Friday 25 May 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 6: 42 - 45

ಇತೀರಿತೇ ಶಕ್ರಸುತಾತ್ಮಜೇನ ತಥೇತಿ ಹೋಚುಃ ಸಹ ಜಾಮ್ಬವನ್ಮುಖಾಃ ।
ಸರ್ವೇsಪಿ ತೇಷಾಮಥ ಚೈಕಮತ್ಯಂ ದೃಷ್ಟ್ವಾ  ಹನೂಮಾನಿದಮಾಬಭಾಷೇ ॥೬.೪೨॥

ಈ ತೆರನಾದ ಅಂಗದ ಮಾಡಿದ ವಿಶ್ಲೇಷಣೆ,
ಜಾಂಬವಂತ ಮೊದಲಾದವರ ಅನುಮೋದನೆ.
ಈ ಒಮ್ಮತವ ಕಂಡ ಹನುಮಂತ,
ಆರಂಭಿಸಿದ ತಾ ಹೇಳುವ ಮಾತ.




ವಿಜ್ಞಾತಮೇತದ್ಧಿ ಮಯಾsಙ್ಗದಸ್ಯ ರಾಜ್ಯಾಯ ತಾರಾಭಿಹಿತಂ ಹಿ ವಾಕ್ಯಮ್ ।
ಸಾಧ್ಯಂ ನ ಚೈತನ್ನಹಿ ವಾಯುಸೂನೂ ರಾಮಪ್ರತೀಪಂ ವಚನಂ ಸಹೇತ ॥೬.೪೩॥

ತಾರನ ಉದ್ದೇಶವೇನೆಂದು ನನಗೆ ಗೊತ್ತು,
ಅಳಿಯಗೆ ರಾಜ್ಯ ದೊರಕಿಸುವ ಮಸಲತ್ತು.
ಯಾವ ಕಾಲಕ್ಕೂ ಈ ಹನುಮಂತ,
ಸಹಿಸಲಾರ ರಾಮವಿರೋಧಿ ಮಾತ.

ನಚಾಹಮಾಕ್ರಷ್ಟುಮುಪಾಯತೋsಪಿ ಶಕ್ಯಃ ಕಥಞ್ಚಿತ್ ಸಕಲೈಃ ಸಮೇತೈಃ ।
ಸನ್ಮಾರ್ಗತೋ ನೈವ ಚ ರಾಘವಸ್ಯ ದುರನ್ತಶಕ್ತೇರ್ಬಿಲಮಪ್ರದೃಷ್ಯಮ್ ॥೬.೪೪॥

ಶ್ರೀರಾಮ ಸರ್ವಜ್ಞ ಸರ್ವಶಕ್ತ ಸರ್ವೇಶ,
ಅವನಿಚ್ಛಿಸಿದರೆ ಈ ಗುಹೆಯು ಸರ್ವನಾಶ.
ನೀವೆಲ್ಲಾ ಯಾವ ಉಪಾಯದಿಂದಾದರೂ ಒಗ್ಗಟ್ಟು,
ನನ್ನದು ಸನ್ಮಾರ್ಗದಿಂದ ವಿಚಲಿತವಾಗದ ಬಿಗಿಪಟ್ಟು.


ವಚೋ ಮಮೈತದ್ ಯದಿ ಚಾsದರೇಣ ಗ್ರಾಹ್ಯಂ ಭವೇದ್ ವಸ್ತದತಿಪ್ರಿಯಂ ಮೇ ।
ನ ಚೇದ್ ಬಲಾದಪ್ಯನಯೇ ಪ್ರವೃತ್ತಾನ್ ಪ್ರಶಾಸ್ಯ ಸನ್ಮಾರ್ಗಗತಾನ್ ಕರೋಮಿ ॥೬.೪೫॥

ಇರಲಿಕ್ಕುಂಟೇ ರಾಮಗೆ ಎಟುಕದ ತಾಣ,
ಎಲ್ಲೆಡೆ ಹೋಗಬಲ್ಲದು ಅವನಿಚ್ಛೆಯ ಬಾಣ.
ನಿಮಗೆ ನನ್ನ ಮಾತಾದರೆ ಆದರಪೂರ್ವಕ ಗ್ರಾಹ್ಯ,
ನನಗೂ ಆ ನಡೆ ಸಂತೋಷದಾಯಕ ಮತ್ತು ಸಹ್ಯ.
ಹಾಗಾಗದೇ ತೋರಿದಿರಾದರೆ ಅನೀತಿ,
ಬಳಸುತ್ತೇನೆ ನಾನು ಬಲಾತ್ಕಾರದ ರೀತಿ.

No comments:

Post a Comment

ಗೋ-ಕುಲ Go-Kula