ಇತ್ಥಂ
ವಿಚಿಂತ್ಯ ಪರಮಃ ಸ ತು ವಾಸುದೇವ-
ನಾಮಾ ಬಭೂವ
ನಿಜಮುಕ್ತಿಪದಪ್ರದಾತಾ |
ತಸ್ಯಾsಜ್ಞಯೈವ ನಿಯತಾsಥ ರಮಾsಪಿ ರೂಪಂ
ಬಭ್ರೇ
ದ್ವಿತೀಯಮಪಿ ಯತ್ ಪ್ರವದಂತಿ ಮಾಯಾಮ್ ||೧.೬||
ಈ ರೀತಿಯ ಚಿಂತನೆಯಿಂದ ನಾರಾಯಣನಾದ ವಾಸುದೇವ,
ಆ ನಾಮದಿಂದ ತನ್ನವರಿಗೆ ಮುಕುತಿ ದಯಪಾಲಿಸುವ ಮಹಾದೇವ,
ಅವನಾಜ್ಞೆಯಿಂದ ಲಕ್ಷ್ಮಿಯಾದಳು ಮಾಯಾ,
ಪ್ರಕೃತಿ ಪುರುಷರಾದರು ವಾಸುದೇವ-ಮಾಯ.
ಸಙ್ಕರ್ಷಣಶ್ಚ
ಸ ಬಭೂವ ಪುನಃ ಸುನಿತ್ಯಃ
ಸಂಹಾರಕಾರಣವಪುಸ್ತದನುಜ್ಞಯೈವ
|
ದೇವೀ
ಜಯೇತ್ಯನು ಬಭೂವ ಸ ಸೃಷ್ಟಿಹೇತೋಃ
ಪ್ರದ್ಯುಮ್ನತಾಮುಪಗತಃ
ಕೃತಿತಾಂ ಚ ದೇವೀ ||೧.೭||
ಜಗತ್ಪಾಲನೆಗಾಗಿ ನಾರಾಯಣನಾದ ಅನಿರುದ್ಧ,
ಮಾತೆ ಲಕ್ಷ್ಮೀದೇವಿ ಶಾಂತಿ ಎಂಬ ಹೆಸರಿಂದ ಸಿದ್ಧ,
ಇದು ಅವರೇ ಸೃಷ್ಟಿಸಿಕೊಂಡ ಚತುರ್ವ್ಯೂಹ,
ಭಕ್ತರುದ್ಧಾರಕೆ ಸೃಷ್ಟಿಕಾರ್ಯದ ವ್ಯಾಮೋಹ,
ಎಣೆಯಿರದ ಶಕ್ತಿಯಿರುವ ಈ ನಾರಾಯಣ,
ಮಾಡಿದ ಈ ಮೂರ್ತಿಗಳ ಸಾವಿರ ವರ್ಷ ಧಾರಣ,
ಪ್ರದ್ಯುಮ್ನ ರೂಪಿಯಾದ ಭಗವಂತ,
ತನ್ನೊಳಿಹ ಜೀವರ ಅನಿರುದ್ಧಗೆ ಇತ್ತ.
ಸ್ಥಿತ್ಯೈ
ಪುನಃ ಸ ಭಗವಾನನಿರುದ್ಧನಾಮಾ
ದೇವೀ ಚ
ಶಾನ್ತಿರಭವಚ್ಛರದಾಂ ಸಹಸ್ರಮ್ |
ಸ್ಥಿತ್ವಾ
ಸ್ವಮೂರ್ತಿಭಿರಮೂಭಿರಚಿನ್ತ್ಯಶಕ್ತಿಃ
ಪ್ರದ್ಯುಮ್ನರೂಪಕ
ಇಮಾಂಶ್ಚರಮಾತ್ಮನೇsದಾತ್ ||೧.೮||
ಈ ಅನಿರುದ್ಧ ನಾಮಕ ಸ್ವಾಮಿ,
ತನ್ನೊಳಗೆ ಜೀವರ ಹೊತ್ತ ಪ್ರೇಮಿ,
ಆಯಿತು ಬ್ರಹ್ಮ ಪ್ರಾಣ ಶೇಷ ಗರುಡ ರುದ್ರರ ಸೂಕ್ಷ್ಮ ಸೃಷ್ಟಿ,
ನಿರ್ಮಾಣವಾಗಲಿಲ್ಲ
ಇನ್ನೂ ಸ್ಥೂಲ ದೇಹಗಳು ಸಮಷ್ಟಿ.
ನಿರ್ದೇಹಕಾನ್
ಸ ಭಗವಾನನಿರುದ್ಧನಾಮಾ
ಜೀವಾನ್
ಸ್ವಕರ್ಮಸಹಿತಾನುದರೇ ನಿವೇಶ್ಯ |
ಚಕ್ರೇsಥ ದೇಹಸಹಿತಾನ್ ಕ್ರಮಶಃ ಸ್ವಯಮ್ಭು-
ಪ್ರಾಣಾತ್ಮಶೇಷಗರುಡೇಶಮುಖಾನ್
ಸಮಗ್ರಾನ್ ||೧.೯||
ನಾರಾಯಣ-ವಾಸುದೇವ-ಸಂಕರ್ಷಣ-ಪ್ರದ್ಯುಮ್ನ-ಅನಿರುದ್ಧ ಐದು
ರೂಪ,
ಮತ್ತೆ ಪರಮಾತ್ಮನ ಕೇಶವಾದಿ ಹನ್ನೆರಡು ರೂಪ,
ಮತ್ತೆ ಹತ್ತವತಾರ ತಾಳಿದ ಎಣೆಯಿರದ ಭೂಪ .
ಪಞ್ಚಾತ್ಮಕಃ ಸ
ಭಗವಾನ್ ದ್ವಿಷಡಾತ್ಮಕೋsಭೂತ್
ಪಞ್ಚದ್ವಯೀ
ಶತಸಹಸ್ರಪರೋsಮಿತಶ್ಚ |
ಏಕಃ ಸಮೋsಪ್ಯಖಿಲದೋಷಸಮುಜ್ಝಿತೋsಪಿ
ಸರ್ವತ್ರ
ಪೂರ್ಣಗುಣಕೋsಪಿ ಬಹೂಪಮೋsಭೂತ್ ||೧.೧೦ ||
ವಿಶ್ವ ಮೊದಲಾದ ರೂಪಗಳವನವು ಅನೇಕ,
ಅವನೆಲ್ಲಾ ರೂಪಗಳಲ್ಲೂ ಗುಣತಃ ಅವ ಏಕ,
ದೋಷದೂರನಾದ ಗುಣಗಳ
ಮಹಾಸಾಗರ,
ಅನೇಕ ರೂಪಗಳಲ್ಲಿದ್ದರೂ ಏಕನಾಗಿರುವ ವ್ಯಾಪಾರ.
[Contributed by
Shri Govind Magal]
No comments:
Post a Comment
ಗೋ-ಕುಲ Go-Kula