Thursday 17 May 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 6: 28 - 31


ತದೈವ ರಾಮೋsಪಿ ಹಿ ಭೋಗಸಕ್ತಂ ಪ್ರಮತ್ತಮಾಲಕ್ಷ್ಯ ಕಪೀಶ್ವರಂ ಪ್ರಭುಃ ।
ಜಗಾದ ಸೌಮಿತ್ರಿಮಿದಂ ವಚೋ ಮೇ ಪ್ಲವಙ್ಗಮೇಶಾಯ ವದಾsಶು ಯಾಹಿ ॥೬.೨೮॥

ಭೋಗದಲ್ಲಿರುವ ಸುಗ್ರೀವನಿಂದಾಗುತ್ತಿದೆ ಪ್ರಮಾದ,
ಸರ್ವಜ್ಞ ರಾಮಚಂದ್ರ ಇದ ಗಮನಿಸಿದಂತೆ ನಟಿಸಿದ.
ತಮ್ಮ ಲಕ್ಷ್ಮಣನ ಸುಗ್ರೀವನೆಡೆಗೆ ಕಳಿಸಿದ,
ಅವನ ಕರ್ತವ್ಯವ ನೆನಪಿಸಲು ತಿಳಿಸಿದ.

ಯದಿ ಪ್ರಮತ್ತೋsಸಿ ಮದೀಯಕಾರ್ಯ್ಯೇ ನಯಾಮ್ಯಹಂ ತ್ವೇನ್ದ್ರಸುತಸ್ಯ ಮಾರ್ಗ್ಗಮ್ ।
ಪ್ರಾಯಃ ಸ್ವಕಾರ್ಯ್ಯೇ ಪ್ರತಿಪಾದಿತೇ ಹಿ ಮದೋದ್ಧತಾ ನ ಪ್ರತಿಕರ್ತ್ತುಮೀಶತೇ ॥೬.೨೯॥
ಪಡೆದುಕೊಂಡಮೇಲೆ ಯಾರಿಂದಲಾದರೂ ಉಪಕಾರ,
ಕೃತಘ್ನಜನರು ಮಾಡಬಯಸುವುದಿಲ್ಲ ಪ್ರತ್ಯುಪಕಾರ.
ಸುಗ್ರೀವ ಕೃತಘ್ನನಾಗಿ ಹಿಡಿದರೆ ದುರ್ಮಾರ್ಗ,
ತೋರಬೇಕಾದೀತು ವಾಲಿಯ ಕಳಿಸಿದ ಮಾರ್ಗ.

ಇತೀಡ್ಯರಾಮೇಣ ಸಮೀರಿತೇ ತದಾ ಯಯೌ ಸಬಾಣಃ ಸಧನುಃ ಸ ಲಕ್ಷ್ಮಣಃ ।
ದೃಷ್ಟ್ವೈವ ತಂ ತೇನ ಸಹೈವ ತಾಪನಿರ್ಭಯಾದ್ ಯಯೌ ರಾಮಪದಾನ್ತಿಕಂ ತ್ವರನ್ ॥೬.೩೦॥

ರಾಮನಾಜ್ಞೆ ಸ್ವೀಕರಿಸಿದ ಧನುರ್ಧಾರಿ ಲಕ್ಷ್ಮಣ,
ನಡೆದು ಬಂದು ಸೇರಿದ ಸುಗ್ರೀವನಿದ್ದ ತಾಣ.
ಲಕ್ಷ್ಮಣನ ಕಂಡ ಸೂರ್ಯಪುತ್ರ ಸುಗ್ರೀವನವನು,
ಲಕ್ಷ್ಮಣನೊಂದಿಗೆ ತಲುಪಿದ ರಾಮಚಂದ್ರನ ತಾನು.


 ಹನೂಮತಃ ಸಾಧುವಚೋಭಿರಾಶು ಪ್ರಸನ್ನಚೇತಸ್ಯಧಿಪೇ ಕಪೀನಾಮ್ ।
ಸಮಾಗತೇ ಸರ್ವಹರಿಪ್ರವೀರೈಃ ಸಹೈವ ತಂ ವೀಕ್ಷ್ಯ ನನನ್ದ ರಾಘವಃ ॥ ೬.೩೧ ॥
ಕೇಳಿ ಹನುಮಂತನ ಒಳ್ಳೆಯ ಮಾತು,
ಭಕ್ತ ಸುಗ್ರೀವನ ಮನ ಜಾಗೃತವಾಯ್ತು.
ರಾಮನ ಬಳಿ ಕಪಿಸೈನ್ಯದೊಂದಿಗೆ  ಬಂದ,
ನೋಡಿದ ಆನಂದಧಾಮಗಾಯ್ತಂತೆ ಆನಂದ.


No comments:

Post a Comment

ಗೋ-ಕುಲ Go-Kula