ಸಾರ ಸಂಗಮ by “ತ್ರಿವೇಣಿ ತನಯ”
ಸದ್ಗುಣ -ಆಭರಣ
ಸೌಂದರ್ಯ ಮನುಷ್ಯಗಾಭರಣ,
ಸದ್ಗುಣಗಳು ಸೌಂದರ್ಯಕ್ಕಾಭರಣ,
ಜ್ಞಾನವದು ಸದ್ಗುಣಗಳ ಸಂಕೇತ,
ಕ್ಷಮಾಗುಣದಿಂದ ಜ್ಞಾನ ಅಲಂಕೃತ.
ಕಾಣದ ಸತ್ಯ - ಶಾಶ್ವತ ನಿತ್ಯ
ಗಾಳಿಯು ಕಣ್ಣಿಗೆ ಕಾಣದು ನೋಡು,
ನಿಲ್ಲದೆ ನಡೆದಿದೆ ಉಸಿರಾಟದ ಹಾಡು,
ಬೆಳಕು ಶಾಖವ ಹಿಡಿಯಲಾರೆ ನೀನು,
ಅವಿರತ ಅವುಗಳ ನೀಡುತಿರುವ ಭಾನು.
ಪ್ರಕೃತಿ -ಪ್ರೀತಿ
ಹರಿಯುವ ನೀರು ತೇಲುವ ಮೋಡ,
ಯಾರೊಬ್ಬರ ಕೈಗೂ ಸಿಗವವು ನೋಡ,
ಪ್ರಾಣಿ ಪಕ್ಷಿಗಳ ಕಲರವ ಗಾನ,
ಎನಿತು ಸುಂದರ ಜೀವನ ಯಾನ.
ಮೌನ -ಜ್ಞಾನ ಗಾನ
ಮಾತಾಡುವ ಮನುಜ ಅಪಾಯಕಾರಿ,
ಮಾತಾಡದ ಪ್ರಕೃತಿ ಬಲು ಸಹಕಾರಿ,
ಮೌನ ಸಂಭಾಷಣೆಯ ಕಲೆಯ ಕಲಿ,
ಸೃಷ್ಟಿಕರ್ತನ ನಮಿಸುತ ದಿನವೂ ನಲಿ.
ಆಕಾಶ -ಮನೋಕಾಶ
ಆಕಾಶಕಭಿಮಾನಿ ನೀ ಗಣೇಶ,
ನಿನ್ನಪ್ಪ ಮನೋಭಿಮಾನಿ ಈಶ,
ಸದವಕಾಶ ಕೊಡು ವಿಘ್ನೇಶ್ವರ,
ಹರಿಪಾದದಿ ಮನನಿಲಿಸು ನೀ ಈಶ್ವರ.
(Contributed by Shri Govind Magal)
No comments:
Post a Comment
ಗೋ-ಕುಲ Go-Kula