Friday 25 May 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 6: 49 -51

ತಸ್ಯಾಗ್ರಜೋsಸಾವರುಣಸ್ಯ ಸೂನುಃ ಸೂರ್ಯ್ಯಸ್ಯ ಬಿಮ್ಬಂ ಸಹ ತೇನ ಯಾತಃ ।
ಜವಂ ಪರೀಕ್ಷನ್ನಥ ತಂ ಸುತಪ್ತಂ ಗುಪ್ತ್ವಾ ಪತತ್ರಕ್ಷಯಮಾಪ್ಯ ಚಾಪತತ್ ॥೬.೪೯॥

ಜಟಾಯುವಿನ ಅಣ್ಣ ವರುಣನ ಮಗ ಸಂಪಾತಿ,
ವೇಗ ಪರೀಕ್ಷಾಸ್ಪರ್ಧೆಯಲಿ ಒದಗಿತವಗೆ ಆ ಗತಿ.
ಅಣ್ಣ ತಮ್ಮಂದಿರಿಬ್ಬರೂ ಸೂರ್ಯನೆಡೆಗೆ ಹಾರಿದ ಕತೆ,
ತಮ್ಮನ ರಕ್ಷಿಸಿ ತನ್ನ ರೆಕ್ಕೆ ಸುಟ್ಟುಕೊಂಡು ಬಿದ್ದವನ ವ್ಯಥೆ.


ಸ ದಗ್ಧಪಕ್ಷಃ ಸವಿತೃಪ್ರತಾಪಾಚ್ಛ್ರುತ್ವೈವ ರಾಮಸ್ಯ ಕಥಾಂ ಸಪಕ್ಷಃ ।
ಭೂತ್ವಾ ಪುನಶ್ಚಾಽಶು ಮೃತಿಂ ಜಟಾಯುಷಃ ಶುಶ್ರಾವ ಪೃಷ್ಟ್ವಾ ಪುನರೇವ ಸಮ್ಯಕ್ ॥೬.೫೦॥

ಸೂರ್ಯನ ಶಾಖಕೆ ಸುಟ್ಟುಹೋದ ರೆಕ್ಕೆ ,
ಚಿಗುರಿದವಂತೆ ಶ್ರೀರಾಮಕಥಾ ಕೇಳಿದ್ದಕ್ಕೆ .
ಮೋಕ್ಷದಾತ ಶ್ರೀರಾಮಕಥಾ ಸಾರ,
ರೆಕ್ಕೆ ಮರಳಿದ್ದೇನು ದೊಡ್ಡ ಆಶ್ಚರ್ಯ.
ಇದನ್ನೆಲ್ಲಾ ನೋಡಿ ಕೇಳಿದ ಆ ಸಂಪಾತಿ,
ಪಡೆದ ಜಟಾಯು ಮರಣದ ಮಾಹಿತಿ.

ಸ ರಾವಣಸ್ಯಾಥ ಗತಿಂ ಸುತೋಕ್ತಾಂ ನಿವೇದ್ಯದೃಷ್ಟ್ವಾಜನಕಾತ್ಮಜಾಕೃತಿಮ್ ।
ಸ್ವಯಂ ತಥಾsಶೋಕವನೇ ನಿಷಣ್ಣಾಮವೋಚದೇಭ್ಯೋ ಹರಿಪುಙ್ಗವೇಭ್ಯಃ ॥೬.೫೧॥

ತನ್ನ ಮಗ ಸುಪಾರ್ಶ್ವನಿಂದ ತಿಳಿದ ರಾವಣವಾರ್ತೆಯ ಹೇಳಿದ,
ಮೇಲೆ ಹಾರಿ ಕಂಡು ಸೀತಾಕೃತಿ ಅಶೋಕವನದಲ್ಲಿರುವುದ ಅರುಹಿದ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula