Thursday 17 May 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 6: 24 - 27

ಅಥಾತಿಸಕ್ತೇ ಕ್ಷಿತಿಪೇ ಕಪೀನಾಂ ಪ್ರವಿಸ್ಮೃತೇ ರಾಮಕೃತೋಪಕಾರೇ ।
ಪ್ರಸಹ್ಯಂ ತಂ ಬುದ್ಧಿಮತಾಂ ವರಿಷ್ಠೋ ರಾಮಾಙ್ಘ್ರಿಭಕ್ತೋ ಹನುಮಾನುವಾಚ ॥೬.೨೪॥
ರಾಜ್ಯ ವೈಭೋಗಗಳಲ್ಲಿ ಮುಳುಗಿದ ಸುಗ್ರೀವ,
ತೋರಿದ ರಾಮನುಪಕಾರಸ್ಮರಣೆಯ ಅಭಾವ.
ಬುದ್ಧಿವಂತರಲ್ಲಿ ಅಗ್ರಗಣ್ಯನಾದ  ಹನುಮಂತ,
ಸುಗ್ರೀವಗೆ ಉಪದೇಶಿಸಿದ ಕರ್ತವ್ಯದ ಮಾತ.

ನ ವಿಸ್ಮೃತಿಸ್ತೇ ರಘುವರ್ಯ್ಯಕಾರ್ಯ್ಯೇ ಕಾರ್ಯ್ಯಾ ಕಥಞ್ಚಿತ್ ಸ ಹಿ ನೋsಭಿಪೂಜ್ಯಃ ।
ನ ಚೇತ್ ಸ್ವಯಂ ಕರ್ತ್ತುಮಭಿಷ್ಟಮದ್ಯತೇ ದ್ಧ್ರು ವಂ ಬಲೇನಾಪಿ ಹಿ ಕಾರಯಾಮಿ ॥೬.೨೫॥
ಶ್ರೀರಾಮನ ಸೇವೆಯ ಮರೆವು ಅಲ್ಲ ಉಚಿತ,
ಇದು ಯಾವ ವಿಧದಲ್ಲೂ ಆಗಲಾರದು ಸಮ್ಮತ.
ನೀನು ನಿರುತ್ಸಾಹಿಯಾಗಿ ಭೋಗಗಳಲ್ಲೇ ಆದರೆ ಆಸಕ್ತ,
ಬಲತ್ಕಾರದಿ ಮಾಡಿಸುವೆ ಕಾರ್ಯವನೆಂದ ಹನುಮಂತ.

ಸ ಏವಮುಕ್ತ್ವಾ ಹರಿರಾಜಸನ್ನಿಧೌ ದ್ವೀಪೇಷು ಸಪ್ತಸ್ವಪಿ ವಾನರಾನ್ ಪ್ರತಿ ।
ಸಮ್ಮೇಳನಾಯಾsಶುಗತೀನ್ ಸ್ಮ ವಾನರಾನ್ ಪ್ರಸ್ಥಾಪಯಾಮಾಸ ಸಮಸ್ತಶಃ ಪ್ರಭುಃ ॥೬.೨೬॥
ಸುಗ್ರೀವಗೆ ಹನುಮಂತನಿಂದ ಎಚ್ಚರಿಕೆಯ ಮಾತು,
ಸಪ್ತದ್ವೀಪಗಳಲ್ಲಿರುವ ಕಪಿಗಳ ಸೇರಿಸಲು ತಾಕೀತು.

ಹರೀಶ್ವರಾಜ್ಞಾಪ್ರಣಿಧಾನಪೂರ್ವಕಂ ಹನೂಮತಾ ತೇ ಪ್ರಹಿತಾ ಹಿ ವಾನರಾಃ ।
ಸಮಸ್ತಶೈಲದ್ರುಮಷಣ್ಡಸಂಸ್ಥಿತಾನ್ ಹರೀನ್ ಸಮಾಧಾಯ ತದಾsಭಿಜಗ್ಮುಃ ॥೬.೨೭॥
ಸುಗ್ರೀವಾಜ್ಞೆ ಜೊತೆ ಹನುಮಂತನಿಂದ ಕಳಿಸಲ್ಪಟ್ಟ ಕಪಿಸೇನೆ,
ಬೆಟ್ಟ ಕಾಡು ಅಲೆದು ಮಾಡಿತು ಎಲ್ಲಾ ಕಪಿಸೈನ್ಯದ ಜಮಾವಣೆ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula