Friday 25 May 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 6: 46 - 48


ಇತೀರಿತಂ ತತ್ ಪವನಾತ್ಮಜಸ್ಯ ಶ್ರುತ್ವಾsತಿಭೀತಾ ಧೃತಮೂಕಭಾವಾಃ ।

ಸರ್ವೇsನುಜಗ್ಮುಸ್ತಮಥಾದ್ರಿಮುಖ್ಯಂ ಮಹೇನ್ದ್ರಮಾಸೇದುರಗಾಧಭೋಧಾಃ ॥೬.೪೬॥

ಹನುಮಂತನ ಮಾತ ಕೇಳಿದ ಕಪಿಗಳಾದರು ಭಯಭೀತ,
ಮೂಕಭಾವರಾದರು ಕಪಿಗಳೆಲ್ಲಾ ತಾರಾದಿಗಳ ಸಮೇತ.
ಅನುಸರಿಸಿದರು ಹನುಮನ ಆಡದೇ ಮತ್ತೊಂದು ಮಾತ,
ಹನುಮಂತನೊಡಗೂಡಿ ತಲುಪಿದರು ಮಹೇಂದ್ರ ಪರ್ವತ.

ನಿರೀಕ್ಷ್ಯ ತೇ ಸಾಗರಮಪ್ರಧೃಷ್ಯಮಪಾರಮೇಯಂ ಸಹಸಾ ವಿಷಣ್ಣಾಃ ।
ದೃಢಂ ನಿರಾಶಾಶ್ಚ ಮತಿಂ ಹಿ ದಧ್ರುಃ ಪ್ರಾಯೋಪವೇಶಾಯ ತಥಾ ಚ ಚಕ್ರುಃ ॥೬.೪೭॥

ಅಪಾರವಾದ ದಾಟಲಾಗದ ಸಾಗರ ಕಂಡ ಕಪಿಸೇನೆ,
ದೃಢವಾಗಿ ಆವರಿಸಿತವರಿಗೆಲ್ಲ ನಿರಾಸೆಯೆಂಬ ಬೇನೆ.
ವಿಷಣ್ಣರಾದ ಕಪಿವೃಂದದಿಂದ ಪ್ರಾಯೋಪ್ರವೇಶದ ಸಂಕಲ್ಪ,
ದೈವಸ್ಮರಣೆಯಲಿ ಮರಣದವರೆಗೂ ಉಪವಾಸವಿರುವ ತಪ.

ಪ್ರಾಯೋಪವಿಷ್ಟಾಶ್ಚ ಕಥಾ ವದನ್ತೋ ರಾಮಸ್ಯ ಸಂಸಾರವಿಮುಕ್ತಿದಾತುಃ ।
ಜಟಾಯುಷಃ ಪಾತನಮೂಚುರೇತತ್ ಸಮ್ಪಾತಿನಾಮ್ನಃ ಶ್ರವಣಂ ಜಗಾಮ ॥೬.೪೮॥

ಸಾಯೋವರೆಗೂ ಉಪವಾಸ'ಕ್ಕೆ ಕೂತ ಎಲ್ಲಾ ಕಪಿಸೇನೆ,
ಮಾಡಿದರಂತೆ  ಮೋಕ್ಷದಾತ ಶ್ರೀರಾಮಕಥೆಯ ಭಜನೆ.
ಆರಂಭದಿಂದ ಜಟಾಯು ಮರಣದವರೆಗಿನ ಕಥೆ,
ಮರದಮೇಲಿದ್ದ ಸಂಪಾತಿ ಎಂಬ ಪಕ್ಷಿ ಕೇಳಿತಂತೆ.


No comments:

Post a Comment

ಗೋ-ಕುಲ Go-Kula