ನಿರ್ದೋಷಪೂರ್ಣಗುಣವಿಗ್ರಹ
ಆತ್ಮತನ್ತ್ರೋ
ನಿಶ್ಚೇತನಾತ್ಮಕಶರೀರಗುಣೈಶ್ಚ
ಹೀನಃ |
ಆನನ್ದಮಾತ್ರಕರಪಾದಮುಖೋದರಾದಿಃ
ಸರ್ವತ್ರ ಚ
ಸ್ವಗತಭೇದವಿವರ್ಜಿತಾತ್ಮಾ ||೧.೧೧||
ದೋಷವೇ ಇಲ್ಲದ ಗುಣಗಳ ಕಡಲು,
ಜಡಶರೀರವಿಲ್ಲದ ಅತ್ಯದ್ಭುತ ಒಡಲು,
ಆನಂದವೇ ಅವನ ಕೈ ಕಾಲು ಮುಖ ಹೊಟ್ಟೆ,
ಅವತಾರ ಮೂಲದಲ್ಲಿಲ್ಲವಗೆ ಭೇದದ ಇತಿಮಿತಿಯ ಕಟ್ಟೆ.
ಕಾಲಾಚ್ಚ
ದೇಶಗುಣತೋsಸ್ಯ ನಚಾದಿರನ್ತೋ
ವೃದ್ಧಿಕ್ಷಯೌ
ನತು ಪರಸ್ಯ ಸದಾತನಸ್ಯ |
ನೈತಾದೃಶಃ
ಕ್ವಚ ಬಭೂವ ನಚೈವ ಭಾವ್ಯೋ
ನಾಸ್ತ್ಯುತ್ತರಃ
ಕಿಮು ಪರಾತ್ ಪರಮಸ್ಯ ವಿಷ್ಣೋಃ ||೧.೧೨||
ಇವನು ಎಂದೆಂದೂ ಕಾಲಾತೀತ,
ದೇಶ ಗುಣದಿ -ಕೊನೆಯಿರದಾತ,
ಇವನಿಗಿಲ್ಲ ಹಿಗ್ಗು--ಕುಗ್ಗುವಿಕೆ,
ಹಿಂದಿಲ್ಲ ಮುಂದಿಲ್ಲ ಸಮ-ಅಂಥ ಹೆಗ್ಗಳಿಕೆ.
ಸರ್ವಜ್ಞ
ಈಶ್ವರತಮಃ ಸ ಚ ಸರ್ವಶಕ್ತಿಃ
ಪೂರ್ಣಾವ್ಯಯಾತ್ಮಬಲಚಿತ್ಸುಖವೀರ್ಯಸಾರಃ
|
ಯಸ್ಯಾsಜ್ಞಯಾ ರಹಿತಮಿನ್ದಿರಯಾ ಸಮೇತಂ
ಬ್ರಹ್ಮೇಶಪೂರ್ವಕಮಿದಂ
ನತು ಕಸ್ಯ ಚೇಶಮ್ ||೧.೧೩||
ಎಲ್ಲವನೂ ತಿಳಿದಾತ,
ಸರ್ವ ಸಮರ್ಥನಾತ,
ಎಲ್ಲ ತೂಗಿಸಬಲ್ಲನಾತ,
ನಾಶವಿರದ ಆತ್ಮಬಲದಾತ,
ಅವನಾತ್ಮವೇ ಜ್ಞಾನ ಅವನಾತ್ಮವೇ ಸುಖ,
ಅವನಾತ್ಮವೇ ವೀರ್ಯ-ಅವನೆಲ್ಲರ ಆತ್ಮಸಖ,
ಲಕ್ಷ್ಮೀ ಸಮೇತ ಬ್ರಹ್ಮ ರುದ್ರ ಜೀವಗಣ,
ಅವನಾಣತಿ ಇರದಿರೆ ಅವರಿಗಿಲ್ಲ ತ್ರಾಣ,
ಸೃಷ್ಟಿಯಲ್ಲಿನ ಲೋಪದೋಷಗಳು ಅವನದಲ್ಲ,
ಜೀವರಾಶಿಯ ಸ್ವಭಾವ ತೋರುವ ಲಕುಮೀನಲ್ಲ.
ಆಭಾಸಕೋsಸ್ಯ ಪವನಃ ಪವನಸ್ಯ ರುದ್ರಃ
ಶೇಷಾತ್ಮಕೋ
ಗರುಡ ಏವ ಚ ಶಕ್ರಕಾಮೌ |
ವೀನ್ದ್ರೇಶಯೋಸ್ತದಪರೇ
ತ್ವನಯೋಶ್ಚ ತೇಷಾ-
ಮೃಷ್ಯಾದಯಃ
ಕ್ರಮಶ ಊನಗುಣಾಃ ಶತಾಂಶಾಃ ॥೧.೧೪॥
ಈ ನಾರಾಯಣಗೆ ಮುಖ್ಯಪ್ರಾಣ ಪ್ರತಿಬಿಂಬ,
ಮುಖ್ಯಪ್ರಾಣಗೆ ಶೇಷಾತ್ಮಕ ರುದ್ರ ಗರುಡ ಪ್ರತಿಬಿಂಬ,
ಗರುಡ ರುದ್ರರಿಗೆ ದೇವೇಂದ್ರ ಕಾಮ ಪ್ರತಿಬಿಂಬ,
ಉಳಿದೆಲ್ಲ ದೇವತೆಗಳೂ ಇಂದ್ರ ಕಾಮರ ಪ್ರತಿಬಿಂಬ.
ಆಭಾಸಕಾ ತ್ವಥ
ರಮಾsಸ್ಯ ಮರುತ್ಸ್ವರೂಪಾತ್
ಶ್ರೇಷ್ಠಾsಪ್ಯಜಾತ್ ತದನು ಗೀಃ ಶಿವತೋ ವರಿಷ್ಠಾ |
ತಸ್ಯಾ ಉಮಾ
ವಿಪತಿನೀ ಚ ಗಿರಸ್ತಯೋಸ್ತು
ಶಚ್ಯಾದಿಕಾಃ
ಕ್ರಮಶ ಏವ ಯಥಾ ಪುಮಾಂಸಃ ॥೧.೧೫॥
ನಂತರ ಋಷಿ ಮೊದಲಾದವರ ಅನಾವರಣ,
ನೂರಾರು ಪಟ್ಟು ಕಡಿಮೆಯಾದವರು ಕ್ರಮೇಣ,
ಈ ತಾರತಮ್ಯಕೆ ಬಿಂಬ ಪ್ರತಿಬಿಂಬ ಭಾವ ಕಾರಣ,
ಬಿಂಬ ಪ್ರತಿಬಿಂಬ ಭಾವವೆಂದರೆ ಸದೃಶ,
ಪ್ರತಿ ಪ್ರತಿಬಿಂಬವೂ ಸದೃಶನಾದ ಬಿಂಬದ ವಶ.[Contributed by Shri Govind Magal]
No comments:
Post a Comment
ಗೋ-ಕುಲ Go-Kula