‘ಸೃಷ್ಟಿರಕ್ಷಾಹೃತಿಜ್ಞಾನನಿಯತ್ಯಜ್ಞಾನಬನ್ಧನಾನ್
।
‘ಮೋಕ್ಷಂ ಚ ವಿಷ್ಣುತಸ್ತ್ವೇವ ಜ್ಞಾತ್ವಾ
ಮುಕ್ತಿರ್ನಚಾನ್ಯಥಾ ॥೧.೮೩॥
ಪ್ರಪಂಚದ ಸೃಷ್ಟಿ-ಪಾಲನೆ-ಜ್ಞಾನ-ನಿಯಮನ-ಬಂಧನ,
ಎಲ್ಲದರ ಕೂಲಂಕಷ ತಿಳುವಳಿಕೆಯೇ ಮೋಕ್ಷಕ್ಕೆ ಸಾಧನ.
‘ವೇದಾಂಶ್ಚ ಪಞ್ಚರಾತ್ರಾಣಿ
ಸೇತಿಹಾಸಪುರಾಣಕಾನ್।
‘ಜ್ಞಾತ್ವಾ ವಿಷ್ಣುಪರಾನೇವ ಮುಚ್ಯತೇ
ನಾನ್ಯಥಾ ಕ್ವಚಿತ್ ॥೧.೮೪॥
ವೇದ-ಪಂಚರಾತ್ರ-ಇತಿಹಾಸ-ಪುರಾಣ,
ಎಲ್ಲದರ ಪ್ರತಿಪಾದನೆ ಅದು-ನಾರಾಯಣ,
ಈ ಸಮಗ್ರ ತಿಳಿವಿನಿಂದಲೇ ಜೀವಕ್ಕೆ ಬಿಡುಗಡೆಯ ಭಾಗ್ಯ,
ಭಗವಂತನ ಗುಣಾಧಿಕ್ಯ ಜ್ಞಾನದಿಂದ ಹೊರತು-ಇಲ್ಲ ಅನ್ಯ ಮಾರ್ಗ.
‘ಮಾಹಾತ್ಮ್ಯಜ್ಞಾನಪೂರ್ವಸ್ತು ಸುದೃಢಃ
ಸರ್ವತೋsಧಿಕಃ।
‘ಸ್ನೇಹೋ ಭಕ್ತಿರಿತಿ ಪ್ರೋಕ್ತಸ್ತಯಾ
ಮುಕ್ತಿರ್ನಚಾನ್ಯಥಾ ॥೧.೮೫॥
ಏನದು ಭಕ್ತಿ? ಏನದರ ಶಕ್ತಿ,
ಆಚಾರ್ಯರು ಕೊಡುವ ಸ್ಪಷ್ಟ ಉಕ್ತಿ,
ಜ್ಞಾನಪೂರ್ವಕವಾದ ಅಧಿಕ ಸ್ನೇಹ-ಪ್ರೀತಿ,
ಈ ಥರದ ಭಕ್ತಿಯಿಂದಲೇ ಲಭ್ಯವದು ಮುಕ್ತಿ.
‘ತ್ರಿವಿಧಾ ಜೀವಸಙ್ಘಾಸ್ತು ದೇವಮಾನುಷದಾನವಾಃ
।
‘ತತ್ರ ದೇವಾ ಮುಕ್ತಿಯೋಗ್ಯಾ
ಮಾನುಷೇಷೂತ್ತಮಾಸ್ತಥಾ ॥೧.೮೬॥
‘ಮಧ್ಯಮಾ ಮಾನುಷಾ ಯೇ ತು ಸೃತಿಯೋಗ್ಯಾಃ
ಸದೈವ ಹಿ ।
‘ಅಧಮಾ ನಿರಯಾಯೈವ ದಾನವಾಸ್ತು ತಮೋಲಯಾಃ ॥೧.೮೭॥
ಜೀವರಾಶಿಯಲ್ಲಿನ ಪ್ರಭೇದಗಳು ಮೂರು,
ದೇವತೆಗಳು --ಮನುಷ್ಯರು --ದಾನವರು,
ಇವರಲ್ಲಿ ಭಕ್ತಿ ಮಾಡುವವರು ಯಾರ್ಯಾರು?
ದೇವತೆಗಳು ಮತ್ತು ಮನುಷ್ಯೋತ್ತಮರು.
ಮನುಷ್ಯರಲ್ಲಿ ಮೂರು ವಿಧದ ಸ್ತೋಮ,
ಅವೇ ಉತ್ತಮ - ಮಧ್ಯಮ - ಅಧಮ,
ಉತ್ತಮರದು ಸದಾ ಭಕ್ತಿಯ ನಿಯಮ,
ಮಧ್ಯಮರದು ಅದು ದ್ವಂದ್ವದ ಧಾಮ,
ದ್ವೇಷ ಮಾಡುವವನೇ(ರೇ) ಮನುಷ್ಯಾಧಮ,
ಉತ್ತಮರಿಗೆ ಲಭ್ಯವದು-- ಮೋಕ್ಷ,
ಮಧ್ಯಮರದು ನಿತ್ಯಸಂಸಾರಿಗಳ ಕಕ್ಷ,
ಅಧಮರಿಗೆ ಖಚಿತವದು ತಮಸ್ಸಿನ ಭಿಕ್ಷ.
[Contributed by Shri Govind Magal]
No comments:
Post a Comment
ಗೋ-ಕುಲ Go-Kula