಳುತ್ತಾನೆ-,

‘ಭೀಮಸೇನ ಈಗಷ್ಟೇ ದುಃಶ್ಯಾಸನನ ರಕ್ತವನ್ನು ಪಾನ ಮಾಡಿದ್ದಾನೆ.

ಹುಲಿ ಚೇಷ್ಟೆಯನ್ನೂ ಮಾಡಿರುವ ಭೀಮಸೇನ,

ಯಾವ ಕಾರಣಕ್ಕೂ ಸಾಧ್ಯವಿಲ್ಲ ಶಾಂತಿಸಂಧಾನ.

 

ಇತ್ಯುಕ್ತೋ ದ್ರೌಣಿರಾಸೀತ್ ಸ ತೂಷ್ಣೀಂ ಕರ್ಣ್ಣಧನಞ್ಜಯೌ ।

ಮಹಾಸ್ತ್ರಶಸ್ತ್ರವರ್ಷೇಣ ಚಕ್ರತುಃ ಖಮನನ್ತರಮ್ ॥೨೭.೧೮೦ ॥

 

ದುರ್ಯೋಧನ ಈ ರೀತಿ ಹೇಳುತ್ತಾನೆ, ಅಶ್ವತ್ಥಾಮಾಚಾರ್ಯ ಸುಮ್ಮನಾಗುತ್ತಾನೆ.

ಕರ್ಣ-ಅರ್ಜುನರಿಬ್ಬರ ಮಹತ್ತಾದ ಆ ಕಾಳಗ,  ತುಂಬಿತು ಅಸ್ತ್ರ-ಶಸ್ತ್ರಗಳ ವೃಷ್ಟಿಯಿಂದ ನಭವಾಗ.

 

ಆಗ್ನೇಯವಾರುಣೈನ್ದ್ರಾದೀನ್ಯೇತಾನ್ಯನ್ಯೋನ್ಯಮೃತ್ಯವೇ ।

ಬ್ರಹ್ಮಾಸ್ತ್ರಮಪ್ಯುಭೌ ತತ್ರ ಪ್ರಯುಜ್ಯಾSನದತಾಂ ರಣೇ ।

ಅನ್ಯೋನ್ಯಾಸ್ತ್ರಪ್ರತೀಘಾತಂ ಕೃತ್ವೋಭೌ ಚ ವಿರೇಜತುಃ           ॥೨೭.೧೮೧ ॥

 

ಒಬ್ಬರನ್ನೊಬ್ಬರು ಕೊಲ್ಲುವುದಕ್ಕಾಗಿ ಆಗ್ನೇಯಾಸ್ತ್ರ,ವಾರುಣಾಸ್ತ್ರ, ಐನ್ದ್ರಾಸ್ತ್ರ,            

ಮುಂತಾದ ಅಸ್ತ್ರಗಳ ಜೊತೆ ಕರ್ಣಾರ್ಜುನರು ಪರಸ್ಪರ ಪ್ರಯೋಗಿಸಿಕೊಂಡರು ಬ್ರಹ್ಮಾಸ್ತ್ರ.

ಹಾಗೇ ಅಸ್ತ್ರಗಳ ಉಪಶಮನಮಾಡಿಕೊಂಡರು, ಹೀಗೆ ಮಾಡುತ್ತಾ ಎಲ್ಲರ ನಡುವೆ ಸಂಚರಿಸಿದರು.

 

ಕ್ರಮೇಣ ವೃದ್ಧೋರುಬಲೇನ ತತ್ರ ಸುರೇನ್ದ್ರಪುತ್ರೇಣ ವಿರೋಚನಾತ್ಮಜಃ ।

ನಿರಾಕೃತೋ ನಾಗಮಯಂ ಶರೋತ್ತಮಂ ಬ್ರಹ್ಮಾಸ್ತ್ರಯುಕ್ತಂ ವಿಸಸರ್ಜ್ಜ ವಾಸವೌ ॥೨೭.೧೮೨ ॥

 

ಆ ಯುದ್ಧದಲ್ಲಿ ಕ್ರಮೇಣವಾಗಿ ವೃದ್ಧಿಸಲ್ಪಟ್ಟ ಉತ್ಕೃಷ್ಟ ಬಲವುಳ್ಳ ಇಂದ್ರಪುತ್ರ ಅರ್ಜುನನನ್ನು,

ಎದುರಿಸುವುದು ಕಷ್ಟವಾದಾಗ ಕರ್ಣ ಬಿಡುತ್ತಾನೆ ಬ್ರಹ್ಮಾಸ್ತ್ರದಿಂದ ಕೂಡಿದ ನಾಗಾತ್ಮಕ ಬಾಣವನ್ನು.

(ಖಾಂಡವವನ ದಹನದ ಸಮಯದಲ್ಲಿ ಉಳಿದ,

ತಕ್ಷಕನ ಮಗ ಅಶ್ವಸೇನ ಅಲ್ಲಿ ಕೂಡಿಕೊಂಡಿದ್ದ.)

 

ತಂ ವಾಸುದೇವೋ ರಥಮಾನಮಯ್ಯ ಮೋಘಂ ಚಕಾರಾರ್ಜ್ಜುನತಃ ಕಿರೀಟಮ್ ।

ಚೂರ್ಣ್ಣೀಕೃತಂ ತೇನ ಸುರೇನ್ದ್ರಸೂನೋರ್ದ್ದಿವ್ಯಂ ಯಯೌ ಬಾಣಗತಶ್ಚ ನಾಗಃ ॥೨೭.೧೮೩ ॥

 

ಆಗ ವಾಸುದೇವನು ರಥವನ್ನು ಭೂಮಿಯಲ್ಲಿ ಕುಸಿಯುವಂತೆ ಮಾಡಿದ,

ಅರ್ಜುನನ ವಿಷಯದಲ್ಲಿ ಆ ನಾಗಬಾಣವನ್ನು ವ್ಯರ್ಥವನ್ನಾಗಿ ಮಾಡಿದ.

ಆ ಬಾಣದಿಂದ ಅರ್ಜುನನ ತಲೆ ಮೇಲಿನ ಕಿರೀಟವು ಚೂರ್ಣೀಕೃತವಾದಾಗ,

ಬಾಣದಲ್ಲಿದ್ದ ತಕ್ಷಕನ ಮಗ ಅಶ್ವಸೇನ ಆಗಸಕ್ಕೆ (ಕರ್ಣನ ಸೇರಲು)ಹಾರಿದನಾಗ.

 

ನಮಿತೇ ವಾಸುದೇವೇನ ರಥೇ ಪಞ್ಚಾಙ್ಗುಲಂ ಭುವಿ ।

ಅಪಾಙ್ಗದೇಶಮುದ್ದಿಶ್ಯ ಮುಕ್ತೇ ನಾಗೇ ಕಿರೀಟಿನಃ ॥೨೭.೧೮೪ ॥

 

ಭಙ್ಕ್ತ್ವಾ ಕಿರೀಟಂ ವಿಯತಿ ಗಚ್ಛತಿ ಪ್ರಭುಣೋದಿತಃ ।

ಬಾಣೈಸ್ತಕ್ಷಕಪುತ್ರಂ ತಂ ವಾಸವಿಃ ಪೂರ್ವವೈರಿಣಮ್ ॥೨೭.೧೮೫ ॥

 

ಹತ್ವಾ ನಿಪಾತಯಾಮಾಸ ಭೂಮೌ ಕರ್ಣ್ಣಸ್ಯ ಪಶ್ಯತಃ ।

ಬ್ರಹ್ಮಾಸ್ತ್ರಸ್ಯಾತಿವೇಗಿತ್ವಂ ಪ್ರಾಪ್ತಂ ಕರ್ಣ್ಣೇನ ಭಾರ್ಗ್ಗವಾತ್ ॥೨೭.೧೮೬ ॥

 

ಅರ್ಜುನನ ಹಣೆಗೆ ಗುರಿಯಾಗಿ ಬಿಡಲ್ಪಟ್ಟ್ಟಿತ್ತು ಆ ನಾಗಬಾಣ,

ನೆಲದಲ್ಲಿ ಐದಂಗುಲ ಕುಸಿಯುವಂತೆ ಮಾಡಿದ್ದ ಕೃಷ್ಣನೆಂಬ ಜಾಣ.

ಅರ್ಜುನನ ಕಿರೀಟವನ್ನು ಛೇದಿಸಿ ಆಕಾಶದಲ್ಲಿ ಹೋಗುತ್ತಿತ್ತು ಆ ಬಾಣ,

ಬಾಣದಿಂದ ಹೊಡೆದುರುಳಿಸಿದ ಅಶ್ವಸೇನನ ಕೇಳಿಕೊಂಡು ಕೃಷ್ಣನ ಮಾತನ್ನ.

ತಕ್ಷಕನ ಮಗನಾದ ಅಶ್ವಸೇನ ನೆಲಕ್ಕುರುಳಿದ ಇದ ನೋಡುತ್ತಿರುವಾಗಲೇ ಕರ್ಣ.

ಪರಶುರಾಮನ ದೆಸೆಯಿಂದ ಕರ್ಣ ಪ್ರಯೋಗಿಸಿದ್ದ  ಆ ಬ್ರಹ್ಮಾಸ್ತ್ರಕ್ಕೆ ಅತಿವೇಗವಿತ್ತು.

(ಹಾಗಾಗಿ ಕಿರೀಟ ಭಂಗಕ್ಕೆ ಮೊದಲೇ ಅರ್ಜುನಗೆ ಅಸ್ತ್ರಪರಿಹಾರ ಅಸಾಧ್ಯವಿತ್ತು.)

 

ಪುನಶ್ಚ ಪಾರ್ತ್ಥೇನ ಮಹಾಸ್ತ್ರಯುದ್ಧಂ ಪ್ರಕುರ್ವತಃ ಸೂರ್ಯ್ಯಸುತಸ್ಯ ಚಕ್ರಮ್ ।

ರಥಸ್ಯ ಭೂಮಿರ್ಗ್ಗ್ರಸತಿ ಸ್ಮ ಶಾಪಾದಸ್ತ್ರಾಣಿ ದಿವ್ಯಾನಿ ಚ ವಿಸ್ಮೃತಿಂ ಯಯುಃ ॥೨೭.೧೮೭ ॥

 

ಪುನಃ ಅರ್ಜುನನೊಂದಿಗೆ ಕರ್ಣನ ಮಹತ್ತಾದ ಅಸ್ತ್ರಯುದ್ಧ ನಡೆದಿತ್ತು,

ಕರ್ಣನ ರಥಚಕ್ರವನ್ನು ಭೂಮಿ (ವಿಪ್ರಶಾಪದ ಪರಿಣಾಮವಾಗಿ )ನುಂಗಿತು.

ಪರಶುರಾಮದೇವರ ಶಾಪದಿಂದಾಗಿ ಕರ್ಣನಿಗೆ ದಿವ್ಯಾಸ್ತ್ರಗಳು ಮರೆತುಹೋಗಿತ್ತು .

 

ಉದ್ಧರ್ತ್ತುಕಾಮೋ ರಥಚಕ್ರಮೇವ ಪಾರ್ತ್ಥಂ ಯಯಾಚೇSವಸರಂ ಪ್ರದಾತುಮ್ ।

ನೇತ್ಯಾಹ ಕೃಷ್ಣೋSಞ್ಜಲಿಕಂ ಸುಘೋರಂ ತ್ರಿನೇತ್ರದತ್ತಂ ಜಗೃಹೇ ಚ ಪಾರ್ತ್ಥಃ ॥೨೭.೧೮೮ ॥

 

ಹೂತುಹೋದ ನನ್ನ ರಥದ ಚಕ್ರವನ್ನು ಮೇಲೆತ್ತುತ್ತೇನೆ,

ಹೀಗೆ ಕರ್ಣ ಅರ್ಜುನನಲ್ಲಿ ಅವಕಾಶವನ್ನು ಬೇಡುತ್ತಾನೆ.

ಕೃಷ್ಣನಿಂದ ‘ಅವಕಾಶ ಕೊಡಬೇಡ’ ಎಂದು ಹೇಳಲ್ಪಟ್ಟ ಅರ್ಜುನ,

ಎತ್ತಿಕೊಂಡ ತ್ರಿನೇತ್ರದತ್ತ,ಘೋರವಾದ ಅಂಜಲಿಕಾಸ್ತ್ರ ಎಂಬ ಬಾಣ.

 

ಸತ್ಯೇನ ಧರ್ಮ್ಮೇಣ ಚ ಸನ್ನಿಯೋಜ್ಯ ಮುಮೋಚ ಕರ್ಣ್ಣಸ್ಯ ವಧಾಯ ಬಾಣಮ್ ।

ಚಿಚ್ಛೇದ ತೇನೈವ ಚ ತಸ್ಯ ಶೀರ್ಷಂ ಸನ್ಧಿತ್ಸತೋ ಬಾಣವರಂ ಸುಘೋರಮ್ ॥೨೭.೧೮೯ ॥

 

ಅರ್ಜುನನು ತನ್ನಲ್ಲಿರುವ ಸತ್ಯಧರ್ಮವನ್ನು ಆ ಅಂಜಲಿಕಾಸ್ತ್ರದೊಂದಿಗೆ ಕೂಡಿಸಿ ಕರ್ಣನ ಸಂಹಾರಕ್ಕಾಗಿ ಬಾಣವನ್ನು ಬಿಡುತ್ತಾನೆ.

ಕರ್ಣ ಅರ್ಜುನನ ಬಾಣವನ್ನು ಎದುರಿಸಲು ಬಾಣಪ್ರಯೋಗ ಮಾಡುವ ಮೊದಲೇ ಆ ಅಂಜಲಿಕಾಸ್ತ್ರ ಕತ್ತರಿಸಿತು ಅವನ ತಲೆಯನ್ನೆ.

 

ಅಪರಾಹ್ಣೇSಪರಾಹ್ಣಸ್ಯ ಸೂತಜಸ್ಯೇನ್ದ್ರಸೂನುನಾ ।

ಛಿನ್ನಮಞ್ಜಲಿಕೇನಾSಜೌ ಸೋತ್ಸೇಧಮಪತಚ್ಛಿರಃ ॥೨೭.೧೯೦ ॥

 

ಕರ್ಣನ ಸೇನಾಧಿಪತ್ಯದ ಎರಡನೇ ದಿನ, (ಮಹಾಭಾರತಯುದ್ಧದ ಹದಿನೇಳನೇ ದಿನ.)             ಅಪರಾಹ್ಣ ಇಂದ್ರಪುತ್ರನಾದ ಅರ್ಜುನನು, ಸೂರ್ಯಪುತ್ರ ಕರ್ಣನ ತಲೆಯ ಕತ್ತರಿಸಿದನು.                 ಕರ್ಣನ ರುಂಡ ವೇಗವಾಗಿ ಆಕಾಶಕ್ಕೆ ಹಾರಿತು, ಹಾಗೆ ಮೇಲೆ ಹೋಗಿದ್ದು ಕೆಳಗೆ ನೆಲಕ್ಕೆ ಬಿದ್ದಿತು.

 

ತಸ್ಮಿನ್ ಹತೇ ದೀನಮುಖಃ ಸುಯೋಧನೋ ಯಯೌ ಸಮಾಹೃತ್ಯ ಬಲಂ ಸಶಲ್ಯಃ ।

ಯುಧಿಷ್ಠಿರಃ ಕರ್ಣ್ಣವಧಂ ನಿಶಮ್ಯ ತದಾ ಸಮಾಗತ್ಯ ದದರ್ಶ ತತ್ತನುಮ್ ॥೨೭.೧೯೧ ॥

 

ಕರ್ಣ ಹತನಾಗುತ್ತಿದ್ದಂತೇ ದುಃಖಿತನಾದ ದುರ್ಯೋಧನನು,

ಶಲ್ಯಸಹಿತನಾಗಿ ಸೇನೆಯ ಹಿಂದೆ ತಿರುಗಿಸಿ ಹೊರಟುಹೋದನು.

ಕರ್ಣಸಂಹಾರವನ್ನು ಕೇಳಿದ ಯುಧಿಷ್ಠಿರ, ಅಲ್ಲಿಗೆ ಬಂದು ಕಂಡನು ಕರ್ಣನ ಶರೀರ.

 

ಶಶಂಸ ಕೃಷ್ಣಂ ಚ ಧನಞ್ಜಯಂ ಚ ಭೀಮಂ ಚ ಯೇSನ್ಯೇSಪಿ ಯುಧಿ ಪ್ರವೀರಾಃ ।

ಗತ್ವಾ ಚ ತೇ ಶಿಬಿರಂ ಮೋದಮಾನಾ ಊಷುಃ ಸಕೃಷ್ಣಾಸ್ತದನುಬ್ರತಾಃ ಸದಾ ॥೨೭.೧೯೨ ॥

 

ಯುಧಿಷ್ಠಿರನು ಶ್ರೀಕೃಷ್ಣನನ್ನು, ಅರ್ಜುನನನ್ನು, ಹಾಗೂ ಭೀಮಸೇನನನ್ನು, ಇತರ ವೀರರನ್ನೂ, ಹೊಗಳುತ್ತಾನೆ.

ಶ್ರೀಕೃಷ್ಣಸಹಿತರಾದ, ಸದಾ ಕೃಷ್ಣಾಶ್ರಿತರಾದ ಪಾಂಡವರು ಶಿಬಿರಕ್ಕೆ ತೆರಳಿ ಹೊಂದಿದರು ಸಂತೋಷವನ್ನೆ.

[ ಆದಿತಃ ಶ್ಲೋಕಾಃ೪೨೪೯+೧೯೨=೪೪೪೧ ]

 

ಇತಿ ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ ಶ್ರಿಮನ್ಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ಕರ್ಣ್ಣವಧೋನಾಮ     ಸಪ್ತವಿಂಶೋsಧ್ಯಾಯಃ ॥

 

ಹೀಗೆ ಶ್ರೀಮದಾನಂದತೀರ್ಥಭಗವತ್ಪಾದರಿಂದ ವಿರಚಿತವಾದ,

ಶ್ರೀಮನ್ಮಹಾಭಾರತತಾತ್ಪರ್ಯನಿರ್ಣಯದ ಭಾವಾನುವಾದ,

ಕರ್ಣವಧನಾಮದ ಇಪ್ಪತ್ತೇಳನೇ ಅಧ್ಯಾಯ,

ಶ್ರೀಕೃಷ್ಣನ ಪಾದಗಳಿಗೆ ಅರ್ಪಿಸಿದ ಧನ್ಯತಾಭಾವ.

 

 

No comments:

Post a Comment

ಗೋ-ಕುಲ Go-Kula