Friday 3 November 2017

Bhava Spandana - 29

ಭಾವ ಸ್ಪಂದನ by “ತ್ರಿವೇಣಿ ತನಯ

ಮಾಲಿನ್ಯ -ಸ್ವಭಾವಜನ್ಯ 

ತಡೆಯಬಹುದು ಶಬ್ಧ ಮಾಲಿನ್ಯ,
ತಗ್ಗಿಸಬಹುದು ವಾಯು ಮಾಲಿನ್ಯ,
ನಿಯಂತ್ರಿಸಬಹುದೇ ಮನದ ಮಾಲಿನ್ಯ?
ಕಷ್ಟವೇನೋ;ಅದಾಗಿದ್ದರೆ ಸ್ವಭಾವಜನ್ಯ!

ಅಧಮ-ಮಧ್ಯಮ-ಉತ್ತಮ

ಹರಿಕಾರುಣ್ಯದಿ ಸೃಷ್ಟಿಗೆ ಬಂದೆಲ್ಲಾ ಜೀವಗಳು-ಪ್ರತಿಬಿಂಬ,
ಎಲ್ಲರೊಳು ನಿಂತಾಡುವ ಒಬ್ಬನೇ ಭಗವಂತ -ತಾ ಬಿಂಬ,
ಅಧಮ ಜೀವನಾದವ ಇದ್ಯಾವುದನೂ ನಂಬ,
ಮಧ್ಯಮನು ಒಳ್ಳೆಯದಕೆ ಮಾತ್ರ ಭಗವಂತನೆಂಬ,
ಉತ್ತಮ ಜೀವನು ಸರ್ವತ್ರ ಸರ್ವರಲಿ ಬಿಂಬನ ಕಾಂಬ,
ಯೋಗ್ಯತಾನುಸಾರ ಅನುಭವ ಕೊಡುವ ಅವ ಬಿಂಬ.

ಸ್ವಭಾವಗಳ ಅನಾವರಣ

ಎನಿತು ಚಂದ ಭಗವಂತ ಮಾಡಿಸುವ ಜೀವಸ್ವಭಾವಗಳ ಅನಾವರಣ,
ಎಲ್ಲರಲ್ಲೂ ಅವರವರ ಸ್ವಭಾವದ ಮೆರೆವಣಿಗೆಯೇ ಮುಖ್ಯ ಹೂರಣ,
ಅಬ್ಬಬ್ಬಾ! ಯಾವ ಪರಿಯದು ಮಡಿ ಮೈಲಿಗೆಯ ಹುಚ್ಚು?
ಬಿಂಬಾನುಸಂಧಾನಕ್ಕಿಂತ ಮಡಿ ಮೈಲಿಗೆಯೇ ಒಂದು ಕೈ ಹೆಚ್ಚು!
ಎಂತಾದರೂ ಮಾಡಿಸು ಸ್ವಾಮೀ ಮನ ನಿನ್ನ ಮರೆಯದಿರಲಿ,
ಯಾರಲ್ಲಿ ಏನೇ ನಡೆದರೂ ನನ್ನ ಏಳಿಗೆಗೆ ಎಂಬ ಜ್ಞಾನ ಮೂಡಲಿ.

ಯಾವುದು ಪ್ರಧಾನ-ಸ್ವಭಾವವೇ ಮಾನ

ಅಧಮ ಜೀವಕೆ ಹಣ ಪ್ರಧಾನ,
ಮಧ್ಯಮಗೆ ಗೌರವ ಮತ್ತು ಧನ,
ಉತ್ತಮ ಬಯಸದಿದ್ದರೂ ಲಭ್ಯ ಗೌರವ,
ಫಲ ಸಿಗುವುದು ತಕ್ಕಂತೆ ಜೀವ ಸ್ವಭಾವ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula